Actress Malashree ಸ್ಯಾಂಡಲ್ ವುಡ್ ನಲ್ಲಿ ಹೊಸ ‘ಅಧ್ಯಾಯ’ ಶುರುವಾಗಿದೆ.
ಏನಿದು ಹೊಸ ಅಧ್ಯಾಯ ಅಂತೀರ! ಹೌದು ‘ಜೈ ಭವಾನಿ ಕ್ರಿಯೇಷನ್ಸ್’ ಎಂಬ ಬ್ಯಾನರ್ ನ ಅಡಿಯಲ್ಲಿ ‘ಜೈ ಭವಾನಿ ಕ್ರಿಯೇಶನ್ಸ್‘ ಸಂಸ್ಥೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ “ಅಧ್ಯಾಯ” ಎಂಬ ಶೀರ್ಷಿಕೆಯ ಚಿತ್ರವು ಈಗಾಗಲೆ ಸೆಟ್ಟೇರಿದ್ದು ಈ ಚಿತ್ರದ ಫಸ್ಟ್ ಲುಕ್ಕನ್ನು ರೇಣುಕಾಬ ಸ್ಟೋಡಿಯೋದಲ್ಲಿ “ಕನಸಿನ ರಾಣಿ” ನಾಯಕ ನಟಿ ಮಾಲಾಶ್ರೀಯವರು ಬಿಡುಗಡೆ ಮಾಡಿದರು.
ಈ ಚಿತ್ರಕ್ಕೆ ನಾಯಕ ನಟರಾಗಿ ಚೈತನ್ಯ ವಂಜಾರ ರವರು ಅಭಿನಯಿಸಲಿದ್ದಾರೆ, ಈಗಾಗಲೇ ಎರಡು ಚಿತ್ರಕ್ಕೆ ನಾಯಕ ನಟರಾಗಿ ಅಭಿನಯಿಸಿದ ಅನುಭವ ಇವರಿಗಿದ್ದು ಈ ಹಿಂದೆ ರುಧೀರ ಕಣಿವೆ, ನವ ಇತಿಹಾಸ ಹಾಗೂ ಅಥಣಿ ಚಿತ್ರಗಳನ್ನು ನಿರ್ದೇಶಸಿದ್ದ ಸಮರ್ಥ್ ಎಂ. ರವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
Actress Malashree ಇದೇ ಸಂದರ್ಭದಲ್ಲಿ ನಟ, ನಿರ್ದೇಶಕ ಯತಿರಾಜು, ಪಿ,ಆರ್,ಒ, ಸುಧೀಂದ್ರ ವೆಂಕಟೇಶ್, ನಿರ್ದೇಶಕ ಶ್ರೀ ರಜಿನಿ, ನಟ ದತ್ತಾಶ್ರೀ ಹೆಗಡೆ ಮುಂತಾದವರು ಚಿತ್ರಕ್ಕೆ ಶುಭ ಹಾರೈಸಿದರು.
ಮೇ 01ರಂದು ನಂದಿನಿ ಲೇಔಟ್ ನ ‘ಶ್ರೀ ಪಂಚಮುಖಿ ಗಣಪತಿ’ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಲಿದ್ದು ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಧ್ಯಾಯ ಬರೆಯುವುದಕ್ಕೆ ಚಿತ್ರತಂಡ ಸಜ್ಜಾಗಿದೆ ಎಂದು ಚಿತ್ರದ ನಾಯಕ ನಟ ಚೈತನ್ಯ ವಂಜಾರ ಹಾಗೂ ನಿರ್ದೇಶಕ ಸಮರ್ಥ್ ರವರು ತಿಳಿಸಿದ್ದಾರೆ.