Friday, September 27, 2024
Friday, September 27, 2024

Green Hero Program ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಗಳಲ್ಲಿ ಗ್ರೀನ್ ಹೀರೋ ಕಾರ್ಯಕ್ರಮ ಮುಂದುವರಿಕೆ-ಡಾ.ಭಾವನಾ

Date:

Green Hero Program ಮಕ್ಕಳ ಮನಸ್ಸಿನಲ್ಲಿ ಬಾಂಧವ್ಯದ ಬೆಸುಗೆ ಜೊತೆಗೆ ಸ್ವಂತ ಶ್ರಮದಿಂದ ಗಿಡವನ್ನು ಅತ್ಯಂತ ಮುತುವರ್ಜಿಯಿಂದ ಬೆಳೆಸುವ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ ಪಿ ಆರ್ ಎಸ್ ಎ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತ ಶಿವಮೊಗ್ಗ ಗ್ರಾಮಾಂತರ ಭಾಗದ ಮೂರು ಶಾಲೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಸಸ್ಯಗಳನ್ನು ನೀಡುವ ಜೊತೆಗೆ ಅವರನ್ನು ಹುರಿದುಂಬಿಸುವ ಕೆಲಸವನ್ನು ಮಾಡುವ ಮೂಲಕ ತನ್ನ ಸಂಸ್ಥೆಯ ಮಹದುದ್ದೇಶದ ‘ಗ್ರೀನ್ ಹೀರೋ’ ಯೋಜನೆಗೆ ಚಾಲನೆ ನೀಡಿದೆ.

ಸೆಂಟರ್ ಪಾಲಿಸಿ ರಿಸರ್ಚ್ ಅಂಡ್ ಸೋಶಿಯಲ್ ಆಕ್ಷ್ಯನ್ ಸಂಸ್ಥೆಯು ಹಮ್ಮಿಕೊಂಡಿರುವ ಹತ್ತಾರು ಪ್ರಮುಖ ಉದ್ದೇಶಗಳ ಜೊತೆಗೆ ಮಗುವಿನ ಮನಸ್ಸಿನಲ್ಲಿ ಕುಟುಂಬದವರ ಅದರಲ್ಲೂ ತಾಯಿಯ ಬಾಂಧವ್ಯವನ್ನು ಗ್ರೀನ್ ಹೀರೋ ಕಾರ್ಯಕ್ರಮ ಬಿಂಬಿಸಿರುವುದು ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿದೆ.

ಮಗು ತಾನು ಪಡೆಯುವಬ ಸಸ್ಯವನ್ನು ಅತ್ಯಂತ ಜೋಪಾನವಾಗಿ ತಮ್ಮ ಮನೆಯ ಅಂಗಳದಲ್ಲಿ ಬೆಳೆಸುವ ಜೊತೆಗೆ ಆ ಗಿಡಕ್ಕೆ “ತಾಯಿ”ಯ ಹೆಸರನ್ನು ಇಡುವಂತಹದಾಗಿದೆ.

ಒಂದು ವರ್ಷದ ನಂತರ ಆ ಮಗು ಬೆಳೆಸಿದ ಗಿಡವನ್ನು ಪರಿಶೀಲಿಸುವ ಜೊತೆಗೆ ಅವರನ್ನು ಪ್ರೋತ್ಸಾಹಿಸಲು ಬಹುಮಾನ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಪ್ರಸ್ತುತ ಅಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಯ್ ಹೊಳೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನುಪಿನ ಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದೆ.

ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿರುವ ಸಿಪಿಆರ್ ಎಸ್ ಕೆ ಸಂಸ್ಥೆಯ ಸಿಇಓ ಡಾ. ಭಾವನಾ, ನಿವೃತ್ತ ಶಿಕ್ಷಣಾಧಿಕಾರಿ ಪಿ. ಹಾಲಾನಾಯಕ್, ಪ್ರೊ. ಪ್ರದೀಪ್ ರಮಾವತ್ ಹಾಗೂ ಆಯಾ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು ಸ್ಥಳೀಯ ಗ್ರಾಮಸ್ಥರು ಪೋಷಕರು ಈ ಕಾರ್ಯಕ್ರಮದೊಂದಿಗೆ ಭಾಗವಹಿಸಿದ್ದರು.

ಮಕ್ಕಳ ಮನದಲ್ಲಿ ಪರಿಸರ ಹಾಗೂ ಬಾಂಧವ್ಯದ ಬೆಸುಗೆಯನ್ನು ನೀಡುತ್ತಿರುವ ಕಾರ್ಯಕ್ರಮವನ್ನು ಸಾರ್ಜನಿಕರು ಪ್ರಶಂಸಿದ್ದಾರೆ.

Green Hero Program ಮುಂದೆ ಬಹುತೇಕ ಸರ್ಕಾರಿ ಹಿರಿಯ ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಗ್ರೀನ್ ಹೀರೋ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸಿಇಓ ಡಾ. ಭಾವನಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...