Indian Culture Conference ಯುವಜನ ಚಾರಣ ಸಂಸ್ಥೆಯ ತರುಣೋದಯ ಘಟಕದ ವತಿಯಿಂದ ಸದಸ್ಯ ಸಾಧಕರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಸಮ್ಮೇಳನದ ಲೇಖನ ಸ್ಪರ್ಧೆಯ ಪ್ರಥಮ ಬಹುಮಾನ ವಿಜೇತರಾದ ಡಾ.ಶೇಖರ್ ಗೌಳೇರ್, ಭಾರತೀಯ ವೈದ್ಯಕೀಯ ಶಿವಮೊಗ್ಗ ಘಟಕ ರಾಷ್ಟ್ರೀಯ ಪ್ರಶಸ್ತಿ ವಿಜೇತ ಅಧ್ಯಕ್ಷ ಡಾ. ಎಂ. ಎಸ್. ಅರುಣ್, ಕೌಸ್ತುಭಾ ಅರುಣ್, ಕಾರ್ಯದರ್ಶಿ ಡಾ.ರಕ್ಷ ರಾವ್, ಮಹಿಳಾ ಘಟಕದ ಅಧ್ಯಕ್ಷೆ ಡಾ. ವಿನಯ ಶ್ರೀನಿವಾಸ್, ವಿಶ್ವೇಶ್ವರಾಯ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಎಸ್. ಶ್ರೀಧರ್, ಡಾ. ಸಂಗೀತಾ, ಮತ್ತು ಬೆಂಗಳೂರು ಯುವಜನ ಚಾರಣ ಸಂಸ್ಥೆಯ ಸಮ್ಮೇಳನದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಡಾ.ಪ್ರಕೃತಿರವರನ್ನು ತರುಣೋದಯ ಘಟಕದ ವತಿಯಿಂದ ಸನ್ಮಾನಿಸಲಾಯಿತು.
Indian Culture Conference ಈ ಸಂದರ್ಭದಲ್ಲಿ ಆ. ನಾ. ವಿಜಯೇಂದ್ರ ರಾವ್, ಎನ್. ಗೋಪಿನಾಥ್, ಜಿ. ವಿಜಯಕುಮಾರ್, ಎಸ್. ಎಸ್. ವಾಗೀಶ್, ಸುರೇಶ್, ಉಮೇಶ್, ರಾಜು, ಮಲ್ಲಿಕಾರ್ಜುನ್, ಮಂಜುನಾಥ್, ನಟರಾಜ್, ಸುನಿಲ್, ಲಕ್ಷ್ಮೀ, ಮಮತ, ಭಾರತಿ, ಡಾ. ಶಾಂತ, ಸುಮಾರಾಣಿ, ಯಶೋಧ ಮೊದಲಾದವರು ಉಪಸ್ಥಿತರಿದ್ದರು.