Wednesday, October 2, 2024
Wednesday, October 2, 2024

ಏಷ್ಯನ್ ಹಾಕಿ : ಭಾರತ ಸೆಮಿಫೈನಲ್ ಗೆ

Date:

ಏಷ್ಯಾನ್ ಚಾಂಪಿಯನ್ಸ್ ಟ್ರೋಫಿ “ಹಾಕಿ” ಟೂರ್ನಿಯು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಿತು, ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿ ಸೆಮಿಫೈನಲ್ ಹಂತಕ್ಕೆ ಕಾಲಿಟ್ಟಿದೆ.
ಟೋಕಿಯೋ ಒಲಂಪಿಕ್ಸ್ ನಲ್ಲಿ ‘ಕಂಚಿನ ಪದಕ’ ಗೆದ್ದು ದಾಖಲೇ ಮಾಡಿದ್ದ ಭಾರತ ತಂಡವು,ಈ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ‘ಫೈನಲ್’ ಪ್ರವೇಶದತ್ತ ದಾಪುಗಾಲಿಟ್ಟಿದೆ.
ಎರಡನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ವಿರುದ್ಧ ಬಾರಿ ಜಯಗಳಿಸಿತ್ತು, ಮೊದಲ ಪಂದ್ಯದಲ್ಲಿ ಕೊರಿಯಾ ಎದುರು ‘ಡ್ರಾ’ ಮಾಡಿಕೊಂಡಿತು.
ಕಳೆದ ಬಾರಿ ಮಸ್ಕತ್ ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು, ಆದ್ದರಿಂದ ಭಾರತ ಮತ್ತು ಪಾಕ್ ಪ್ರಶಸ್ತಿ ಹಂಚಿಕೊಂಡಿದ್ದವು.
ಶುಕ್ರವಾರ ನಡೆದ ಪಂದ್ಯದಲ್ಲಿ ಪಾರಮ್ಯ ಮೆರೆದ ಭಾರತ ತಂಡವು 3-1 ಗೋಲುಗಳಿಂದ ಪಾಕ್ ತಂಡವನ್ನು ಹಣಿಯಿತು, ಹರ್ಮನ್ ಪ್ರೀತ್ (8 ನೇ ನಿಮಿಷ ಮತ್ತು 52 ನೇ ನಿಮಿಷ) ಗಳಲ್ಲಿ 2 ಪೆನಾಲ್ಟಿ ಕಾರ್ನರ್ ಗಳನ್ನು ಗೋಲ್ ಗಳಲ್ಲಿ ಪರಿವರ್ತಿಸಿದ್ದು ತಂಡದ ಜಯದಲ್ಲಿ ಪ್ರಮುಖ ಕಾರಣವಾದವು.
42 ನೇ ನಿಮಿಷದಲ್ಲಿ ಆಕಶದೀಪ್ ಲೆಫ್ಟ್ ಪ್ಲಾಂಕ್ ನಿಂದ ಸಮಿತ್ ಡ್ರೈವ್ ಮಾಡಿದ ಚೆಂಡನ್ನು ರಿವರ್ಸ್ ಹಿಟ್ ಮಾಡುವ ಮೂಲಕ ಗೋಲ್ ಪೆಟ್ಟಿಗೆ ಸೇರಿಸಿದರು,ಇದರಿಂದಾಗಿ ಗೋಲ್ ಅಂತರ ಹೆಚ್ಚಾಯಿತು,3 ನಿಮಿಷಗಳ ನಂತರ ಪಾಕ್ ಕೂಡ ತಿರುಗೇಟು ನೀಡಿತು,ಇದರ ನಂತರ ಭಾರತದ ರಕ್ಷಣಾ ಪಡೆ ಮತ್ತಷ್ಟು ಚುರುಕಾಯಿತು, ಅದರಿಂದಾಗಿ ಪಾಕ್ ಬಳಗವು ಗೋಲ್ ಗಳಿಸಲು ಪರದಾಡಿತು, ಈ ಒತ್ತಡವನ್ನು ಸಮರ್ಥವಾಗಿ ಬಳಸಿಕೊಂಡ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿಯಲ್ಲಿ ಗೋಲ್ ಬಾರಿಸಿದರು.
ಪಂದ್ಯದ 2 ಕ್ವಾರ್ಟರ್ ಗಳಲ್ಲಿ ಭಾರತದ ಆಟಗಾರರೇ ಚೆಂಡಿನ ಮೇಲೆ ಹೆಚ್ಚು ಸಮಯ ನಿಯಂತ್ರಣ ಸಾಧಿಸಿದ್ದರು,ಅದರಲ್ಲೂ ಹರ್ಮನ್ ಪ್ರೀತ್ ಪದೇ ಪದೇ ನಡೆಸಿದ ದಾಳಿಯನ್ನು ತಡೆಯುವಲ್ಲಿ ಪಾಕ್ ತಂಡದ ಗೋಲ್ ಕೀಪರ್ ಮಝರ್ ಅಬ್ಬಾಸ್ ಅವರ ಆಟ ಅಮೋಘವಾಗಿತ್ತು, ಅರ್ಧ ವಿರಾಮಕ್ಕೆ ಭಾರತವು 1 – 0 ಯಿಂದ ಮುಂದಿತ್ತು.
ಆದರೆ ಪಾಕ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಜಪಾನ್ ಎದುರು ‘ಡ್ರಾ’ಮಾಡಿಕೊಂಡಿತ್ತು, ಭಾರತ ತಂಡವು 7 ಪಾಯಿಂಟ್ ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.
ಈ ಪಂದ್ಯದಲ್ಲಿ ಭಾರತವು 8 ನೇ ನಿಮಿಷದಲ್ಲಿಯೇ ಪಾಕ್ ರಕ್ಷಣಾ ಗೋಡೆಯನ್ನು ದಾಟುವಲ್ಲಿ ಭಾರತದ ಸ್ಟ್ರೈಕರ್ ಹರ್ಮನ್ ಪ್ರೀತ್ ಯಶಸ್ವಿಯಾದರು, ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಕೆಳಮಟ್ಟದ ‘ಫ್ಲಿಕ್’ ಮೂಲಕ ಗೋಲ್ ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು.
ಭಾರತ ತಂಡವು ಸೆಮಿಫೈನಲ್ ಹಂತದ ಪದ್ಯವನ್ನು ಭಾನುವಾರ ಜಪಾನ್ ತಂಡದ ಎದುರು ಸೆಣಸಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...