VISL Bhadravati ಸ್ವಚ್ಛತೆಗಾಗಿ ಶ್ರಮದಾನ’ ದ ಅಂಗವಾಗಿ ಸೈಲ್-ವಿಐಎಸ್ಎಲ್ ವತಿಯಿಂದ ಈ ಕೆಳಗಿನ ಸ್ಥಳಗಳಲ್ಲಿ 01ನೇ ಅಕ್ಟೋಬರ್, ರಂದು ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು.
೧. ತರಂಗ ಕಿವುಡು ಮಕ್ಕಳ ಶಾಲೆ, ಭದ್ರಾವತಿ
೨. ಸಿದ್ಧಾರ್ಥ ಅಂಧರ ವಿಕಾಸ ಕೇಂದ್ರ, ಭದ್ರಾವತಿ
VISL Bhadravati ವಿಐಎಸ್ಎಲ್ ಸಮುದಾಯ, ತರಂಗ ಕಿವುಡುಮಕ್ಕಳ ಶಾಲೆ ಮತ್ತು ಸಿದ್ಧಾರ್ಥ ಅಂಧರ ಕೇಂದ್ರದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು, ಅಪ್ಪರ್ ಹುತ್ತಾ ಗೆಳೆಯರ ಬಳಗ, ಭದ್ರಾವತಿ, ಲಯನ್ಸ್ ಕ್ಲಬ್, ಭದ್ರಾವತಿ ಮತ್ತು ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡವು ಒಂದು ಗಂಟೆಗಳ ಕಾಲ ‘ಒಂದನೇ ತಾರೀಖು, ಒಂದು ಗಂಟೆ, ಒಟ್ಟಿಗೆ ಅಭಿಯಾನ’ ಈ ಸ್ವಚ್ಛತೆಗಾಗಿ ಶ್ರಮದಾನದಲ್ಲಿ ಸುಮಾರು ೨೫೦ ಜನರು ಭಾಗವಹಿಸಿ ಈ ಶಾಲೆಗಳ ಸಮುಚ್ಛಯವನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾದರು.
ಹಾಗೂ ಸ್ವಚ್ಛತಾ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೆ.ಎಸ್. ಸುರೇಶ್, ಪ್ರಭಾರಿ ಕಾರ್ಯಪಾಲಕ ನಿರ್ದೇಶಕರು, ವಿಐಎಸ್ಎಲ್ ನೆರವೇರಿಸಿದರು.
ಕಾರ್ಯಕ್ರಮನ್ನು ವಿಐಎಸ್ಎಲ್ನ ಸಿಬ್ಬಂದಿ, ಸಾರ್ವಜನಿಕ ಸಂಪರ್ಕ, ನಗರಾಡಳಿತ ವಿಭಾಗ ಆಯೋಜಿಸಿತ್ತು.
ಶ್ರೀಮತಿ ಕೆ.ಎಸ್. ಶೋಭ, ಸಹಾಯಕ ಪ್ರಬಂಧಕರು (ಸಿಬ್ಬಂದಿ) ಕಾರ್ಯಕ್ರಮದ ನೋಡಲ್ ಆಫೀಸರ್ ಆಗಿದ್ದರು