Saturday, December 6, 2025
Saturday, December 6, 2025

B. Y. Raghavendra ಈ ಆಶೀರ್ವಾದ- ಪುರಸ್ಕಾರ ನನ್ನನ್ನು ಇನ್ನಷ್ಟು ವಿನೀತನನ್ನಾಗಿ ಮಾಡಿದೆ- ಸಂಸದ ಬಿ.ವೈ.ರಾಘವೇಂದ್ರ

Date:

B. Y. Raghavendra ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್ ವತಿಯಿಂದ ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಸಮಾರಂಭದಲ್ಲಿ ಬಿ.ವೈ ರಾಘವೇಂದ್ರ ಅವರ ದಂಪತಿಯನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು,
ನನಗೆ ನಿಜವಾಗಿಯೂ ಗೊತ್ತಿಲ್ಲ. ನಾನು ಇಂಥದ್ದೊಂದು ಗೌರವ ಪಡೆಯುವುದಕ್ಕೆ ಎಷ್ಟು ಪುಣ್ಯ ಮಾಡಿದ್ದೆನೋ ಅನ್ನುವುದು.
ನನ್ನ ಪಾಲಿಗೆ ಸದಾ ಪೂಜನೀಯರುಗಳಾದ ಜಗದ್ಗುರುಗಳ ಸನ್ನಿಧಿಯಲ್ಲಿ ನನಗೆ ನೆನ್ನೆ ಸಿಕ್ಕ ಆಶೀರ್ವಾದ-ಪುರಸ್ಕಾರ ನನ್ನನ್ನು ಇನ್ನಷ್ಟು ವಿನೀತನನ್ನಾಗಿ, ಹೊಣೆಗಾರನನ್ನಾಗಿ ಮಾಡಿದೆ. ಜೊತೆಗೆ, ಇಂಥಾ ಪೂಜನೀಯರ ಶ್ರೀರಕ್ಷೆ ನನಗೆ ದೊರೆತಿದೆಯೆಂಬ ಭಾವವೇ ನನ್ನಲ್ಲಿ ಇನ್ನಷ್ಟು ಆತ್ಮ ವಿಶ್ವಾಸ ತುಂಬಿದೆ, ಸಾರ್ವಜನಿಕ ಬದುಕಿನಲ್ಲಿ ನಾನು ನಡೆಯುತ್ತಿರುವ ದಾರಿ ಸರಿಯಾಗಿದೆ ಅನ್ನುವ ನಂಬಿಕೆ ಕೊಟ್ಟಿದೆ ಎಂದು ಹೇಳಿದರು.

B. Y. Raghavendra ನನ್ನನ್ನು ಹರಸಿದ ಎಲ್ಲ ಪೂಜನೀಯರಿಗೂ ನನ್ನ ತುಂಬು ಹೃದಯದ ಕೃತಜ್ಞತೆಗಳು. ಅವರ ಆಶೀರ್ವಾದವನ್ನು ಸದಾ ಸತ್ಕಾರ್ಯಗಳಿಗೆ ಬಳಸಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತೇನೆ ಅನ್ನುವ ಭರವಸೆ ನನ್ನದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...