Wednesday, October 2, 2024
Wednesday, October 2, 2024

Shivamogga Police ಟಿಟಿ ವಾಹನ ಬಾಡಿಗೆಗೆ ಕರೆದು ಚಾಲಕನ ಮೇಲೆ ಹಲ್ಲೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Date:

Shivamogga Police ಟೆಂಪೋ ಟ್ರಾವಲರ್ ಬಾಡಿಗೆಗೆ ಬೇಕೆಂದು ಕರೆಯಿಸಿಕೊಂಡು ನಂತರ ಪ್ರಯಾಣಿಸುವಾಗ ಚಾಲಕ ದರ್ಶನ್‌ನನ್ನು ಹೆದರಿಸಿ ಮಾಲಕನನ್ನು ಕರೆಯಿಸು ಎಂದು ಬೆದರಿಸಿ ಆತನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ, ವಾಹನವನ್ನು ಹಾನಿಗೊಳಿಸಿದ ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಜುಲೈ 10ರ ರಾತ್ರಿ ಈ ಘಟನೆ ಸಂಭವಿಸಿದೆ. ಕೆಎ ೦೫ ಎಎಫ್ ೧೪೩೧ರ ಟಿಟಿ ಬಾಡಿಗೆ ಇದೆ ಹೋಗು ಎಂದು ಮಾಲೀಕ ಕಾರ್ತಿಕ್ ಚಾಲಕನಿಗೆ ತಿಳಿಸಿದ್ದಾರೆ. ಅದರಂತೆ ಬೊಮ್ಮನಕಟ್ಟೆಯ ಲಾಸ್ಟ್ ಬಸ್ ಸ್ಟಾಪ್ ನಿಂದ ಬಾಡಿಗೆಯವರನ್ನು ಹತ್ತಿಸಿಕೊಂಡ ಚಾಲಕ ಬಸವಗಂಗೂರಿನ ಮೂಲಕ ಕುಂಸಿ ಕಡೆ ಹೊರಟಿದ್ದನು. ಈ ವೇಳೆ ಟಿಟಿಯಲ್ಲಿದ್ದ ತಂಡ ವಾಹನದ ಮಾಲೀಕನನ್ನು ಕರೆಯಿಸು ಎಂದು ಸೂಚಿಸಿದ್ದಾರೆ.

ಯಾಕೆ ಎಂದು ಪ್ರಶ್ನಿಸಿದ ಟಿಟಿ ಚಾಲಕನಿಗೆ ವೀಲ್ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಚಾಲಕನನ್ನು ಸೀಟಿನಿಂದ ಎಳೆದುಹಾಕಿದ್ದಾರೆ.
ಬಸವನಗಂಗೂರಿನಿಂದ ಕುಂಸಿಗೆ ಹೋಗುವ ದಾರಿ ಮಧ್ಯದಲ್ಲಿ ಬರುವ ಬಾರ್ ಎದುರು ಗಾಡಿ ನಿಲ್ಲಿಸಿ ವಾಹನವನ್ನು ಹಾಳು ಮಾಡಿದ್ದಾರೆ.

ಎಲ್ಲರೂ ಬಾರ್ ಗೆ ಇಳಿದು ಹೋದ ವೇಳೆ ಟಿಟಿ ಚಾಲಕ ಉಪಾಯದಿಂದ ತಪ್ಪಿಸಿಕೊಂಡು ಬಂದು ಮಾಲೀಕನಿಗೆ ವಿಷಯ ತಿಳಿಸಿದ್ದಾರೆ.

Shivamogga Police ಆಗ ಮಾಲೀಕರು ಯಾರು ಬಾಡಿಗೆಗೆ ಕರೆದಿದ್ದರೋ ಅವರಿಗೆ ಕರೆ ಮಾಡಿದಾಗ ಸ್ಚಿಚ್ ಆಫ್ ಬಂದಿದೆ. ವೀಲ್ ರಾಡಿನಿಂದ ನಂತರ ಯುವಕನ ಮೇಲೆ ಹಲ್ಲೆ ನಡೆಸಿದ ೧೦-೧೨ ಜನ ಅಪರಿಚಿತ ಯುವಕರ ವಿರುದ್ಧ ಚಾಲಕ ದರ್ಶನ್ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...