Shivamogga Dussehra ಶಮಿ ಶಮಿಯತೇ ಪಾಪಂ | ಶಮೆ ಶತ್ರು ನಿವಾರ್ಣಂ
ಅರ್ಜುನಸ್ಯ ಧನುರ್ಧಾರೆ | ರಾಮಸ್ಯ ಪ್ರಿಯದರ್ಶನಂ ||
ದುಷ್ಟರ ವಿರುದ್ಧ ವಿಜಯದ ಸಂಕೇತವನ್ನು ಸಾರುವ ಹಬ್ಬವೇ ವಿಜಯದಶಮಿ. ಈ ಹಬ್ಬ ಕೇವಲ ದುರ್ಗಾ ದೇವಿಯಿಂದ ಮಹಿಷಾಸುರನ ಸಂಹಾರಕ್ಕೆ ಸಂಬಂಧಿಸಿದ ಹಬ್ಬವಲ್ಲ. ಬದಲಾಗಿ, ಇದು ರಾಮಾಯಣದೊಂದಿಗೆ, ಮಹಾಭಾರತದೊಂದಿಗೂ ಸಂಬಂಧವನ್ನು ಹೊಂದಿರುವ ಹಬ್ಬವಾಗಿದೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚನ್ನಬಸಪ್ಪನವರು ತಿಳಿಸಿದರು.
Shivamogga Dussehra ಶಿವಮೊಗ್ಗ ಮಹಾನಗರ ಪಾಲಿಕೆ ನೇತೃತ್ವದಲ್ಲಿ ನಡೆದ ನಾಡಹಬ್ಬ ದಸರಾ ಮಹೋತ್ಸವ ಅತ್ಯಂತ ಅದ್ದೂರಿಯಾಗಿ, ಯಶಸ್ವಿಯಾಗಿ ಮುಗಿದಿದೆ. ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನೆಗೊಂಡು, ಹತ್ತು ದಿನಗಳ ಕಾಲ 14 ಸಮಿತಿಗಳ ಅಡಿಯಲ್ಲಿ ನಡೆದ ನೂರಾರು ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಕಾರಣಿಭೂತರಾದ ಮಹಾಪೌರರು, ಉಪ ಮಹಾಪೌರರು, ಮಹಾನಗರ ಪಾಲಿಕೆಯ ಸದಸ್ಯರು, ಅಧಿಕಾರಿಗಳು, ನೌಕರರ ವೃಂದದವರು, ಜಿಲ್ಲಾಡಳಿತ ಹಾಗೂ ರಕ್ಷಣಾ ಇಲಾಖೆ ಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.