Friday, April 17, 2026
Friday, April 17, 2026

K. S. Eshwarappa ಹಣಬಲ ಮತ್ತು ಧರ್ಮದ ನಡುವೆ ಯುದ್ಧ.ಅಂತಿಮವಾಗಿ ಧರ್ಮಕ್ಕೇ ಜಯ-ಕೆ.ಎಸ್. ಈಶ್ವರಪ್ಪ

Date:

K. S. Eshwarappa ನನ್ನ ಎದೆಯಲ್ಲಿ ಒಂದು ಕಡೆ ರಾಮ, ಮತ್ತೊಂದು ಕಡೆ ಮೋದಿ ಅವರಿದ್ದಾರೆ. ಮೋದಿ ನನಗೆ ಸ್ಫೂರ್ತಿ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತವರ ಮಕ್ಕಳ ರಾಜಕಾರಣ ಅಂತ್ಯ ಆಗಬೇಕು ಎಂಬ ಆಸೆ ಅವರಿಗೂ, ಸಾವಿರಾರು ಹಿಂದೂ ಕಾರ್ಯಕರ್ತರ ಅಭಿಪ್ರಾಯವೂ ಇದೆ ಆಗಿದೆ. ಮೋದಿ ಅಮಿತ್ ಷಾ ಅವರೇ ನನ್ನನ್ನು ನಿಲ್ಲಿಸಿದ್ದಾರೆ ಎಂಬ ಅಭಿಪ್ರಾಯ ನನ್ನ ಬೆಂಬಲಿಸುತ್ತಿರುವವರಿಗೂ ಬಂದಿರಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಕುಟುಂಬ ರಾಜಕಾರಣ ಮುಗಿಸಲು ಹೋರಾಟಕ್ಕಿಳಿದಿದ್ದೇನೆ. ಯಡಿಯೂರಪ್ಪನವರ ಜಾತಿ ಮತ್ತು º Àಣ ಬಲ ಮತ್ತು ಧರ್ಮದ ನಡುವೆ ಯುದ್ಧ ನಡೆಯುತ್ತಿದೆ. ಅಂತಿಮವಾಗಿ ಧರ್ಮ ಗೆಲ್ಲುತ್ತದೆ ಎಂದು ಈಶ್ವರಪ್ಪ ಹೇಳಿದರು.
ಪಕ್ಷ ಬಿಟ್ಟು ಹೋಗಿದ್ದ ಯಡಿಯೂರಪ್ಪ ಮೋಸ ಮಾಡಿರಲಿಲ್ಲವೇ? ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ನನ್ನ ಜೊತೆ ಮಾತುಕತೆ ಗೆ ಬರುತ್ತಾರೆ? ಇಷ್ಟು ಮೋಸ ಮಾಡಿದ್ದೇನೆ ಎನ್ನುವುದು ಅವರ ಮನಸ್ಸಿನಲ್ಲಿದ್ದರೆ ನನ್ನ ಹತ್ತಿರ ಬರುವುದಿಲ್ಲ. ನಲವತ್ತು ವರ್ಷದಿಂದ ಸಂಘಟನೆಯಲ್ಲಿದ್ದೇನೆ. ಸಾಯುವವರೆಗೂ ಇರುತ್ತೇನೆ ಎಂದ ಅವರು, ಈಶ್ವರಪ್ಪನವರನ್ನು ಬೆಂಬಲಿಸುವ ಯಾವುದೇ ಮಠಾಧೀಶರಿಗೆ, ಬೆಂಬಲಿಗರಿಗೆ ಬೆದರಿಕೆ ಹಾಕಿಲ್ಲ, ಇಂತಹ ಆರೋಪ ಮಾಡುತ್ತಿರುವ ಈಶ್ವರಪ್ಪನವರು ಚಂದ್ರಗುತ್ತಿ ರೇಣುಕಾ ದೇವಿ ದೇವಸ್ಥಾನದಲ್ಲಿ ಬಂದು ಗಂಟೆ ಹೊಡೆದು ಪ್ರಮಾಣ ಮಾಡಲಿ ಎಂಬ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರ ಆಹ್ವಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ರಾಘವೇಂದ್ರ ಮತ್ತು ಅವರಪ್ಪನಿಗೆ (ಯಡಿಯೂರಪ್ಪ) ಸುಳ್ಳು ಹೇಳುವುದು ಅಭ್ಯಾಸವಾಗಿದೆ. ಯಡಿಯೂರಪ್ಪ ಹಾವೇರಿಯಲ್ಲಿ ಕಾಂತೇಶ್‌ಗೆ ಟಿಕೆಟ್ ಕೊಡಿಸುತ್ತೇನೆ, ನಾನೇ ಬಂದು ಕ್ಷೇತ್ರದಲ್ಲಿ K. S. Eshwarappa ಓಡಾಡಿ ಗೆಲ್ಲಿಸುತ್ತೇನೆ. ಅಂತ ಹೇಳಿರಲಿಲ್ಲ ಎಂದು ಯಡಿಯೂರಪ್ಪ ಅವರು ಗಂಟೆ ಹೊಡೆದು ಪ್ರಮಾಣ ಮಾಡುತ್ತಾರಾ? ಸಾಧುಸಂತರಿಗೆ ನೋವುಂಟು ಮಾಡಿಲ್ಲ, ಬೆದರಿಕೆ ಹಾಕಿಲ್ಲ ಎಂದು ರಾಘವೇಂದ್ರ ಗಂಟೆ ಹೊಡೆದು ಪ್ರಮಾಣ ಮಾಡುತ್ತಾರಾ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mescom ಏಪ್ರಿಲ್ 19. ಶಿವಮೊಗ್ಗದ ವಿದ್ಯಾನಗರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

Mescom ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ ವಿದ್ಯಾನಗರ ಮಾರ್ಗದಲ್ಲಿ...

Shivamogga Airport ಚನ್ನೈ ವಿಮಾನ ರದ್ದು. ಪ್ರಯಾಣಿಕರಿಗೆ ಚನ್ನೈಗೆ ‌ಕೊಂಡೊಯ್ಯಲು ಬಸ್ ವ್ಯವಸ್ಥೆ: ಜನರ ಆಕ್ರೋಶ

Shivamogga Airport ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಚೆನ್ನೈ ವಿಮಾನ ರದ್ದಾಗಿದ್ದು, ಪ್ರಯಾಣಿಕರು...

JCI Shivamogga ಗುಡ್ ಲಕ್ ಆರೈಕೆ ಕೇಂದ್ರದಲ್ಲಿನ ಅನಾಥ ಮಹಿಳೆಯರಿಗೆ ಭಾವನಾ ಜೆಸಿಐನಿಂದ ಉಡುಪು ವಿತರಣೆ

JCI Shivamogga ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ಭಾವನದಿಂದ ಗುಡ್...