ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಕರ್ನಾಟಕ ಸರ್ಕಾರ ವತಿಯಿಂದ
ರಾಜ್ಯಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಶಾಲಾ ಬಾಲಕ ಬಾಲಕಿಯರ ಕರಾಟೆ ಪಂದ್ಯಾವಳಿ – 2023 ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
SGFI (ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ರಾಜ್ಯ ಕರಾಟೆ ಪಂದ್ಯಾವಳಿಯಲ್ಲಿ ವಿಜಯ್ ನಾಯ್ಕ್ ಹಾಗೂ ತೇಜಸ್ವಿನಿ ಮಗನಾದ ಸೇವಾಲಾಲ್ ನಗರದ ಪ್ರೀತಮ್ .ವಿ ಮತ್ತು ಸಂತೋಷ್ ಹಾಗೂ ಸುಮಾ ಅವರ ಮಗಳಾದ ಬೊಮ್ಮನಕಟ್ಟೆ ಯ ಶೀತಲ್ ಪ್ರಥಮ ಸ್ಥಾನ ಪಡೆದು 17 ,18 ಮತ್ತು 19 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದಂತಹ ಕ್ರೀಡಾಪಟುಗಳಿಗೆ ಏ ಝೆಡ್ ಮಾರ್ಷಿಯಲ್ ಆರ್ಟ್ಸ್ ನ ಅಧ್ಯಕ್ಷರಾದ ಎ. ಝೆಡ್ ಮುಹೀಬ್ ಹಾಗೂ
ತರಬೇತುದಾರರಾದ ಸನ್ ಸೈ ನವೀನ್, ಸನ್ ಸೈ ಸಾದಿಕ್, ಸನ್ ಸೈ ಮಂಜುನಾಥ್ ನವರು ಅಭಿನಂದಿಸಿದ್ದಾರೆ.