Saturday, October 5, 2024
Saturday, October 5, 2024

Klive Special Article ದೀನರಕ್ಷಕನಿಗೆ ನನ್ನ ಮತ…ಅಶ್ವಿನಿ ದೇವತೆಗಳೇ ಅಸ್ತು ಎನ್ನಿ

Date:

ಲೇ; ಪ್ರವೀಣ ಜವಳಿ

Klive Special Article ಇಂದಿನ ಚುನಾವಣೆಯಲ್ಲಿ ಚಲಾವಣೆ ಆಗುವುದು ನನ್ನ ಮತ,
ಅಭ್ಯರ್ಥಿಗಳ ಆಮೀಶಕ್ಕೆ ಬಲಿಯಾಗದು ನನ್ನ ಮತ,
ಹುಸಿ ಭರವಸೆಗಳಿಗೆ ಬಗ್ಗದು ನನ್ನ ಮತ,
ಅಸ್ತು ಅನ್ನಿ… ಅಶ್ವಿನೀ ದೇವತೆಗಳೇ… ಅಸ್ತು ಅನ್ನಿ.

ಹೆಂಡಕೆ, ಪುಡಿಗಾಸಿಗೆ ಬಿಕರಿಯಾಗದು ನನ್ನ ಮತ,
ವಾಚಿಗೆ ಗೋಡೆ ಗಡಿಯಾರ ಗಳಿಗೆ ವಾಲದು ನನ್ನ ಮತ,
ಮಂಚಕೆ ಬೀರಿಗೆ ಸೀರೆ ಶಾಲು ಗಳ ಎಂಜಲಿಗೆ ಕೈ ಒಡ್ಡದು ನನ್ನ ಮತ,
ಅಸ್ತು ಅನ್ನಿ… ಅಶ್ವಿನೀ ದೇವತೆಗಳೇ… ಅಸ್ತು ಅನ್ನಿ.

ಕ್ಷಣಿಕ ಸುಖಗಳಿಗೆ ಈಡಾಗಿ ರಾಜ್ಯದ ಹಿತ ಹರಾಜಾಗಲು ಬಿಡದು ನನ್ನ ಮತ,
ಪುಂಡ ಪೋಕರಿಗಳ ಆರಿಸಿ ಅನರ್ಥಗಳಿಗೆ ರಹಾದಾರಿ ಕೊಡದು ನನ್ನ ಮತ,
ಸ್ನೇಹಿತರಿಗೆ, ಬಂಧು ಬಾಂಧವರಿಗೆ ಪ್ರೋತ್ಸಾಹಿಸಿ ಅವರ ಜೊತೆ ತಾನು ಚಲಾವಣೆ ಗೊಳ್ಳುವುದು ನನ್ನ ಮತ,
ಅಸ್ತು ಅನ್ನಿ… ಅಶ್ವಿನೀ ದೇವತೆಗಳೇ… ಅಸ್ತು ಅನ್ನಿ.

ನಿಸ್ಪೃಹ ನಿರಪೇಕ್ಷ ನಾಯಕನ ಆರಿಸುವುದು ನನ್ನ ಮತ,
ಜನಾನುರಾಗಿ ದೀನರಕ್ಷಕನ ಆಯ್ಕೆ ಮಾಡುವುದು ನನ್ನ ಮತ,
ನಮ್ಮ ರಾಜ್ಯ ವ ಸುಭೀಕ್ಷ ರಾಜ್ಯವಾಗಿಸುವುದು ನನ್ನ ಮತ,
ಅಸ್ತು ಅನ್ನಿ… ಅಶ್ವಿನೀ ದೇವತೆಗಳೇ… ಅಸ್ತು ಅನ್ನಿ.

ಬರಹ : ಪ್ರವೀಣ ಜವಳಿ
9880687985

ಪ್ರವೀಣ ಜವಳಿ
PraveenMJavali@gmail.com
98806 47945.

Klive Special Article (ಅಶ್ವಿನೀ ದೇವತೆಗಳು ದೇವತೆಗಳ ವೈದ್ಯರೆಂದೆನಿಸಿದ್ದಾರೆ. ಇವರಿಗೆ ಅಶ್ವಿನೀ ಕುಮಾರರೆಂದೂ, ಅಸ್ತು ದೇವತೆಗಳೆಂದೂ ಹೆಸರಿದೆ.

ಅಶ್ವಿನೀ ದೇವತೆಗಳು ಸದಾ ಎಲ್ಲ ಕಡೆಯು ನೆಲೆಸಿ ಜನರಾಡುವ ಒಳ್ಳೆಯ, ಕೆಟ್ಟ ಮಾತುಗಳಿಗೆಲ್ಲಾ ಅಸ್ತು ಎನ್ನುತ್ತಾರೆಂದು ನಂಬಲಾಗಿದೆ. ಹಾಗಾಗಿ ಮನುಷ್ಯ ತನ್ನ ಜೀವನದುದ್ದಕ್ಕೂ ಒಳ್ಳೆಯ ಮಾತುಗಳನ್ನಾಡುತ್ತಾ ಆರೋಗ್ಯಕರವಾಗಿ ಬದುಕಬೇಕೆನ್ನುತ್ತಾರೆ.)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...