Shivamogga Police ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರ ನಿಯಮ ಪಾಲನೆ ಅರಿವು ಮೂಡಿಸುವ ಬೀದಿ ನಾಟಕ ಆಯೋಜಿಸಲಾಯಿತು.
ಅಂಡರ್ ಬ್ರಿಡ್ಜ್ ಸರ್ಕಲ್ ಬಳಿ ಯಮ ಮತ್ತು ಚಿತ್ರಗುಪ್ತ ವೇಷಧಾರಿಗಳು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದರೆ ಯಮಲೋಕಕ್ಕೆ ದಾರಿ ಸುಲಭ ಎಂದು ಜಾಗೃತಿ ಮೂಡಿಸಿದರು.
ವಿವಿಧ ಸಂಚಾರ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಭದ್ರಾವತಿ ಡಿವೈಎಸ್ಪಿ ನಾಗರಾಜ್, ಭದ್ರಾವತಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ್, ಭದ್ರಾವತಿ ನಗರ ಇನ್ಸ್ಪೆಕ್ಟರ್ ಶ್ರೀಶೈಲ್, ಪೇಪರ್ ಟೌನ್ ಇನ್ಸ್ಪೆಕ್ಟರ್ ನಾಗಮ್ಮ ಸೇರಿದಂತೆ ವಿವಿಧ ಠಾಣೆ ಸಿಬ್ಬಂದಿ ಇದ್ದರು.
Shivamogga Police ಭದ್ರಾವತಿ ಜನ್ನಾಪುರದ ಡಾ. ಬಿ.ಆರ್. ಅಂಬೇಡ್ಕರ್ ಜಾನಪದ ಕಲಾ ಸಂಘದ ತಮಟೆ ಜಗದೀಶ್ ತಂಡ ಬೀದಿ ನಾಟಕ ನಡೆಸಿತು.
