Sunday, December 7, 2025
Sunday, December 7, 2025

Ram mandir ಅಯೋಧ್ಯೆ ಬಾಲರಾಮ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಹಿರೇಮಗಳೂರಿನಲ್ಲಿ ಸಂಭ್ರಮಾಚರಣೆ

Date:

Ram mandir ಅಯೋಧ್ಯೆಯಲ್ಲಿ ಶ್ರೀ ರಾಮಲಾಲ್ಲ ಪ್ರಾಣ ಪ್ರತಿಷ್ಟಾಪನಾ ಅಂಗವಾಗಿ ಹಿರೇ ಮಗಳೂರು ಶ್ರೀ ಕೋದಂಡರಾಮಚoದ್ರ ದೇವಾಲಯದಲ್ಲಿ ದಲಿತ ಹಿತರಕ್ಷಣಾ ವೇದಿಕೆಯ ಮುಖಂಡರುಗಳು ಸೋಮವಾರ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಶ್ರೀರಾಮನ ಆರ್ಶೀವಾದ ಪಡೆದುಕೊಂಡರು.

Ram mandir ಬಳಿಕ ಮಾತನಾಡಿದ ವೇದಿಕೆ ಮುಖಂಡ ಕುರುವಂಗಿ ವೆಂಕಟೇಶ್ ಇಡೀ ದೇಶವೇ ಶ್ರೀರಾಮ ಮಂದಿರ ಲೋಕಾರ್ಪಣೆ ದೃಶ್ಯಕಂಡು ಪುನೀತರಾಗಿದ್ದಾರೆ. ಅದಲ್ಲದೇ ಖುದ್ದು ಪ್ರಧಾನ ಮಂತ್ರಿ ಮೋದಿಯವರು ಕೂಡಾ ಅತ್ಯಂತ ಶ್ರದ್ದಾಭಕ್ತಿಯಿಂದ ದೇವಾಲಯದ ಪ್ರಾಣ ಪ್ರತಿಷ್ಟೆಯಲ್ಲಿ ನಿರತರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಶ್ರೀರಾಮನು ದೇವಾಲಯ ಸೇರುವ ಸುದಿನವಾಗಿದೆ. ಪ್ರತಿಯೊಬ್ಬರು ಸ್ವಾರ್ಥ, ಅಸೂಯೆ ತೊಲಗಿಸಲು ಶ್ರೀರಾಮಜಪದಲ್ಲಿ ನಿರತರಾದರೆ ಮನಸ್ಸು ಶುದ್ಧವಾಗುವ ಜೊತೆಗೆ ಬದುಕಿನಲ್ಲಿ ಶಾಂತಿ, ಸಂಮೃದ್ದಿ ನೆಲೆಯುರಲಿದೆ. ಹೀಗಾಗಿ ಪ್ರತಿ ಮನ, ಮನಸ್ಸುಗಳಲ್ಲಿ ಶ್ರೀರಾಮನ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರುಗಳಾದ ಕೇಶವ, ರೇವನಾಥ್, ಹಂಪಯ್ಯ, ಹೆಚ್.ಎಸ್.ಪುಟ್ಟ ಸ್ವಾಮಿ, ನರಸಿಂಹಮೂರ್ತಿ, ಧನಂಜಯ್, ರವಿಕುಮಾರ್, ಮಂಜುನಾಥ್, ನಂದನ್, ನಂಜುoಡಪ್ಪ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...