ನಮ್ಮ ನೀರು ನಮ್ಮ ಹಕ್ಕು. ಮೇಕೆದಾಟು ಯೋಚನೆ ಆಗಲೇಬೇಕು. ಹಳೆ ಮೈಸೂರು ಭಾಗದ ರೈತರನ್ನು ರಕ್ಷಣೆ ಮಾಡಬೇಕು. ಆದ್ದರಿಂದ ಮೇಕೆದಾಟು ಯೋಜನೆ ಜಾರಿಗೆ ಜಾರಿಯಾಗಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಕುಮಾರ್ ಅವರು ತಿಳಿಸಿದ್ದಾರೆ.
‘ಯೋಜನೆ ಪ್ರಾರಂಭವಾಗಲು ಎಲ್ಲಾ ರೀತಿಯ ಅನುಮತಿ ಸಿಕ್ಕಿದೆ. ಯಾವುದೇ ನ್ಯಾಯಾಲಯದ ತಡೆಯಿಲ್ಲ. ಆದರೂ ಕೇಂದ್ರ ಸರ್ಕಾರ ಮಾತ್ರ ಕೆಲಸ ಮಾಡಲು ಅನುಮತಿ ನೀಡುತ್ತಿಲ್ಲ. ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಲಭಿಸುತ್ತದೆ. ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಇದರ ಜೊತೆಗೆ ರೈತರ ಕೃಷಿಗೆ ನೀರು ಮತ್ತು ತಮಿಳುನಾಡಿಗೆ ನೀರು ಹರಿಸಬಹುದು. ಇದರಿಂದ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ’ ಎಂದು ಕೂಡ ತಿಳಿಸಿದರು.
ಈ ಯೋಜನೆಯ ಕೆಲಸ ಪ್ರಾರಂಭವಾಗಬೇಕು. ಈ ಬಗ್ಗೆ ನಮ್ಮ ಪಕ್ಷದಿಂದ ಹೋರಾಟ ಮಾಡುತ್ತೇವೆ. ಜನವರಿ ಮೊದಲ ವಾರದಿಂದ ಮೇಕೆದಾಟು ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುತ್ತೇವೆ. ಹತ್ತರಿಂದ ಹದಿನೈದು ದಿನಗಳ ಕಾಲ ಪಾದಯಾತ್ರೆ ಮಾಡುತ್ತೇವೆ. ಇದು ನಮ್ಮ ನೀರಿನ ಹಕ್ಕಿನ ಪ್ರಶ್ನೆ. ಮೇಕೆದಾಟು ಯೋಜನೆಯ ಹೋರಾಟದಲ್ಲಿ ಪಾಲ್ಗೊಳ್ಳುವವರಿಗೆ ಪ್ರಮಾಣಪತ್ರ ನೀಡುತ್ತೇವೆ. ಮಂಡ್ಯ ಭಾಗದ ಎಲ್ಲಾ ಜನರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.