Thursday, September 17, 2026
Thursday, September 17, 2026

DC Shivamogga ಮತದಾನ ಮಹತ್ವ ಕುರಿತು ಕವಿತೆ ಬರೆಯಿರಿ, ಆಯ್ಕೆಯಾದರೆ ಕವಿಗೋಷ್ಠಿಗೆ ಆಹ್ವಾನ

Date:

DC Shivamogga ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಶಿವಮೊಗ್ಗ ಇವರ ಸಹಯೋಗದಲ್ಲಿ ಹಾಗೂ ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ವತಿಯಿಂದ 2024ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ‘ಮತದಾನ ಜಾಗೃತಿಯ ಕುರಿತ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ. ಈ ಕವಿಗೋಷ್ಠಿಯು ದಿನಾಂಕ 23-04- 2024ರಂದು ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಬಿ.ಎಡ್. ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಆಸಕ್ತ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಮತದಾನ ಜಾಗೃತಿಯ ಹಿನ್ನಲೆಯಲ್ಲಿ ಬರೆದಿರಬೇಕು. ಕವನಗಳು ಚಿಕ್ಕದಾಗಿದ್ದು ಎಲ್ಲೂ ಪ್ರಕಟವಾಗಿರಬಾರದು.

DC Shivamogga ಕವನಗಳು ಮೌಲ್ಯಯುತವಾಗಿದ್ದು, ಸ್ಫೂರ್ತಿದಾಯಕವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವಂತಿರಬೇಕು. ಕವನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಹೆಸರು, ಚಿಹ್ನೆ, ಗುರುತು, ವ್ಯಕ್ತಿಗಳ ಹೆಸರುಗಳನ್ನು ನಮೂದಿಸಬಾರದು. 3-4 ನಿಮಿಷಗಳಲ್ಲಿ ವಾಚನ ಮಾಡುವಂತಿರಬೇಕು. ಅತ್ಯುತ್ತಮ ಕವನಗಳಿಗೆ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಪ್ರಮಾಣಪತ್ರ ನೀಡಲಾಗುವುದು. ಕವಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿ ಹಾಗೂ ಕವನಗಳನ್ನು ದಿನಾಂಕ 22-04-2024ರ ಸಂಜೆ 5ಗಂಟೆಯೊಳಗಾಗಿ ತಲುಪಿಸಬೇಕು.

ಸಂಪರ್ಕಿಸಿ:-

ಬಸವನಗೌಡ ಹೆಚ್ ಎನ್:- 9901347264

ಕೆ.ಸಿ ಬಸವರಾಜು
:- 9483003823

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...