Teachers And Graduates Election ವಿಧಾನ ಪರಿಷತ್ನ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಂತಿಯುತ ಮತದಾನ ನಡೆದಿದ್ದು ಪದವೀಧರ ಕ್ಷೇತ್ರದಲ್ಲಿ ಶೇ. 85.05%ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಶೇ. 85.12%ರಷ್ಟು ಮತದಾನವಾಗಿದೆ.
ಉಭಯ ಕ್ಷೇತ್ರಗಳಿಗೂ ಅರ್ಹ ಮತದಾರರು ಸೋಮವಾರ ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಪದವೀಧರರ ಕ್ಷೇತ್ರಕ್ಕೆ ಎರಡೂ ಪಕ್ಷಗಳಿಂದ ಬಂಡಾಯವೂ ಸೇರಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದು, ಕಡೆಯ ಕ್ಷಣದವರೆಗೂ ಮತದಾರರ ಮನಗೆಲ್ಲಲು ಎಲ್ಲರೂ ಹರಸಾಹಸ ಪಡುತ್ತಿದ್ದುದು ಕಂಡು ಬರುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಪರವಾರಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಮತ್ತು ಎನ್ಡಿಎ ಬೆಂಬಲಿತ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ ಮತಗಟ್ಟೆ ಆವರಣದ ಹೊರಗೆ ಬಂದು ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಕೋರಿಕೊಂಡರು.
Teachers And Graduates Election ತಾಲೂಕಿನಲ್ಲಿ ಪದವೀಧರರ ಕ್ಷೇತ್ರಕ್ಕೆ 1607 ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇದರಲ್ಲಿ 1607 ಮತಗಳು ಚಲಾವಣೆಗೊಂಡಿದ್ದು, ಶೇ. ಶೇ86-02%. ರಷ್ಟು ಮತದಾನ ನಡೆದಿದ್ದರೆ, ಶಿಕ್ಷಕರ ಕ್ಷೇತ್ರದಲ್ಲಿ 87.06 ಮತದಾರರಿದ್ದು 449 ಮತಗಳು ಕಣದಲ್ಲಿರುವ ಅಭ್ಯರ್ಥಿಗಳಿಗೆ ಬಿದ್ದಿದ್ದು, ಶೇ. 95.12%ರಷ್ಟು ಮತದಾನ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಆರ್. ಯತೀಶ್ ತಿಳಿಸಿದ್ದಾರೆ.
ಪರಿಷತ್ನ ಎರಡು ಸ್ಥಾನಗಳ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಗವು ಸಾಗರ ಪೇಟೆಯಲ್ಲಿ 2 ಹಾಗೂ ತಾಲೂಕಿನ ಕಾರ್ಗಲ್ ಮತ್ತು ಆನಂದಪುರದಲ್ಲಿ ತಲಾ ಒಂದು ಮತಗಟ್ಟೆಯನ್ನು ತೆರೆದು ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು.
Teachers And Graduates Election ಪದವಿಧರರ ಕ್ಷೇತ್ರ ಚುನಾವಣೆ: ಸಾಗರದಲ್ಲಿ ಶೇ 85.05 ಮತದಾನ
Date: