ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ಸೇರಿದಂತೆ ಬಾಲ್ಯದಲ್ಲಿ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗೆ ತಾಯಿಯ ಎದೆಹಾಲು ರಾಮಬಾಣ. ಇದರ ಮಹತ್ವ ಅರಿತಿರುವ ರಾಜ್ಯ ಸರ್ಕಾರವು ‘ನೋರಾ ಹೆಲ್ತ್ ಕೇರ್’ಯೋಜನೆ ಮೂಲಕ ಕೇರ್ ಕಂಪ್ಯಾನಿಯನ್ ಪ್ರೋಗ್ರಾಮನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ.
ವಿಮ್ಸ್ ನಿರ್ದೇಶಕರಾದ ಗಂಗಾಧರ ಗೌಡ, ಅಧೀಕ್ಷಕ ಅಶ್ವಿನ್ ಕುಮಾರ್ ಸಹಕಾರದೊಂದಿಗೆ ವಿಮ್ಸ್ ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ದುರ್ಗಪ್ಪ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಸುಮನ್ ಗಡ್ಡಿ ಬಳಗದ ತಂಡವು ಕೇರ್ ಕಂಪ್ಯಾನಿಯನ್ ಪ್ರೋಗ್ರಾಮ್ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ತಾಯಿಂದಿರು ಸಕಾಲಿಕ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ತಮ್ಮ ಮಕ್ಕಳಿಗೆ ಎದೆಹಾಲು ಕೊಡುವಲ್ಲಿ ವಿಫಲರಾಗಿ ನವಜಾತ ಶಿಶುಗಳ ಸಾವಿಗೆ ಕಾರಣವಾಗುತ್ತಿದ್ದಾರೆ. ಎದೆ ಹಾಲು ಮತ್ತು ಎದೆಹಾಲು ಕೊಡುವ ಬಗ್ಗೆ ತಾಯಂದಿರಲ್ಲಿ ಇರುವ ಗೊಂದಲ ಹೋಗಲಾಡಿಸಿ, ಎದೆ ಹಾಲು ಕುಡಿಸಲು ನಿರಂತರ ಜಾಗೃತಿ ಮೂಡಿಸುವ ಕೆಲಸ ಬಳ್ಳಾರಿ ವಿಮ್ಸ್ ಸೇರಿದಂತೆ ರಾಜ್ಯದ 78 ಕಡೆಗಳಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ರಾಜ್ಯದ ಪ್ರತಿಯೊಂದು ಜಿಲ್ಲಾಸ್ಪತ್ರೆ, ದೊಡ್ಡ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಎದೆಹಾಲಿನ ಮಹತ್ವವನ್ನು ಬಾಣಂತಿಯರಿಗೆ ನೀಡಲಾಗುತ್ತಿದೆ.
ಮಗುವಿನ ಹುಟ್ಟಿನಿಂದ 6 ತಿಂಗಳ ವರೆಗೆ ಕೇವಲ ತಾಯಿಯ ಎದೆ ಹಾಲನ್ನಷ್ಟೇ ನೀಡಬೇಕು. ಎರಡು ಗಂಟೆಗೊಮ್ಮೆ ಅಂದಾಜು 15-20 ನಿಮಿಷಗಳ ಎದೆಹಾಲು ಉಣಿಸಬೇಕು. ಇನ್ನು ಆರು ತಿಂಗಳ ನಂತರದಲ್ಲಿ ತಾಯಿಯ ಎದೆಹಾಲಿನೊಂದಿಗೆ ಮೃದು ಆಹಾರ ನೀಡಬೇಕು. ಯಾವುದೇ ಕಾರಣಕ್ಕೂ 2 ವರ್ಷದವರೆಗೆ ತಾಯಿಯ ಎದೆಹಾಲು ಮಗುವಿಗೆ ಕೊಡುವುದನ್ನು ನಿಲ್ಲಿಸಬಾರದು ಎಂಬುದು ಮಕ್ಕಳ ತಜ್ಞರ ಅಭಿಪ್ರಾಯವಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.