Karnataka Legislative Council Elections ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಡಾ.ಅರುಣ್ ಹೊಸಕೊಪ್ಪ ಸ್ಪರ್ಧೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಡಾ.ಅರುಣ್ ಹೊಸಕೊಪ್ಪ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಶಿಕ್ಷಕನಾಗಿರುವುದರಿಂದ ಸಹಜವಾಗಿಯೇ ಶಿಕ್ಷಕರ ಸಮಸ್ಯೆಗಳು ಏನು ಎಂಬುವುದನ್ನು ಅರಿತುಕೊಂಡಿರುವೆ. ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಸ್ಪರ್ಧಿಸಬೇಕು. ಅದು ನ್ಯಾಯ ಯುತವಾದದ್ದು ಶಿಕ್ಷಕ ಮತದಾರರು ಶಿಕ್ಷಕರಲ್ಲದ ವರನ್ನು ಆಯ್ಕೆ ಮಾಡದಿ ರುವಂತೆ ಮನವಿ ಮಾಡಿದರು.
Karnataka Legislative Council Elections ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಡಾ.ಅರುಣ್ ಹೊಸಕೊಪ್ಪ ಸ್ಪರ್ಧೆ ನಾನು ಶಿಕ್ಷಕನಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದೇನೆ. ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದೇನೆ. ಈ ಹಿಂದೆ 2012 ಮತ್ತು 2018ರಲ್ಲಿ ಶಿಕ್ಷಕರ ಕ್ಷೇತ್ರ ದಿಂದ ಸ್ಪರ್ಧೆ ಮಾಡಿ, ಗಮನಾರ್ಹ ಮತಗಳನ್ನು ಪಡೆದು ಕೊಂಡಿದ್ದೆ ಎಂದರು.