Madhu Bangarappa ಕಾಂಗ್ರೆಸ್ ಸರಕಾರ ಎಲ್ಲ ಜನರ ಮನೆಯ ಬೆಳಕಾಗಿದೆ. ಅವರ ಜೀವನ ಬೆಳಗಿದೆ. ಈ ಸರಕಾರ ಹೆತ್ತವರು ಮಹಿಳೆಯರು. ಅದಕ್ಕಾಗಿ ಅವರಿಗೆ ಎಲ್ಲ ಯೋಜನೆ ಸಮರ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಯೋಜನೆ ತಲುಪಿಸಲಾಗಿದೆ. ಅದರ ಪರಿಣಾಮ ತಿಳಿಯುವ ಕೆಲಸವೇ ಈ ಸಮಾವೇಶ. ಪ್ರತಿ ಯೋಜನೆಯೂ ಮನೆಗೆ ಉಪಯೋಗವಾಗುವಂತದ್ದು ಎಂದು ವಿವರಿಸಿದರು.
ಜನರಿಗೆ ಹಿಂದಿನಿಂದಲೂ ಏನಾದರೂ ಲಾಭವಾಗಿದ್ದರೆ ಅದು ಕಾಂಗ್ರೆಸ್ನಿಂದ. 32 ವರ್ಷದ ಹಿಂದೆ ಪುಕ್ಕಟೆ ಕರೆಂಟ್ ಕೊಟ್ಟಿದ್ದು ಬಂಗಾರಪ್ಪ. ಭೂ ಹಕ್ಕು ಕೊಟ್ಟಿದ್ದು ದೇವರಾಜ ಅರಸು. ಹೀಗೆ ವಿವಿಧ ಹಂತಗಳಲ್ಲಿ ಕಾಂಗ್ರೆಸ್ ಜನಪರ ಕೆಲಸ ಮಾಡುತ್ತಲೇ ಬಂದಿದೆ ಎನ್ನುವುದನ್ನು ನೆನಪಿಸಿದರು.
Madhu Bangarappa ಕಾಂಗ್ರೆಸ್ ನ ಯೋಜನೆಗಳಿಗೆ ಗ್ಯಾರೆಂಟಿ, ವಾರoಟಿ ವಿಲ್ಲ ಎಂಬ ಟೀಕೆ ಮಾಡುವವರು ಇದನ್ನು ಅರಿಯಬೇಕು. ಟೀಕೆಗಾಗಿ ಟೀಕೆ ಮಾಡಬಾರದು. ಈ ಸತ್ಯ ಜನರಿಗೆ ತಿಳಿದಿದೆ ಎಂದು ಹೇಳಿದರು.