Chikkamagalur Welfare Association ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾಗಿ ಎನ್.ಎಸ್.ಜಗನ್ನಾಥ್ ಹಾಗೂ ಗೌರವ ಅಧ್ಯಕ್ಷರಾಗಿ ದಿವಾಕರ್ ಅವರು ಅವಿರೋಧವಾಗಿ ಆಯ್ಕೆಯಾದರು.
ಚಿಕ್ಕಮಗಳೂರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಿಡಿಓ ಜಿಲ್ಲಾ ಸಂಘದ ವತಿಯಿಂದ ನಡೆದ ಸಭೆಯಲ್ಲಿ ತಾಲ್ಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ವಿಶ್ವನಾಥಯ್ಯ, ಪ್ರಧಾನ ಕಾರ್ಯದರ್ಶಿ ಪಿ.ಲಕ್ಷ್ಮಣ್, ಖಜಾಂಚಿ ಜಿ.ಪಿ.ಸುಮ, ಸಂಘಟನಾ ಕಾರ್ಯದರ್ಶಿ ಎ.ಕೆ.ಕುಲದೀಪ್ ಆಯ್ಕೆಯಾಗಿದ್ದಾರೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಮತಿ ವಿಜಯ, ಸುಶ್ಮಿತಾಗೌಡ, ಚಂದನ್, ಮಂಜೇಗೌಡ ಅವರನ್ನು ನೇಮಿಸಲಾಗಿದೆ.
Chikkamagalur Welfare Association ಈ ಸಂದರ್ಭದಲ್ಲಿ ಪಿಡಿಓ ಜಿಲ್ಲಾ ಸಂಘದ ಅಧ್ಯಕ್ಷ ಸಿ.ಟಿ.ಯೋಗೀಶ್, ಗೌರವಾಧ್ಯಕ್ಷ ನಾಗರಾಜ್, ಉಪಾ ಧ್ಯಕ್ಷೆ ಶ್ರೀಮತಿ ಶಾಂತಿ, ಸಂಘಟನಾ ಕಾರ್ಯದರ್ಶಿಗಳಾದ ರಾಜ್ಕುಮಾರ್, ಸುರಯ್ಯಭಾನು, ಖಜಾಂಚಿ ಶೇಖರ್ ಹಾಗೂ ತಾ.ಪಂ. ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.