Monday, August 24, 2026
Monday, August 24, 2026

Aam Admi Party ಕಾಡಾನೆಗಳಿಗೆ ಆಹಾರ ಪೂರೈಸಿದರೆ ಹಾವಳಿ ನಿಯಂತ್ರಣ : ಎಎಪಿ

Date:

Aam Admi Party ಅರಣ್ಯ ಪ್ರದೇಶದಲ್ಲಿ ಮೂಲ ಸವಲತ್ತುಗಳಿಲ್ಲದ ಪರಿಣಾಮ ಆಹಾರಕ್ಕಾಗಿ ಚಿಕ್ಕಮಗಳೂರು ನಗರ ಹೊರವಲಯಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಎಎಪಿ ಮಾಧ್ಯಮ ಪ್ರತಿನಿಧಿ ಡಾ. ಕೆ.ಸುಂದರಗೌಡ ಹೇಳಿದ್ದಾರೆ.

ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ವನ್ಯಜೀವಿಗಳ ವಾಸಸ್ಥಾನವನ್ನು ಮಾನವ ಅತಿಕ್ರಮಣ ಪ್ರವೇಶಿಸಿ ಕಂಟಕ ಪ್ರಾಯವಾಗಿರುವ ಪರಿಣಾಮ ಕಾಡಾನೆಗಳು ನಗರದತ್ತ ಧಾವಿಸುತ್ತಿದೆ. ಇದರಿಂದ ಗ್ರಾಮಸ್ಥರು ಪ್ರತಿನಿತ್ಯವು ಸಂಚರಿಸುವುದು ಬಹಳಷ್ಟು ಸಮಸ್ಯೆಯಾಗಿದೆ ಎಂದಿದ್ದಾರೆ.
ಆಹಾರ ಮತ್ತು ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಹೀಡಿಂಡು ಕಾಡಾನೆಗಳು ನಗರದ ಸುತ್ತ ಮುತ್ತಲು ಬೀಡುಬಿಟ್ಟಿವೆ. ಸಮರ್ಪಕ ಆಹಾರ ಪೂರೈಸದ ಇಲಾಖೆಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಿದ್ದರೆ ನಗರದತ್ತ ಆನೆ ಗಳು ಧಾವಿಸುತ್ತಿರಲಿಲ್ಲ. ಹೀಗಾಗಿ ಅರಣ್ಯಗಳಲ್ಲಿ ಅಗೇಶಿಯ, ನೀಲಗಿರಿ ಬೆಳೆಸುವ ಬದಲು ಪ್ರಾಣಿ-ಪಕ್ಷಿಗಳಿಗೆ ಪೂರ ಕವಾದ ಹಣ್ಣು, ಬಿದಿರಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.

ಕಳೆದ ಒಂದು ವಾರದಿಂದಲೂ ನಗರ ಹೊರವಲಯಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ. ಇವುಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವ ಕಾರಣ ಕಾಡಿನಿಂದ ಬರು ವ ಮುನ್ನವೇ ತಡೆಹಿಡಿಯಲು ಮುನ್ನೆಚ್ಚರಿಕಾ ಕ್ರಮ ವಹಿಸಿದರೆ ಮಾತ್ರ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ನೆಮ್ಮದಿಯಿರಲು ಸಾಧ್ಯ ಎಂದು ತಿಳಿಸಿದರು.

Aam Admi Party ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರು ಶಾಶ್ವತವಾಗಿ ಕಾಡಾನೆಗಳು ಸೆರೆಹಿಡಿದು ಕಾಡಿಗೆ ಬಿಡುವ ಕೆಲಸ ಮಾಡಬೇಕೇ ಹೊರತು ಇಲ್ಲಿಂದ ಬೇರೆಡೆಗೆ ಓಡಿಸುವ ಕಾರ್ಯದಲ್ಲಿ ತೊಡಗಿದರೆ ಏನು ಪ್ರಯೋಜನವಿಲ್ಲ. ಇದ ರಿಂದಾಗಿ ಸಾರ್ವಜನಿಕರಿಗೆ ಅನಾಹುತಗಳು ಸಂಭವಿಸಲಿದೆ ಎಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...