Tuesday, October 1, 2024
Tuesday, October 1, 2024

Social Welfare Department ಪತಿ ಆತ್ಮಹತ್ಯೆ ಸಿಐಡಿ ಮೂಲಕ ತನಿಖೆ ನಡೆಸಿ, ನ್ಯಾಯ ಹೊರಬರಲಿ – ಮೃತ ಚಂದ್ರಶೇಖರ್ ಪತ್ನಿ ಕವಿತಾ ಆಗ್ರಹ

Date:

Department of Social Welfare ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಅವರು ತುಂಬಾ ಪ್ರಾಮಾಣಿಕರು. ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಆತ್ಮಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ, ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಚಂದ್ರಶೇಖರನ್ ಪತ್ನಿ ಕವಿತ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವೆಂಕಟಗಿರಿ ದಳವಾಯಿ ಅವರು ಚಂದ್ರಶೇಖರನ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು
ಶಿವಮೊಗ್ಗದ ಕೆಂಚಪ್ಪ ಬಡಾವಣೆಯ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪತಿ ಇಲಾಖೆಯಲ್ಲಿ ತುಂಬಾ ಪ್ರಾಮಾಣಿಕರು. ಅವರು ಯಾವುದೇ ಹಣ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಸರ್ಕಾರ ಈಗ ನಮ್ಮ ಪತಿ ಆತ್ಮಹತ್ಯೆಯ ವಿಚಾರವನ್ನು ಸಿಐಡಿಗೆ ವಹಿಸಿದೆ ಎಂದರು.
ನಮಗೆ ಸರ್ಕಾರದ ಮೇಲೆ ಪೂರ್ಣ ವಿಶ್ವಾಸವಿದೆ. ಸೂಕ್ತ ತನಿಖೆ ನಡೆಸಿ, ಸತ್ಯಾಂಶವನ್ನು ಹೊರ ತರಬೇಕು. ಕಚೇರಿಯಲ್ಲಿ ಒತ್ತಡ ಇತ್ತು ಎಂದು ನಮ್ಮ ಮನೆಯವರು ಎಂದೂ ನಮ್ಮ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಅವರ ಕಚೇರಿಯ ಇತರ ಸಿಬ್ಬಂದಿ ಚಂದ್ರಶೇಖರನ್ ಅವರಿಗೆ ಒತ್ತಡ ಇದೆ ಎಂದು ಹೇಳುತ್ತಿದ್ದರು. ನಮ್ಮ ಮನೆಯವರು ಮೂರು ಜನ ಅಧಿಕಾರಿಗಳ ವಿರುದ್ದ ತಮ್ಮ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾರೆ. ಆ ಮೂರು ಜನರ ವಿರುದ್ದ ನಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ನಮ್ಮ ಪತಿ ಎಂಪಿಎಂನಲ್ಲಿ ಕೆಲಸ ಮಾಡುವಾಗ 5 ಸಾವಿರ ಜನರ ಅಕೌಂಟ್ ನೋಡಿಕೊಂಡವರು ಎಂದು ತಿಳಿಸಿದರು.
ಅವರು ಪ್ರಾಮಾಣಿಕರಲ್ಲದೇ ಹೋಗಿದ್ರೆ ಮತ್ತೆ ಅವರಿಗೆ ನಿಗಮದಲ್ಲಿ ಕೆಲಸ ಸಿಗುತ್ತಿರಲಿಲ್ಲ. ಅಂದು ನಮ್ಮ ಸಂಬಂಧಿಕರೊಬ್ಬರು ಮಾಚೇನಹಳ್ಳಿಯಲ್ಲಿ ತೀರಿಕೊಂಡಿದ್ದರು. ಅಲ್ಲಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಅವರು ನೇಣಿಗೆ ಶರಣಾಗಿದ್ದರು. ಅವರು ಹಣ ಮಾಡುವವರಾಗಿದ್ರೆ, ನಾನು ಕೆಲಸಕ್ಕೆ ಹೋಗಬೇಕಾಗುರುತ್ತಿರಲಿಲ್ಲ. ನಾನು ಸಹ ಅಂಗವಿಕಲರ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮಗೆ ಇಬ್ಬರು ಮಕ್ಕಳು. ಅವರನ್ನು ಓದಿಸುವ ಜವಾಬ್ದಾರಿ ನನ್ನ ಮೇಲೆ ಇದೆ ಎಂದರು.

Social Welfare Department ಸಚಿವ ನಾಗೇಂದ್ರ ಅವರ ವಿಶೇಷ ಕರ್ತವ್ಯಾಧಿಕಾರಿ ವೆಂಕಟಗಿರಿ ದಳವಾಯಿ ಅವರು ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಪತ್ನಿ ಕವಿತಾ ಹಾಗೂ ಅವರ ಕುಟುಂಬದವರ ಜೊತೆ ಮಾತುಕತೆ ನಡೆಸಿದರು. ಚಂದ್ರಶೇಖರನ್ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...