World Environment Day ಶಾಲಾ ಶೈಕ್ಷಣಿಕ ವರ್ಷವು ಮಕ್ಕಳಲ್ಲಿ ನವಚೇತನ ಮೂಡಲಿ, ಶೈಕ್ಷಣಿಕ ಚಟುವಟಿಕೆಗಳು ಮಕ್ಕಳ ಮನಸ್ಸಿನಲ್ಲಿ ಅರಳುವಂತಾಲಿ ಎಂದು ಟೈಮ್ಸ್ ಸ್ಪೂರ್ತಿ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲ ಕೆ. ಚೇತನ್ ಮಕ್ಕಳನ್ನು ಹರಸಿ ಸ್ವಾಗತಿಸಿ ಬರಮಾಡಿಕೊಂಡರು.
ಅವರು ಭದ್ರಾವತಿ ನಗರದ ಸಿದ್ದಾಪುರ ಬೈಪಾಸ್ ಬಿ.ಹೆಚ್.ರಸ್ತೆಯಲ್ಲಿರುವ ಶಾಲಾ ಪ್ರಾರಂಭೋತ್ಸವವು ಸಡಗರ ಸಂಭ್ರಮದಿಂದ ಆಚರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ ಶಾಲೆಯ ನೂತನ ಆಡಳಿತ ಮಂಡಳಿಯು ಶಾಲಾ ಕಟ್ಟಡವನ್ನು ವಿಶಿಷ್ಟವಾಗಿ ನೋಡುಗರನ್ನು ಆಕರ್ಷಿಸುವಂತೆ ಉತ್ತಮ ಪರಿಸರದಲ್ಲಿ ವಿದ್ಯಾ ಸಂಸ್ಥೆಯನ್ನು ಅಭಿವೃದ್ದಿ ಪಡಿಸಿದೆ. ವಿನೂತನ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಮಕ್ಕಳ ಬುದ್ದಿ ವಿಕಾಸಕ್ಕೆ ಹಾಗೂ ಜ್ಞಾನಾರ್ಜನೆಗಾಗಿ ಹಲವು ಅಭಿವೃದ್ದಿ ಯೋಜನೆಗಳನ್ನು ಶಿಸ್ತಿನಿಂದ ಆಯೋಜಿಸಿದೆ. ಸುತ್ತಮುತ್ತಲ ಪ್ರದೇಶದ ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
World Environment Day ಶಿಕ್ಷಣ ಸಂಯೋಜಕಿ ಬಿ.ಮಮತಾ ನವೀನ್ ಶಾಲಾ ಮಕ್ಕಳ ಚಟುವಟಿಕೆಗಳ ಅರಿವು ಮೂಡಿಸಿದರು. ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿ ಹಬ್ಬದ ವಾತಾವರಣ ಮೂಡಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಶಿಕ್ಷಕಿಯರು ಸಿಬ್ಬಂದಿಗಳು ಭಾಗವಹಿಸಿದ್ದರು. ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ನೆರವೇರಿದರೆ ಶಿಕ್ಷಕಿಯರಿಂದ ಸ್ವಾಗತ, ವಂದನೆ, ನಿರೂಪಣೆ ನಡೆಯಿತು.
World Environment Day ಶಾಲಾ ಶೈಕ್ಷಣಿಕ ವರ್ಷವು ಮಕ್ಕಳ ಮನಸ್ಸನ್ನು ಅರಳಿಸಲಿ- ಚೇತನ್
Date:
