Wednesday, October 2, 2024
Wednesday, October 2, 2024

ಆಸ್ಟ್ರೇಲಿಯ-ಇಂಗ್ಲೆಂಡ್ ಕ್ರಿಕೆಟ್ : ಮೊದಲ ದಿನದಾಟ

Date:

ಏಷ್ಯನ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯವು ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯಿತು.

ಮೊದಲ ದಿನದ ಮೊದಲನೇ ಇನ್ನಿಂಗ್ಸ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 89 ಓವರ್ ಗಳಲ್ಲಿ 2 ವಿಕೆಟ್ ಪತನಕ್ಕೆ 221 ರನ್ ಗಳಿಸಿಕೊಂಡಿತು. ಡೇವಿಡ್ ವಾರ್ನರ್ 95 ರನ್ ಮತ್ತು ಲಾಬುಷೇನ್ ಶತಕದಿಂದ ಉತ್ತಮ ಮೊತ್ತ ಕಲೆ ಹಾಕಿ ಪಂದ್ಯ ಆರಂಭಿಸಿದರು.

ಕ್ರೀಸ್ ನಲ್ಲಿದ್ದ ಲಾಬುಷೇನ್ ಎರಡನೇ ದಿನದ ಬೆಳಿಗ್ಗೆ ತಮ್ಮ ಶತಕಕ್ಕೆ ಅಗತ್ಯವಿದ್ದ 5 ರನ್ ಸೇರಿಸಿದರು. 22ನೇ ಟೆಸ್ಟ್ ನಲ್ಲಿ ಆಡುತ್ತಿರುವ ಅವನಿಗೆ ಇದು 7ನೇ ಶತಕ, ಹಾಗೂ ಲಾಬುಷೇನ್ ಶತಕ ಮತ್ತು ಸ್ಟೀವನ್ ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿಯಾ ಮಿಂಚಿನ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆದರೆ ದಿನದಾಟದ ಒಂಬತ್ತನೇ ಓವರ್ನಲ್ಲಿ ಲಾಬುಷೇನ್ (LBW) ಬಲೆಗೆ ಬಿದ್ದರು, ಇನ್ನೊಂದೆಡೆ ಇದ್ದ ಸ್ಟೀವನ್ ಇನ್ನಿಂಗ್ಸ್ ಕಟ್ಟುವ ಹೊಣೆಯನ್ನು ತಮ್ಮ ಮೇಲೆಳೆದುಕೊಂಡರು, ಈ ಹಂತದಲ್ಲಿ ಸ್ಮಿತ್ ಜೊತೆಗೂಡಿದ ಅಲೆಕ್ಸ್ ಕ್ಯಾರಿ 107 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 51ರನ್ ಗಳಿಸಿಕೊಂಡರು.

ಎರಡು ಓವರ್ ಗಳ ನಂತರ ಕ್ಯಾರಿ ಕೂಡ ಔಟಾದರು, ಕೊನೆಯ ಹಂತದಲ್ಲಿ ಮಿಂಚಿದ ಸ್ಟಾರ್ಕ್ ಔಟಾಗದೆ 39 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 39ರನ್ ಗಳಿಸಿಕೊಂಡರು, ಮತ್ತು ಮಿಚೆಲ್ ನೆಸರ್ 24 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 35ರನ್ ಗಳಿಸಿಕೊಂಡರು.

5 ನೇ ವಿಕೆಟ್ ಜೊತೆಯಾಟಕ್ಕೆ ಅಂಕಣ ಇಳಿದು ಆಡಿದ ಸ್ಮಿತ್ 91 ರನ್ ಸೇರಿಸಿದರು, ತಮ್ಮ ಶತಕಕ್ಕೆ 7 ರನ್ ಗಳ ಅಗತ್ಯವಿದ್ದ ಸಂದರ್ಭದಲ್ಲಿ 201 ಎಸೆತಗಳಲ್ಲಿ 12 ಬೌಂಡರಿ 93 ರನ್ ಗಳಿಸಿಕೊಂಡರು, ಅಷ್ಟರಲ್ಲಿಯೇ ಆಂಡರ್ಸನ್ ಅವರ ಬೌಲಿಂಗ್ ನಲ್ಲಿ (LBW) ಬಲೆಗೆ ಬಿದ್ದರು, ದಿನದಾಟದ ಮುಕ್ತಾಯಕ್ಕೆ ಸ್ವಲ್ಪ ಸಮಯಕ್ಕೆ ಮುಂಚೆಯೇ ಹಂಗಾಮಿ ನಾಯಕ ಸ್ಮಿತ್ ಡಿಕ್ಲೇರ್ ಘೋಷಿಸಿದರು.

ನಂತರ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ದಿನದಾಟದ ಕೊನೆಗೆ ತಂಡವು 8.4 ಓವರ್ ಗಳಲ್ಲಿ 17 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು, ಆಟ ಮುನ್ನಡೆಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...