ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ನಡೆದು 25 ನೂತನ ಸದಸ್ಯರು ಆಯ್ಕೆಯಾಗಿದ್ದಾರೆ. ಪಕ್ಷಗಳ ಬಲಾಬಲ,ಸೋಲು, ಗೆಲುವಿನ ಕುರಿತು ಚರ್ಚೆಯಾಗುತ್ತಿದೆ. ಆದರೆ, ಇಡೀ ಚುನಾವಣೆ ನಡೆದ ರೀತಿಗೆ ಪ್ರಜ್ಞಾವಂತರು ತೀವ್ರ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಪ್ರಜಾಪ್ರಭುತ್ವದ ಬಹುದೊಡ್ಡ ವ್ಯಂಗ್ಯ ಎನ್ನುತ್ತಿದ್ದಾರೆ.
ಪ್ರಗತಿಪರರ, ಚಿಂತಕರು, ಸಾಹಿತಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ ತಜ್ಞರು ತುಂಬಿರಬೇಕಿದ್ದ ಮೇನ್ ಮನೆಗೆ ಅಭ್ಯರ್ಥಿಗಳು ಮೌಢ್ಯ ಬಿತ್ತಿ ಆ ಮೂಲಕ ಆಯ್ಕೆ ಆಗುತ್ತಿರುವುದು ವಿಪರ್ಯಾಸ. ಮತದಾರರನ್ನು ದೇವರು, ಧರ್ಮ, ನಂಬಿಕೆ ಹೆಸರಲ್ಲಿ ಬ್ಲಾಕ್ಮೇಲ್ ಮಾಡಲಾಗುತ್ತಿದೆ. ಹಣದ ಕವರ್ ನೊಂದಿಗೆ ದೇವರ ಫೋಟೋ, ಕುಂಕುಮ, ಹಾಲಿನ ಪೊಟ್ಟಣಗಳ ಮೇಲೆ ಆಣೆ ಮಾಡಿಸಿಕೊಳ್ಳುತ್ತಾರೆ. ಇವೆಲ್ಲವೂ ಗೊತ್ತಿದ್ದರೂ ವ್ಯವಸ್ಥೆ ಬದಲಾವಣೆಗೆ ಯಾರೂ ಮುಂದಾಗದಿರುವುದು ಪ್ರಜಾಪ್ರಭುತ್ವದ ದುರಂತ ಎನ್ನುತ್ತಿದ್ದಾರೆ.
ಬಹಿರಂಗವಾಗಿಯೇ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಪ್ರಮುಖ ರಾಜಕಾರಣಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಕಾಗೇರಿ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಅವರು ಇಂಥ ಮೇಲ್ಮನೆ ಅಸ್ತಿತ್ವದಲ್ಲಿರಬೇಕಾದ ಎಂಬ ಜಿಜ್ಞಾಸೆಯನ್ನು ವ್ಯಕ್ತಪಡಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.