Thursday, June 18, 2026
Thursday, June 18, 2026

K.S.Eshwarappa ಅಪ್ಪ ಮಕ್ಕಳ ಕುತಂತ್ರ, ಷಡ್ಯಂತ್ರದಿಂದ ತಾತ್ಕಾಲಿಕವಾಗಿ ಹೊರಗಿದ್ದೇನೆ. ಚುನಾವಣೆ ಬಳಿಕ ಮತ್ತೆ ಬಿಜೆಪಿಗೆ ಬರುತ್ತೇನೆ- ಈಶ್ವರಪ್ಪ

Date:

K.S.Eshwarappa ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪನವರು ಮಾದ್ಯಮ ಮಿತ್ರರೊಂದಿಗೆ ಮಾತನಾಡಿ, ವಿಜಯೇಂದ್ರ ಅವರಿಗೆ ಅಭಿನಂದನೆ ಉಚ್ಚಾಟನೆ ಮಾಡಿರುವುದರಿಂದ ಎಲ್ಲರಿಗೂ ಸ್ಪಷ್ಟವಾಗಿದೆ‌.ಇವತ್ತು ಹೊಸನಗರದ ಭಾಗದಿಂದ ಅನೇಕರು ನನ್ನ ಬೆಂಬಲಕ್ಕೆ ಬಂದಿದ್ದಾರೆ ಎಂದರು.

ಆನವಟ್ಟಿಯಲ್ಕಿ ಸುಮಾರು 500ಕ್ಕೂ ಹೆಚ್ಚು ವಿವಿಧ ಪಕ್ಷದ ಕಾರ್ಯಕರ್ತರು ನಮ್ಮೊಂದಿಗೆ ಬರುತ್ತಿದ್ದಾರೆ. ನೀವು ಕಟ್ಟಿದ ಪಕ್ಷದಿಂದ ನಿಮಗೆ ಉಚ್ಚಾಟನೆಯಾಗಿದೆ. ಅನೇಕರು ಈ ಮಾತನ್ನು ಹೇಳುತ್ತಿದ್ದಾರೆ, ಇದು ತುಂಬಾ ತಾತ್ಕಾಲಿಕ. ಕಾಂಗ್ರೆಸ್ ಗೆ ನನ್ನ ಜನ್ಮದಲ್ಲಿ ಸೇರಲ್ಲ. ನನ್ನ ತಾಯಿ ಬಿಜೆಪಿ ನೂರಕ್ಕೂ ನೂರು ಚುನಾವಣೆ ಗೆಲ್ಲುತ್ತೇನೆ ಎಂದು ತಿಳಿಸಿದರು.

ಅಪ್ಪ ಮಕ್ಕಳ ಕುತಂತ್ರ, ಷಡ್ಯಂತರ ದಿಂದ ನಾನು ತಾತ್ಕಾಲಿಕವಾಗಿ ಹೊರಗಿದ್ದೇನೆ.
ಎಳೆಸು ರಾಜ್ಯಾಧ್ಯಕ್ಷರಿಂದ ಅಪ್ಪ ಮಕ್ಕಳು ಸೇರಿ ನಿಮ್ಮ ಹೊರಹಾಕಿದ್ದಾರೆ ಅನೇಕರು ನೋವಿನಿಂದ ಕರೆ ಮಾಡಿದ್ದಾರೆ ಎಂದು ತಿಳಿಸಿದರು.

ಚುನಾವಣೆ ಬಳಿಕ ನಾನು ಮತ್ತೆ ಬಿಜೆಪಿಗೆ ಬರುತ್ತೇನೆ.‌ರೈತನ ಚಿನ್ಹೆ ಸಿಕ್ಕಿರುವುದು ನನ್ನ ಪುಣ್ಯ. ಎಲ್ಲ ಕಡೆಯಿಂದ ಪ್ರಸಂಸೆ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸ್ಪರ್ಧೆ ಮಾಡೇ ಮಾಡುತ್ತೇನೆ.
ಈಶ್ವರಪ್ಪ 8 ನಂ ನ ರೈತ ಚಿನ್ಹೆ ಇರುವ ಕರ ಪತ್ರವನ್ನು ಇಟ್ಟುಕೊಂಡು ಎಲ್ಲೂರು ಮತ ಕೇಳುತ್ತಾರೆ ಎಂದರು.

K.S.Eshwarappa ಯಾವುದೇ ನೀತಿ ನಿಯಮ ಇಲ್ಲದೇನೆ, ಕಾಂಗ್ರೆಸ್ ನ ಜೊತೆ ಹೊಂದಾಣಿಕೆ ಮಾಡಿಕೊಂಡು ಅಪ್ಪ ಮಕ್ಕಳು 60 ಸಾವಿರದಿಂದ 10 ಕ್ಕೆ ಇಳಿದಿದ್ದಾರೆ.ಅವರ ಅಪ್ಪ ಬಿಜೆಪಿಯಿಂದ ಕೆ ಜೆ ಪಿ ಹೋಗಿದ್ರು.ಆಗ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಮುಸಲ್ಮಾನ ಕ್ಯಾಪ್ ಹಾಕಿಕೊಂಡಿದನ್ನು ನಾವು ನೋಡಿದ್ದೇವೆ.ಅವಾಗ ಹೇಳಿದ್ರೂ, ಎಲ್ಲ ಜಾತಿಯವರ ಜೊತೆ ಬೆರೆಯಬೇಕು ಎಂದು.
ಎಲ್ಲರ ಜೊತೆಗೆ ಬೆರೆಯಿರಿ.
ನಾನೂ ವಿಜಯೇಂದ್ರ ಗೂ ಕೇಳುತ್ತೇನೆ,ಗೀತಾ ಶಿವರಾಜ್ ಕುಮಾರ್ ಗೂ ಕೇಳುತ್ತೇನೆ.
ಗೀತಾ ಶಿವರಾಜ್ ಕುಮಾರ್ ಕೂಡ ಹಣೆಯಲ್ಲಿ ಇದ್ದ ಕುಂಕುಮ ಒರಸಿಕೊಂಡಿದ್ದು ವೈರಲ್ ಆಗುತ್ತು.ಅವರೂ ಕೂಡು ಹಿಂದು ಸಮಾಜದ ಕ್ಷಮೆ ಕೇಳಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...