Saturday, September 28, 2024
Saturday, September 28, 2024

Klive Special Article ಯಮ ದ್ವಿತೀಯ

Date:

Klive Special Article ಲೇ: ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ

ದೀಪಾವಳಿಯು ಐದು ದಿನಗಳ ಹಬ್ಬವಾಗಿದೆ.
ಆದರೆ, ಈಗಿನ ದಿನಗಳಲ್ಲಿ ಮೂರುದಿನಗಳು ಹಬ್ಬವನ್ನು ಆಚರಿಸುವುದು ರೂಢಿಗೆ ಬಂದಿದೆ.ಐದು ದಿನಗಳ ಹಬ್ಬಎಂದರೆಮೊದಲದಿನನೀರುತುಂಬುವುದು,ಎರಡನೇ ದಿನ ನರಕ ಚತುರ್ದಶಿ,ಮೂರನೇ ದಿನ ದೀಪಾವಳಿ ಅಮಾವಾಸ್ಯೆ,ನಾಲ್ಕನೇದಿನ ಬಲಿಪಾಡ್ಯಮಿ ಮತ್ತು ಐದನೇದಿನ ಯಮ ದ್ವಿತೀಯ ಹಬ್ಬ.

ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಿತೀಯ ದಿನದಂದು
ಸಹೋದರರು ಮದುವೆಯಾದ ಸಹೋದರಿಯರ
ಮನೆಗೆ ಹೋಗಿ ಊಟ ಮಾಡಿಬರುವುದು ಈ ದಿನದ
ವಿಶೇಷ. ಈ ದಿನವನ್ನು ಯಮದ್ವಿತೀಯ ಎಂದು ಕರೆಯುತ್ತಾರೆ. ಯಮಧರ್ಮರಾಯ ತನ್ನ ಸಹೋದರಿ ಯಮುನೆ(ಯಮುನಾನದಿ..ಸೂರ್ಯ-ಸಂಜ್ಞಾ ದೇವಿಯರ ಮಗಳು)ಯ ಮನೆಗೆ ಹೋಗಿ ಅಲ್ಲಿ
ಸಹೋದರಿ ನೀಡಿದ ಆತಿಥ್ಯ ಸ್ವೀಕರಿಸಿ ಯಮಧರ್ಮ
ರಾಜನು ಸಹೋದರಿಗೆ ಅನುಗ್ರಹಿಸುತ್ತಾನೆ.

ಈ ಸಂತೋಷದ ಸಂದರ್ಭದಲ್ಲಿ ಯಮಧರ್ಮನು
ಸಹೋದರಿಗೆ ಒಂದು ವರವನ್ನು ಕೇಳುವಂತೆ ಹೇಳು
ತ್ತಾನೆ.ಅದಕ್ಕೆ ಯಮುನೆಯು ಅಣ್ಣಾ ನನಗೆ ಯಾವುದೇ ವರವೂ ಬೇಡ,ಪ್ರತಿವರ್ಷ ಇದೇ ರೀತಿ
ಪ್ರೀತಿಯಿಂದ ನಮ್ಮ ಮನೆಗೆ ಈ ದ್ವಿತೀಯದಂದು
ಬರಬೇಕೆಂದು ಪ್ರಾರ್ಥಿಸುತ್ತಾಳೆ. ಯಮುನೆಯ
ಕೋರಿಕೆಯನ್ನು ಕೇಳಿ ಅವಳಿಗೆ ಮತ್ತು ಎಲ್ಲಾ ಸಹೋದರರಿಗೂ ಒಳ್ಳೆಯದಾಗುವಂತೆ ಒಂದು ವರವನ್ನು ಕೊಡುತ್ತಾನೆ. “ಯಾರು ಕಾರ್ತಿಕ ಶುದ್ಧ ದ್ವಿತೀಯದಂದು ಸಹೋದರರನ್ನು ಕರೆಸಿ ಸಂತೋಷದಿಂದ ಅವರಿಗೆ ಊಟವನ್ನು ಮಾಡಿಸು
ತ್ತಾರೋ,ಅಂತಹ ಸಹೋದರಿಯ ಮನೆಯಲ್ಲಿ
ಊಟಮಾಡಿದ ಸಹೋದರನಿಗೆ ದೀರ್ಘಾಯುಷ್ಯ
ವಂತನಾಗುವಂತೆ ಅನುಗ್ರಹಿಸುವುದಲ್ಲದೇ,ಆದರಿಸಿದ
ಸಹೋದರಿಗೆ ಸಕಲ ಸನ್ಮಂಗಲ ಸೌಭಾಗ್ಯವು ದೊರೆಯುವುದು ಎಂದುವರವನ್ನುಅನುಗ್ರಹಿಸುತ್ತಾನೆ.

Klive Special Article ಯಮದ್ವಿತೀಯ ಹಬ್ಬ ಎಲ್ಲರಿಗೂ ಸನ್ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...