Monday, June 23, 2025
Monday, June 23, 2025

Green Hero Program ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಗಳಲ್ಲಿ ಗ್ರೀನ್ ಹೀರೋ ಕಾರ್ಯಕ್ರಮ ಮುಂದುವರಿಕೆ-ಡಾ.ಭಾವನಾ

Date:

Green Hero Program ಮಕ್ಕಳ ಮನಸ್ಸಿನಲ್ಲಿ ಬಾಂಧವ್ಯದ ಬೆಸುಗೆ ಜೊತೆಗೆ ಸ್ವಂತ ಶ್ರಮದಿಂದ ಗಿಡವನ್ನು ಅತ್ಯಂತ ಮುತುವರ್ಜಿಯಿಂದ ಬೆಳೆಸುವ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ ಪಿ ಆರ್ ಎಸ್ ಎ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತ ಶಿವಮೊಗ್ಗ ಗ್ರಾಮಾಂತರ ಭಾಗದ ಮೂರು ಶಾಲೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಸಸ್ಯಗಳನ್ನು ನೀಡುವ ಜೊತೆಗೆ ಅವರನ್ನು ಹುರಿದುಂಬಿಸುವ ಕೆಲಸವನ್ನು ಮಾಡುವ ಮೂಲಕ ತನ್ನ ಸಂಸ್ಥೆಯ ಮಹದುದ್ದೇಶದ ‘ಗ್ರೀನ್ ಹೀರೋ’ ಯೋಜನೆಗೆ ಚಾಲನೆ ನೀಡಿದೆ.

ಸೆಂಟರ್ ಪಾಲಿಸಿ ರಿಸರ್ಚ್ ಅಂಡ್ ಸೋಶಿಯಲ್ ಆಕ್ಷ್ಯನ್ ಸಂಸ್ಥೆಯು ಹಮ್ಮಿಕೊಂಡಿರುವ ಹತ್ತಾರು ಪ್ರಮುಖ ಉದ್ದೇಶಗಳ ಜೊತೆಗೆ ಮಗುವಿನ ಮನಸ್ಸಿನಲ್ಲಿ ಕುಟುಂಬದವರ ಅದರಲ್ಲೂ ತಾಯಿಯ ಬಾಂಧವ್ಯವನ್ನು ಗ್ರೀನ್ ಹೀರೋ ಕಾರ್ಯಕ್ರಮ ಬಿಂಬಿಸಿರುವುದು ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿದೆ.

ಮಗು ತಾನು ಪಡೆಯುವಬ ಸಸ್ಯವನ್ನು ಅತ್ಯಂತ ಜೋಪಾನವಾಗಿ ತಮ್ಮ ಮನೆಯ ಅಂಗಳದಲ್ಲಿ ಬೆಳೆಸುವ ಜೊತೆಗೆ ಆ ಗಿಡಕ್ಕೆ “ತಾಯಿ”ಯ ಹೆಸರನ್ನು ಇಡುವಂತಹದಾಗಿದೆ.

ಒಂದು ವರ್ಷದ ನಂತರ ಆ ಮಗು ಬೆಳೆಸಿದ ಗಿಡವನ್ನು ಪರಿಶೀಲಿಸುವ ಜೊತೆಗೆ ಅವರನ್ನು ಪ್ರೋತ್ಸಾಹಿಸಲು ಬಹುಮಾನ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಪ್ರಸ್ತುತ ಅಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಯ್ ಹೊಳೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನುಪಿನ ಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದೆ.

ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿರುವ ಸಿಪಿಆರ್ ಎಸ್ ಕೆ ಸಂಸ್ಥೆಯ ಸಿಇಓ ಡಾ. ಭಾವನಾ, ನಿವೃತ್ತ ಶಿಕ್ಷಣಾಧಿಕಾರಿ ಪಿ. ಹಾಲಾನಾಯಕ್, ಪ್ರೊ. ಪ್ರದೀಪ್ ರಮಾವತ್ ಹಾಗೂ ಆಯಾ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು ಸ್ಥಳೀಯ ಗ್ರಾಮಸ್ಥರು ಪೋಷಕರು ಈ ಕಾರ್ಯಕ್ರಮದೊಂದಿಗೆ ಭಾಗವಹಿಸಿದ್ದರು.

ಮಕ್ಕಳ ಮನದಲ್ಲಿ ಪರಿಸರ ಹಾಗೂ ಬಾಂಧವ್ಯದ ಬೆಸುಗೆಯನ್ನು ನೀಡುತ್ತಿರುವ ಕಾರ್ಯಕ್ರಮವನ್ನು ಸಾರ್ಜನಿಕರು ಪ್ರಶಂಸಿದ್ದಾರೆ.

Green Hero Program ಮುಂದೆ ಬಹುತೇಕ ಸರ್ಕಾರಿ ಹಿರಿಯ ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಗ್ರೀನ್ ಹೀರೋ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸಿಇಓ ಡಾ. ಭಾವನಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...