Thursday, October 3, 2024
Thursday, October 3, 2024

ವಿಜಯ್ ಹಜಾರೆ ಟ್ರೋಫಿ ಟೂರ್ನಿ: ಕರ್ನಾಟಕಕ್ಕೆ ಮೊದಲ ಜಯ.

Date:

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯವು ಕರ್ನಾಟಕ ಮತ್ತು ಪುದುಚೇರಿ ತಂಡಗಳ ನಡುವೆ ಪಂದ್ಯ ನಡೆಯಿತು. ಪುದುಚೇರಿ ವಿರುದ್ಧ ಕರ್ನಾಟಕ ರೋಚಕ ಜಯ ಸಾಧಿಸಿದೆ.

ತಿರುವನಂತಪುರದ ಮಂಗಳಪುರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೆರಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತ್ತು.

ಮೊದಲ ವಿಕೆಟ್ ಜೊತೆಯಾಟದಲ್ಲಿ ಆಡಿದ ರೋಹನ್ ಕದಂ ಹೆಚ್ಚು ಹೊತ್ತು ಆಡಲಿಲ್ಲ, ಪುದುಚೆರಿಯ ಬೌಲರ್ ಸುಭೋದ್ ಭಾಟಿ ಅವರ ಅಮೋಘ ಬೌಲಿಂಗ್ ನಿಂದ ಮೊದಲ ಓವರ್ ನಲ್ಲಿಯೇ ರೋಹನ್ ವಿಕೆಟ್ ಅನ್ನು ಕಬಳಿಸಿಕೊಂಡರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಆರ್.ಸಮರ್ಥ್ (107) ಎಸೆತಗಳಲ್ಲಿ (10) ಬೌಂಡರಿ ಸಿಡಿಸಿ 95 ರನ್ ಗಳಿಸಿಕೊಂಡರು ಮತ್ತು ಕೆ.ವಿ.ಸಿದ್ದಾರ್ಥ್ 93 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 61 ರನ್ ಗಳಿಸಿಕೊಂಡರು. ಇವರ ಅಮೋಘ ಬ್ಯಾಟಿಂಗ್ ನಿಂದಾಗಿ 154 ರನ್ ಗಳನ್ನ ತಂಡಕ್ಕೆ ಸೇರಿಸಿದರು. ಆದರೆ ಇವರ ಅಮೋಘ ಬ್ಯಾಟಿಂಗ್ ಮಾಡುತ್ತಿರುವಾಗಲೇ ಸಿದ್ದಾರ್ಥ್ ಮತ್ತು ಸಮರ್ಥ್ ವಿಕೆಟ್ ಗಳು ಪತನವಾದವು, ಷಬೀದ್-ಅಹಮದ್ಧ್ 33ನೇ ಓವರ್ ನಲ್ಲಿ ಸಿದ್ದಾರ್ಥ್ ವಿಕೆಟ್ ಕಬಳಿಸಿಕೊಂಡರೆ ಶತಕದತ್ತ ದಾಪುಗಾಲು ಇಟ್ಟಿದ್ದ ಸಮರ್ಥ್, ಸಾಗರ್ ತ್ರಿವೇದಿ ತಡೆಯೊಡ್ಡಿ ಜೊತೆಯಾಟ ಮುರಿದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಮನೀಷ್ ಪಾಂಡೆ ಔಟಾಗದೆ 64ರನ್‌ಗಳಿಸಿಕೊಂಡರು ಮತ್ತು ವಿಕೆಟ್ ಕೀಪರ್- ಬ್ಯಾಟರ್ ಶರತ್ ಶ್ರೀನಿವಾಸ್ 42 ಎಸೆತಗಳಲ್ಲಿ ಗಳಿಸಿಕೊಂಡು ತಂಡದ ಮೊತ್ತ 288 ಗಳಿಸಲು ತಂಡಕ್ಕೆ ಇವರಿಬ್ಬರು ಆಸರೆಯಾದರು.

289 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿ ಆಡಿದ ಪುದುಚೇರಿ ತಂಡ 17. 3 ಓವರ್ಗಳಲ್ಲಿ 53 ರನ್ ಗಳಿಸಿ ಆಲ್ – ಔಟ್ ಆಯಿತು.
ಮಧ್ಯಮ ವೇಗಿ ವಾಸುಕಿ ಕೌಶಿಕ್ ಮತ್ತು ಸ್ಪಿನ್ನರ್ ಜಗದೀಶ ಸುಚಿತ್ ಅವರ ಅಮೋಘ ಬೌಲಿಂಗ್ ನಿಂದ ಪುದುಚೇರಿ ತಂಡದ ವಿಕೆಟ್ಗಳು ತರಗೆಲೆಯಂತೆ ಉದುರಿದವು.
ಪುದುಚೇರಿ ತಂಡದಲ್ಲಿರುವ ಕನ್ನಡಿಗ ಪವನ್ ದೇಶಪಾಂಡೆ 25 ಗಳಲ್ಲಿ 3 ಬೌಂಡರಿ ಬಾರಿಸಿ 16 ರನ್ ಗಳಿಸಿ ಕೊಂಡರು. ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡುವಾಗಲೇ, ರೋಹನ್ ಕದಂ ಚುರುಕಿನ ಫೀಲ್ಡಿಂಗ್ ಮತ್ತು ನಿಖರ ಥ್ರೋ ನಿಂದಾಗಿ ರನ್ – ಔಟ್ ಆದರು.

ನಾಲ್ಕನೇ ಓವರ್ನಲ್ಲಿ ಕರ್ನಾಟಕದ ವಿದ್ಯಾಧರ್ ಪಾಟೀಲ ಮೊದಲ ಹೊಡೆತ ಕೊಟ್ಟರು. ಎಸ್.ಕಾರ್ತಿಕ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರದ ಬೇಟೆಯ ಕೆಲಸವನ್ನು ವಿ. ಕೌಶಿಕ್ ನಿಭಾಯಿಸಿ ಮುಂದುವರೆಸಿದರು. ಗೋವಿಂದರಾಜನ್ ರೋಹಿತ್ ಮತ್ತು ಕಾರ್ತಿಕೇಯನ್ ಜಯಸುಂದರ ವಿಕೆಟ್ ಗಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Navaratri Festival ಬಂಗಾರಮಕ್ಕಿಯಲ್ಲಿ ಶರನ್ನವರಾತ್ರಿ ಉತ್ಸವ

Navaratri Festival ಬಂಗಾರಮಕ್ಕಿಯ ಹೇಮಪುರ ಮಹಾಪೀಠದ ಶ್ರೀ ವಿಶ್ವ ವೀರಾಂಜನೇಯ...

Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ Navaratri Festival ವಂದೇ ವಾಂಛಿತ ಲಾಭಾಯಚಂದ್ರಾರ್ಧಕೃತಶೇಖರಂ/ವೃಷಾರೂಢಂ...

Gandhi Jayanthi ನಗರದ ರೋವರ್ಸ್ ಕ್ಲಬ್ ನಲ್ಲಿ ಗಾಂಧಿ ಜಯಂತಿ ಆಚರಣೆ

Gandhi Jayanthi ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ...

B.Y.Raghavendra ಸಾರ್ವಜನಿಕ ಉದ್ಯಮಗಳು & ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಸಂಸದ ರಾಘವೇಂದ್ರರಿಗೆ ಅಭಿನಂದನೆ

B.Y.Raghavendra ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ,...