Friday, October 4, 2024
Friday, October 4, 2024

Klive News Special Article ಶಿವಮೊಗ್ಗಕ್ಕೆ ಪ್ರಗತಿಯ ಸ್ಪರ್ಶ ನೀಡಿದ -ಬಿ.ವೈ.ರಾಘವೇಂದ್ರ

Date:

ಲೇಖಕರು:ಲಕ್ಷೀನಾರಾಯಣ ಕಾಶಿ. ಹಿರಿಯ ಸಾಹಿತಿ ಶಿವಮೊಗ್ಗ.

Klive News Special Article ಲೋಕಸಭೆ ಚುನಾವಣೆ ಮುಗಿದಿದೆ . ಅತಿ ದೀರ್ಘಾವಧಿ ಚುನಾವಣಾ ಪ್ರಕ್ರಿಯೆ ದೊಡ್ಡ ಆಪತ್ತುಗಳಿಲ್ಲದೆ ಸುಗಮವಾಯಿತು. ಕರ್ನಾಟಕದಲ್ಲಿ 4-6 ಸೀಟ್ ಕಡಿಮೆಯಾದರೂ ಶ್ರೀ ವಿಜೇಂದ್ರರ ನೇತೃತ್ವದ ನೀ ಚೆನ್ನಾಗಿಯೇ ಫಲಿತಾಂಶ ಬಂದಿದೆ. ಶಿವಮೊಗ್ಗ ನಿರೀಕ್ಷಿತ ರೀತಿಯಲ್ಲಿ ಬಿ ವೈ ರಾಘವೇಂದ್ರ ನಾಲ್ಕನೇ ಬಾರಿ ಚುನಾಯಿತರಾದರು. ಜಾತಿ ಲೆಕ್ಕಾಚಾರ, ಗ್ಯಾರೆಂಟಿ ಬೆಂಬಲ, ಪಕ್ಷದೊಳಗೆ ಭಿನ್ನರಾಗ ಎತ್ತಿದ ಹಿರಿಯ ಮುಖಂಡ ಹೀಗೆ ಹಲವು ರೀತಿಯ ಅಡಚಣೆಗಳಿದ್ದರೂ ರಾಘಣ್ಣನವರ ಅಪ್ರತಿಮ ಸಾಧನಾ ಬಲ ಜಿಲ್ಲೆಯ ಜನರ ಬೆಂಬಲದ ಮುಂದೆ ಎಂಥ ಅಡ್ಡ ಗೋಡೆ ನಿಲ್ಲಲಾಗದೆ ಹೋದವು.

ಕಾರಣ ಇಷ್ಟೇ ಬಡವ ಭೇದ ಭಾವವಿಲ್ಲದೆ ಎಲ್ಲಾ ವರ್ಗದವರ ಧ್ವನಿಯಾಗಿ ಜಿಲ್ಲೆಯ ಅಗತ್ಯತೆಗಳ ಬಗ್ಗೆ ಚಿಂತನೆ ಇಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದು, ಅಷ್ಟೋತ್ತರಗಳಿಗೆ ಕಿವಿ ಕೊಡದೆ, ಸಂಘಟನೆಯ ಶಕ್ತಿ, ಕ್ಷೇತ್ರಾದ್ಯಂತ ಬೆಳೆಸಿ ತೋರಿಸಿದ್ದು ಎಲ್ಲವೂ ರಾಘಣ್ಣನವರನ್ನು ಅಜೇಯರನ್ನಾಗಿಸಿತು.

ಈ ಚುನಾವಣೆಯ ವಿಶೇಷತೆ ಎಂದರೆ ಬಿಜೆಪಿ (ರಾಘಣ್ಣ) ಎದುರು ಬಿಜೆಪಿ ಕಟ್ಟಿದ ಈಶ್ವರಪ್ಪನವರೇ ಒಂದು ಅಡ್ಡಿಯಾದರು ಸ್ವತಃ ಮಾಜಿ ಮುಖ್ಯಮಂತ್ರಿ ಮಗಳಾಗಿ , ತಮ್ಮ ಮಿನಿಸ್ಟರಾಗಿ ಅಧಿಕಾರ ಹೊಂದಿದ್ದ ಪಕ್ಷದ ಮುಖಂಡರಾಗಿದ್ದ ಗೀತಾ, ಅವರ ಪ್ರಬಲ ಪೈಪೋಟಿ ಜಾತಿ ಸಮೀಕರಣದಲ್ಲೂ ಹಿಂದುಳಿದವರು, ದೀವರು ಮುಸ್ಲಿಂ ಮತಗಳಿಂದ ಕಾಂಗ್ರೆಸ್ ಅಧಿಕಾರ ಬಳಸಿ ಗೆಲ್ಲಬಹುದೆಂಬ ಭ್ರಮೆಯಾಗಿತ್ತು. ಈಶ್ವರಪ್ಪನವರ ಹಿಂದೆ ಬೆಂಬಲಿಗರ ಅಬ್ಬರ ಸಂಘಟನೆ ಬಲ ಸಿಗುತ್ತದೆ ಎಂಬುದು ಎಲ್ಲವೂ ಹುಸಿಯಾಯಿತು.

ಸನ್ಮಾನ್ಯ ಮೋದಿ ಅವರ ಭೇಟಿ ಹಲವು ಕಡೆ ಬಿಜೆಪಿ ಗೆಲ್ಲಲು ಕಾರಣವಾಗಿದ್ದ ಶಿವಮೊಗ್ಗ ಕ್ಷೇತ್ರಕ್ಕೆ ಅದರಿಂದ ವಿಶೇಷ ಬಲ ಅಗತ್ಯವು ಇದೆ. ಯಾಕೆಂದರೆ ಇಲ್ಲಿ ರಾಘಣ್ಣನವರ ನಡೆ-ನುಡಿ ಕಾರ್ಯ, ಸಂಘಟನಾ ಚಾತುರ್ಯ ಎದುರಿಸಲು ಸಾಧಾರಣದವರಿಗೆ ಸಾಧ್ಯವಿರಲಿಲ್ಲ ‌. ಒಂದು ಕಾಲದಲ್ಲಿ ಬಂಗಾರಪ್ಪನವರನ್ನು ಸೋಲಿಸಿದ ಸರದಾರ ನಮ್ಮ ರಾಘಣ್ಣ.

ಶಿವಮೊಗ್ಗ ಕ್ಷೇತ್ರದಲ್ಲಿ ಬೇರೆ ಯಾವ ಸೂತ್ರ ನಡೆಯಲಿಲ್ಲ. ಹಿಂದಿನ ಬಾರಿ ಅಷ್ಟೇ ಸರಾಸರಿ ಎಷ್ಟು ಮತಗಳನ್ನು ಬಿಜೆಪಿ ಪಡೆದಿದೆ. ಕುರುಬರು ಮುಸ್ಲಿಂ ಧೀವರು ಮತ ಬಿಜೆಪಿಗೆ ಬರುವುದಿಲ್ಲ ಎಂಬ ಮಾತೇ ಸುಳ್ಳಾಯಿತು.

ಗೀತಾ ಮಧು ಅವರ ಸ್ವಕ್ಷೇತ್ರ ಸೊರಬದಲ್ಲೇ ಬಿಜೆಪಿ ಜಾಸ್ತಿ ಮತಗಳಿಸಿತು . ಧೀವರ ಜನಸಂಖ್ಯೆ ಜಾಸ್ತಿ ಇರುವ ಸರ್ಕಾರದಲ್ಲೂ ಬಿಜೆಪಿ ಲೀಡ್ ಪಡೆದಿದ್ದು ನೋಡಿದರೆ , ರಾಘಣ್ಣನವರ ಕ್ಷೇತ್ರದಾದ್ಯಂತ ಇರುವ ಬಿಗು ಹಿಡಿತ ಸಾಬೀ ತಾಗುತ್ತದೆ.

ಕಾರ್ಯವೈಖರಿ, ಕರ್ತವ್ಯ ನಿಷ್ಠೆ, ಛಲ ಬಿಡದ ನಡೆಗಳು ಮಾನ್ಯ ಶ್ರೀ ಯಡಿಯೂರಪ್ಪ ನವರದ್ದಾದರೂ, ರಾಘಣ್ಣನವರ ನಡೆಯೇ ಬೇರೆ. ಜಿಲ್ಲೆಗೆ ಅಗತ್ಯ ಇರುವ ಅಭಿವೃದ್ಧಿಯ ಅನ್ವೇಷಣಾ ಶಕ್ತಿ ಬೇರೆ. ಹಾಗಾಗಿ ರಾಘಣ್ಣ ವೈಯಕ್ತಿಕ ಮನಸ್ಸೇ ಹೆಚ್ಚು ಪಾಲು ಜಯತಂದಿದೆ. ಮೋದಿ ಬಲ, ಯಡಿಯೂರಪ್ಪನವರ ಬೆಂಬಲಗಳೆಲ್ಲವೂ ಸಹಾಯಕ ವಿನಹ ಅದೇ ಕಾರಣವಲ್ಲ. ವೈಯಕ್ತಿಕವಾಗಿ ರಾಘಣ್ಣ ಗಳಿಸಿದ ಜನರೊಲುಮೆಯೇ ಮುಖ್ಯ ಕಾರಣ ಎಂಬುದನ್ನು ಗಮನಿಸಬೇಕು.

ಈ ಚುನಾವಣೆ ಹಿರಿಯ ರಾಜಕಾರಣಿ, ಅಧಿಕಾರಸ್ತರು, ಜಾತಿ ಬೆಂಬಲ ಜಾಸ್ತಿ ಇರುವವರು ಎಂಬುದು ನೋಡದೆ ಕೇವಲ ರಾಘಣ್ಣ ನವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಶಕ್ತಿಯಾಗಿ ನಿಂತವು. ಇದು ಕಲಿಯುವ ಮನಸ್ಸುಗಳಿಗೆ ಒಳ್ಳೆಯ ಪಾಠವು ಹೌದು.

Klive News Special Article ಬಿಜೆಪಿ ರಾಷ್ಟ್ರಮಟ್ಟದಲ್ಲಿ ಹೆಚ್ಚು ಸೀಟು ಪಡೆಯುಲಿಲ್ಲ. ಅದಕ್ಕೆ ಕಾರಣ ಹಲವಾರು ಇರಬಹುದು. ನನ್ನ ದೃಷ್ಟಿಯಲ್ಲಿ ಮುಖ್ಯವಾಗಿ ಬಿಜೆಪಿಯಲ್ಲಿ ನಾಯಕರು, ಮರಿ ನಾಯಕರು, ಪುಡಿ ನಾಯಕರು ಗಳು ಜಾಸ್ತಿಯಾಗಿ ಕಾರ್ಯಕರ್ತರ ಪಡೆ ಕಡಿಮೆಯಾಗಿದೆ . ರಾಘಣ್ಣನವರು ಜಿನಾನುರಾಗಿದ್ದಕ್ಕೆ ಮುಖ್ಯ ಕಾರಣ ಅವರು ಮೀಡಿಯಾ ಬಳಸಿ ಕಾಲಕಾಲಕ್ಕೆ ತಮ್ಮ ಕಾರ್ಯವೈಖರಿ ಮೋದಿಜೀಯವರ ಕನಸಿನ ಕಾರ್ಯಕ್ರಮಗಳು , ಯೋಜನೆಗಳು ಜನ ಸ್ಪೂರ್ತಿ ಕಲ್ಯಾಣಗಳ ಬಗ್ಗೆ ಜನರಿಗೆ ತಿಳಿಸುತ್ತಿದ್ದರು. ಆದರೆ ಹೆಚ್ಚಿನ ಕಡೆ ಕಾರ್ಯಕರ್ತರು ಮೋದಿ ಕಾರ್ಯಕ್ರಮಗಳನ್ನ ಕನಸು ಕಾಮಗಾರಿಗಳನ್ನ ಜನರಿಗೆ ತಲುಪಿಸುವ ಕಾರ್ಯಕರ್ತರ ಪಡೆ ಕಡಿಮೆ ಆದದ್ದೆ ಕಾರಣ.

ಮುಖ್ಯವಾಗಿ ಒಬ್ಬ ಪಿಎಮ್ ಮಾಡಲಾರದ ಕಾರ್ಯಗಳನ್ನ ರಾಘಣ್ಣ ಸಾಧಿಸಿದರು. ರಸ್ತೆ ನೀರು ಮುಂತಾದ ಅಭಿವೃದ್ಧಿ ಜೊತೆ ಪ್ರವಾಸೋದ್ಯಮ ವಿಮಾನ ರೈಲು ಸಂಪರ್ಕ ಸೇತುವೆ ಮುಂತಾದ ಹಲವು ದೊಡ್ಡ ಕಾರ್ಯ ಮಾಡಿ ಸೈ ಎನಿಸಿಕೊಂಡರು.

ಮಾನ್ಯ ಮೋದಿಜಿಯವರ ಕನಸಿನ ಭಾರತದ ಕಲ್ಪನೆ ಜನರಿಗೆ ತಲುಪುವಲ್ಲಿ ರಾಘಣ್ಣ ಯಶಸ್ವಿಯಾದದ್ದು ಅವರ ಗೆಲುವಿಗೊಂದು ಕಾರಣ.
ಚುನಾವಣೆ ಗೆದ್ದಾಯಿತು. ಬಿಜೆಪಿ ಸ್ವಯಂ ಬಲದಿಂದ ರಾಷ್ಟ್ರ ಆಳುವಾಗಿನ ಮಾತು.

ಈಗ ಸಮ್ಮಿಶ್ರ ಸರ್ಕಾರದ ನಡಾವಳಿ ಬೇರೆ. ಈಗ ಮಿನಿಸ್ಟರ್ ಗಳು ಮನವಲಿಸಿದರೆ ಪ್ರಾಜೆಕ್ಟ್ ಸ್ಯಾಂಕ್ಷನ್ ಗಳು ಕಷ್ಟ . ಜೊತೆಗೆ ಜನ ಈಗ ರಾಘಣ್ಣನವರಿಂದ ಇನ್ನೂ ಹೆಚ್ಚು ನಿರೀಕ್ಷಿಸುತ್ತಾರೆ . ಸಾಧ್ಯಸಾಧ್ಯತೆಗಳ ಅರಿವು ಜನರಿಗಿಲ್ಲ . ರಾಘಣ್ಣ ಮನಸ್ಸು ಮಾಡಿದರೆ ಸಿಗಬಹುದೆಂಬ ಭ್ರಮೆಯಲ್ಲಿ ಜನರಿರುತ್ತಾರೆ. ಸ್ಥಳೀಯ ಸರ್ಕಾರ ಬೆಂಬಲಿಸುವುದಿಲ್ಲ.

ಈ ಎಲ್ಲಾ ಸಂಕಟಗಳ ನಡುವೆ ರಾಘಣ್ಣ ಹೆಚ್ಚು ಸಾಧನೆ ಮಾಡಿ ಜನಾನುರಾಗಿಯಾಗಿ ಮುಂದುವರಿಯಬೇಕು.

ಸಂಘಟನೆಯ ಬಲ, ಕ್ರಿಯಾಶೀಲ ಸನ್ನಡತೆ, ಅಭಿವೃದ್ಧಿಪರ ಚಿಂತನೆ ಇರುವ ಸಾಧಕತನ ಇದ್ದವರು ಎಷ್ಟೇ ಅಡ್ಡಿ ಆತಂಕಗಳಿದ್ದರೂ ಗೆಲ್ಲುತ್ತಾರೆ ಎನ್ನಲು ರಾಘಣ್ಣನವರ ಗೆಲುವೇ ಸಾಕ್ಷಿ .

ಲಕ್ಷ್ಮೀನಾರಾಯಣ ಕಾಶಿ
ನಿರ್ದೇಶಕರು
ಜನ ಶಿಕ್ಷಣ ಸಂಸ್ಥಾನ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...