Shivasharan Haralaiah ಶಿವಮೊಗ್ಗ ನಗರದ ಕುವೆಂಪು ರಸ್ತೆಯ ಸತ್ಯಂ ಕಾಂಪ್ಲೆಕ್ಸ್ ಸನ್ನಿಧಿ ಸಭಾಂಗಣದಲ್ಲಿ, 12ನೇ ಶತಮಾನದಲ್ಲಿ ಶ್ರೀ ಬಸವಣ್ಣವರ ಸಮಕಾಲದ ಕಲ್ಯಾಣ ಕ್ರಾಂತಿಯ ಕಾರಣರಾದ ಶ್ರೀ ಶಿವಶರಣ ಹರಳಯ್ಯನವರು ಹಾಗೂ ಶ್ರೀಮತಿ ಕಲ್ಯಾಣಮ್ಮ ನವರ ಜಯಂತೋತ್ಸವ ಆಚರಣೆಯನ್ನು ಇಂದು 21/4/2024ರ ಭಾನುವಾರ ಬೆಳಿಗ್ಗೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು,
ಸಮಾಜದಲ್ಲಿರುವ ಬಹಳಷ್ಟು ಸಮಗಾರ ಸಮಾಜದವರು ಇನ್ನೂ ಶೋಷಣೆಗೆ ಒಳಗಾಗುತ್ತಿರುವರು, ಅವರಿಗಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಬಲ ಪಡಿಸಲು ಮತ್ತು ಸಮಾಜಮುಖಿಯಾಗಿ ಹೊರ ಹೊಮ್ಮಲು ಹಲವು ಯೋಜನೆಗಳನ್ನು ಜಿಲ್ಲಾ ಸಮಗಾರ ಸಂಘವು ಕೈ ಗೊಂಡಿದೆ, ಅವುಗಳನ್ನು ಪಡೆಯಲು ಸಮಗಾರ ಸಮಾಜದವರು ಮುಂದೆ ಬರಬೇಕೆಂದು ಅಧ್ಯಕ್ಷ ವೆಂಕಟರಮಣ ಹೊನ್ನಾವರಕರ್ ತಿಳಿಸಿದರು,
Shivasharan Haralaiah ಈ ವೇಳೆ , ಉಪಾಧ್ಯಕ್ಷ ನಾಗೇಂದ್ರ ಶಿರೂರ್ಕರ್, ಕಾರ್ಯದರ್ಶಿ ಅಶೋಕ್ ಕುಮಾರ್, ಸಮಾಜದ ಪ್ರಮುಖರು ಚನ್ನವೀರಪ್ಪ ಗಾಮನಗಟ್ಟಿ, ಕಲ್ಲೇಶ್ ಕಾನ್ಪೇಟ್, ಗೋಪಾಲ್ ಕದಂ, ರಾಘವೇಂದ್ರ ಹೊನ್ನಾವರ್ಕರ್, ನರಹರಿ ಬೋರ್ಕರ್, ಹಾಗೂ ಇತರರೂ ಉಪಸ್ಥಿತರಿದ್ದರು.