Friday, March 20, 2026
Friday, March 20, 2026

D S Arun ಮತದಾರಸದಾ ಜಾಗೃತನಾಗಿರ ಬೇಕು- ಡಿ.ಎಸ್.ಅರುಣ್

Date:

D S Arun ಬದಲಾವಣೆಗೆ ಎಲ್ಲರೂ ಸಹಕರಿಸಬೇಕು. ಜನ ಬದಲಾದರೆ ಸಮಾಜ ಬದಲಾಗಲು ಸಾಧ್ಯ. ಮತದಾನದಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಮತದಾನ ಮಾಡಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಉತ್ತಮ ಆಡಳಿತ ಸಾಧ್ಯ ಎಂದು ಎಂಎಲ್ ಸಿ ಡಿ ಎಸ್ ಅರುಣ್ ಹೇಳಿದರು.

ಪ್ರೆಸ್ ಟ್ರಸ್ಟಿನಲ್ಲಿ ಜಿಲ್ಲಾ ಮತದಾರರ ಜಾಗೃತ ವೇದಿಕೆ ಮಂಗಳವಾರ ಏರ್ಪಡಿಸಿದ್ದ ಚುನಾವಣೆ ಸುಧಾರಣೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 97 ಕೋಟಿ ಮತದಾರರು ಮತಚಲಾವಣೆ ಮಾಡಲಿದ್ದಾರೆ. ಜನ ಮತ ಹಾಕುವ ಮನಸ್ಸು ಮಾಡಬೇಕು, ಮತದಾನದ ದಿನ ಮನೆ ಬಿಟ್ಟು ಹೊರಬರದಿದ್ದರೆ ಏನು ಮಾಡಲು ಸಾಧ್ಯ, ಇಂತಹವರನ್ನು ಎಂದಿಗೂ ಜಾಗೃತಗೊಳಿಸಲಾಗದು.

ಮತದಾರ ಸದಾ ಜಾಗೃತನಾಗಿರಬೇಕೇ ಹೊರತು ಆತನನ್ನು ಜಾಗೃತಗೊಳಿಸುವ ಕೆಲಸ ನಡೆಯಬಾರದು ಎಂದರು.

ಆಯುಷ್ ವೈದ್ಯೆ ಡಾ. ರಂಜಿನಿ ಬಿದರಹಳ್ಳಿ ಮಾತನಾಡಿ, ಶಿವಮೊಗ್ಗ ಸುಶಿಕ್ಷಿತರ ಜಿಲ್ಲೆ ಎಂದು ಹೆಸರು ಪಡೆದಿದೆ. ಆದರೆ ಇಲ್ಲಿಯೇ ಮತದಾನ ಕಡಿಮೆಯಾಗುತ್ತಿದೆ. ಮತದಾನ ಜಾಗೃತಿ ಎನ್ನುವುದು ಮುಜುಗುರ ತರುವ ಕೆಲಸವಾಗಿದೆ. ಮತದಾರ ಏಕೆ ಮತದಾನ ಮಾಡುವುದಿಲ್ಲ ಎನ್ನುವ ಪ್ರಶ್ನೆ ಸದಾ ಎದುರಾಗುತ್ತದೆ ಎಂದರು.
ಸಹಕಾರ ಕ್ಷೇತ್ರದಲ್ಲಿ ಸಭೆಗೆ ಸತತ ಹಾಜರಾಗದಿದ್ದರೆ ಅಂತಹವರನ್ನು ನಿರ್ದೇಶಕ ಸ್ಥಾನದಿಂದ ಅಮಾನತು ಮಾಡುವ ಕಾಯ್ದೆ ಇದೆ. ಆ ಕಾಯ್ದೆ ಇಲ್ಲಿಯೂ ಜಾರಿಯಾಗಬೇಕಿದೆ. ಮತದಾನ ಮಾಡದವರಿಗೆ ಶಿಕ್ಷೆ ಕೊಡುವಂತಾಗಬೇಕು. ಅವರನ್ನು ಎಲ್ಲರೂ ಪ್ರಶ್ನಿಸಬೇಕು. ಇಲ್ಲಿಯವರೆಗೆ ಸತತ ಜಾಗೃತಿ ಮಾಡಿ ಸಾಕಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜಾಗೃತಿ ಮಾಡುತ್ತಿರುವುದು ಸರಿಯಲ್ಲ ಎಂದರು.

ರೈತ ಮುಖಂಡ ಕೆ ಟಿ ಗಂಗಧರ ಮಾತನಾಡಿ, ರಾಜಕೀಯ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆಯುವುದು, ಅವರ ಅಪವಿತ್ರ ಮೈತ್ರಿ, ತಳಬುಡವಿಲ್ಲದ ಸಿದ್ಧಾಂತಗಳು, ಅಪಮೌಲ್ಯಗೊಳಿಸಿದ ಆಡಳಿತ ಇವೆಲ್ಲವೂ ಮತದಾರರನನ್ನು ಭ್ರಮನಿರಸನಗೊಳಿಸಿವೆ. ಆದಕಾರಣ ಎಷ್ಟೋ ಮತದಾರರು ಬೇಸರಗೊಂಡು ಮತ ಹಾಕುತ್ತಿಲ್ಲ. ಹಳ್ಳಿಗಳಲ್ಲಿ ಜನರು ಸಂಪೂರ್ಣವಾಗಿ ಮತ ಚಲಾಯಿಸುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಮತ ಹಾಕಲು ಬರುತ್ತಿಲ್ಲ. ಇದನ್ನು ಸರಿಪಡಿಸುವವರಾರು ಎನ್ನುವ ಪ್ರಶ್ನೆ ಸದಾ ನಮ್ಮ ಎದುರಿದೆ. ಮತದಾನವನ್ನು ತಪ್ಪದೇ ಮಾಡಬೇಕೆನ್ನುವುದು ಪ್ರಜಾಪ್ರಭುತ್ವದ ಸದಾಶಯ, ಆದರೆ ಅದು ಹಾಗೆ ಉಳಿದಿಲ್ಲ. ಎಲ್ಲರೂ ಸಂವಿಧಾನದ ಉಳಿವಿಗೆ ಕೆಲಸ ಮಾಡುತ್ತೇವೆ ಎನ್ನುವ ನಂಬಿಕೆ ಬರಬೇಕು ಎಂದರು.

D S Arun ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಶೇಖರ್ ಗೌಳೇರ್ ವಹಿಸಿದ್ದರು.
ವೇದಿಕೆಯಲ್ಲಿ ಎಂಎಲ್‌ಸಿ ರುದ್ರೇಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ ಜಿ ಶಿವಮೂರ್ತಿ, ಡಯಾಬಿಟಿಕ್ ತಜ್ಞ ಡಾ. ಪ್ರೀತಮ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ರೋಟರಿ ವಿಜಯಕುಮಾರ್, ಬಸವರಾಜ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...