Thursday, December 18, 2025
Thursday, December 18, 2025

Chikamagaluru DC Meena Nagaraj ಚಿಕ್ಕಮಗಳೂರು ನಗರಸಭೆ ಸಾಮಾನ್ಯ ಸಭೆ ನಿರ್ಣಯಗಳನ್ನ ಅನೂರ್ಜಿತಗೊಳಿಸಲು ಮನವಿ

Date:

Chikamagaluru DC Meena Nagaraj ಕಳೆದ ತಿಂಗಳು ನಡೆದ ನಗರಸಭೆಯ ಸಾಮಾನ್ಯಸಭೆ ಊರ್ಜಿತವಲ್ಲ, ಸಭೆಯ ಎಲ್ಲಾ ವಿಷಯಗಳ ಅನುಮೋದನೆಗೆ ತಡೆಯಾಜ್ಞೆ ನೀಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಬಿಜೆಪಿ ಹಾಗೂ ಜೆಡಿಎಸ್ ನಗರಸಭಾ ಸದಸ್ಯರುಗಳು ವಕೀಲರ ಮೂಲಕ ಅಪೀಲು ಸಲ್ಲಿಸಿದರು.

ಈ ಸಂಬoಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ನಗರಸಭಾ ಸದಸ್ಯರು ಗಳು ಸಾಮಾನ್ಯ ಸಭೆಯ ಯಾವುದೇ ವಿಷಯಕ್ಕೂ ಅನುಮೋದನೆ ನೀಡಬಾರದು ವಕೀಲ ದಯಾನಂದ್ ಮುಖಾoತರ ಒತ್ತಾಯಿಸಿದರು.

ವಕೀಲ ದಯಾನಂದ್ ಮಾತನಾಡಿ ತಡೆಯಾಜ್ಞೆ ಅರ್ಜಿ ಸಂಬoಧ ಜ.9ರಂದು ವಿಚಾರಣೆ ನಡೆಯಲಿದ್ದು ಸಭೆಯು ಸಂಪೂರ್ಣ ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಿದ್ಧವಾಗಿದ್ದು ಅನುಮೋದನೆ ಕಾರ್ಯರೂಪಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ಬಳಿಕ ಮಾತನಾಡಿದ ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ನಗರಸಭೆ ರೆಸುಲೂಷನ್ ಪಾಸ್ ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯುವ ಮೊದಲು ಸಭೆಯನ್ನು ಅಮಾನ ತ್ತಿನಲ್ಲಿಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.

Chikamagaluru DC Meena Nagaraj ನಗರಸಭೆಯಲ್ಲಿ ಬಹುಮತ ಇಲ್ಲವೆಂದು ಈ ಮೊದಲೇ ಜಿಲ್ಲಾಧಿಕಾರಿಗೆ ತಿಳಿಸಲಾಗಿತ್ತು. ಜನರ ತೆರಿಗೆ ಹಣ ಲೂಟಿ ಹೊಡೆಯುವ ಹುನ್ನಾರ ಅನುಮಾನವಿದೆ. ಹೀಗಾಗಿ ನ್ಯಾಯಬದ್ಧ ಯಾವುದೇ ಹೋರಾಟಕ್ಕೆ ಸದಸ್ಯರುಗಳು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಕ್ಷಣ ತಡೆಯಾಜ್ಞೆ ಕೊಡಲು ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಸದಸ್ಯರುಗಳಾದ ಟಿ.ರಾಜಶೇಖ ರ್, ಮಧುಕುಮಾರ್ ರಾಜ್ ಅರಸ್ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...

Department of Agriculture 2026 ಜನವರಿ 6. ಕೃಷಿ ಇಲಾಖೆಯಿಂದ “ಸಿರಿಧಾನ್ಯ & ಮರೆತು ಹೋದ ಖಾದ್ಯಗಳ ಪಾಕ ತಯಾರಿ” ಸ್ಪರ್ಧೆ

Department of Agriculture ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ...

Shivamogga Police ಶಿಕಾರಿಪುರ- ಚುರ್ಚುಗುಂಡಿಯಿಂದ ಯುವಕ ನಾಪತ್ತೆ, ಪೊಲೀಸ್ ಪ್ರಕಟಣೆ

Shivamogga Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...