Tuesday, December 9, 2025
Tuesday, December 9, 2025

ಹತ್ತನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ ಕಡಿತಗೊಂಡ ಪಠ್ಯ ಮಾಹಿತಿ

Date:

ಹತ್ತನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ ಕಡಿತಗೊಂಡ ಪಠ್ಯ ಮಾಹಿತಿ

ಕೋವಿಡ್ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 2021 -22 ನೇ ಸಾಲಿಗೆ ಪರೀಕ್ಷೆಗೆ ಪರಿಗಣಿಸಬಹುದಾದ ಮತ್ತು ಪರಿಗಣಿಸಬಾರದ ಪಠ್ಯಗಳ ಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬಿಡುಗಡೆ ಮಾಡಿದೆ.
ಕಡಿತಗೊಳಿಸಿರುವ ಪಠ್ಯಗಳ ಮಾಹಿತಿ,

ಪ್ರಥಮ ಭಾಷೆ ಕನ್ನಡದಲ್ಲಿ ಎಂಟನೇ ಅಧ್ಯಾಯ ‘ಸುಕುಮಾರಸ್ವಾಮಿ ಕತೆ’ ಹಾಗೂ ‘ಕೆಮ್ಮನೆ ಮೀಸೆವೊತ್ತೋನೆ’ ಪದ್ಯವನ್ನು ಬೋಧನೆಯಿಂದ ಕೈಬಿಡಲಾಗಿದೆ. ಇಂಗ್ಲಿಷ್ ನಲ್ಲಿ ಡಿಸ್ಕವರಿ, ಸೈನ್ಸ್ ಅಂಡ್ ಹೋಪ್ ಆಫ್ ಸರ್ವೈವಲ್, ದಿ ಬರ್ಡ್ ಆಫ್ ಹ್ಯಾಪಿನೆಸ್, ಎಂಬ ಪಾಠಗಳು ಹಾಗೂ ನೆಟ್ ಆಫ್ ದಿ ಟೆಂಪೆಸ್ಟ್, ಆಫ್ ಟು ಔಟರ್ ಸ್ಪೇಸ್ ಟುಮಾರೋ ಮಾರ್ನಿಂಗ್, ಎಂಬ ಪದ್ಯಗಳನ್ನು ಬೋಧನೆಗೆ ಪರಿಗಣಿಸಿಲ್ಲ.
8ನೇ ತರಗತಿಯಲ್ಲಿ ಈಗಾಗಲೇ ಅಧ್ಯಯನ ಮಾಡಿದ್ದು, ಅದರ ಮುಂದುವರಿಕೆ ಭಾಗವಾಗಿರುವ ಹಿಂದಿ ಭಾಷೆಯ ದುನಿಯಾ ಮೇ ಪಹಲಾ ಮಕಾನ್, ರೋಬೋಟ್, ಹಾಗೂ ಬಾಲ್ ಶಕಿತ್, ಪಠ್ಯಗಳನ್ನು ಬೋಧಿಸದಂತೆ ಸೂಚಿಸಲಾಗಿದೆ.
ಗಣಿತ ವಿಷಯದ 8ನೇ ಅಧ್ಯಾಯ ವಾಸ್ತವ ಸಂಖ್ಯೆಗಳು, 9ನೇ ಅಧ್ಯಾಯ ಬಹು ಪದೋಕ್ತಿಗಳು, ಹಾಗೂ ಸಂಭವನೀಯತೆ, ಎಂಬ 14ನೇ ಅಧ್ಯಾಯವನ್ನು ಬೋಧನೆ ಮಾಡಬಾರದು. ಸಮಾಜ ವಿಜ್ಞಾನ ಇತಿಹಾಸದಲ್ಲಿ ಹತ್ತನೇ ಅಧ್ಯಾಯ 20ನೇ ಶತಮಾನದ ರಾಜಕೀಯ ಆಯಾಮಗಳು, ರಾಜ್ಯಶಾಸ್ತ್ರದ ಐದನೇ ಅಧ್ಯಾಯ ಜಾಗತಿಕ ಸಂಸ್ಥೆಗಳು, ಸಮಾಜಶಾಸ್ತ್ರದ 4ನೇ ಅಧ್ಯಾಯ ಸಾಮಾಜಿಕ ಸಮಸ್ಯೆಗಳು, ಅನ್ನು ಬೋಧನೆ ಪರಿಗಣಿಸದಂತೆ ತಿಳಿಸಲಾಗಿದೆ.
ಇದರಂತೆ ವಿಜ್ಞಾನ ವಿಷಯದಲ್ಲಿ ಮೂರನೇ ಅಧ್ಯಾಯ ಲೋಹಗಳು ಮತ್ತು ಅಲೋಹಗಳು, 4ನೇ ಅಧ್ಯಾಯ ಕಾರ್ಬನ್ ಮತ್ತು ಅದರ ಸಂಯುಕ್ತ ಗಳು, 8ನೇ ಅಧ್ಯಾಯ ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ, ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು, ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ, ಎಂಬ ಪಾಠಗಳನ್ನು ಕೈಬಿಡಲಾಗಿದೆ.
ಸರಕಾರ ಈ ಹಿಂದೆ ಆದೇಶಿಸಿ ದಂತೆ, ಶೇಕಡ 20ರಷ್ಟು ಪಠ್ಯಕ್ರಮ ಕಡಿತಗೊಳಿಸಿರುವ ಡಿಎಸ್ಇಆರ್ ಟಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಿರುವ ಉಳಿದ ಶೇಕಡಾ 80ರಷ್ಟು ಪಠ್ಯಗಳ ಬಗ್ಗೆ ವಿವರಗಳನ್ನು ಪ್ರಕಟಿಸಿದೆ. ಮುಖ್ಯವಾಗಿ ಡಿಸೆಂಬರ್ ನಿಂದ ಮಾರ್ಚ್ ಅವಧಿಯೊಳಗೆ ಬೋಧನೆ ಮಾಡಬೇಕಿದ್ದ ಪಾಠಗಳನ್ನು ಕಡಿತ ಮಾಡಲಾಗಿದೆ.
ಕಡಿತ ಮಾಡಿರುವ ಪಠ್ಯಗಳ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ ನಲ್ಲಿ ನೋಡಬಹುದು http://dsert.kar.nic.in

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

L.B. Colleges ಸಾಗರದ ಎಲ್ .ಬಿ‌.ಕಾಲೇಜಿನ ಮುಖ್ಯದ್ವಾರಕ್ಕೆ ಶಿಲಾನ್ಯಾಸ.

L.B. Colleges ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನೆಡೆಸುತ್ತಿರುವ ಲಾಲ್ ಬಹದ್ದೂರ್ ಕಲಾ,...

Shimoga News ಮಕ್ಕಳು ಉತ್ಸಾಹದ ಚಿಲುಮೆಗಳು.ಉತ್ತಮ ಊಟ ಆಟ ಪಾಠದೊಂದಿಗೆ ಸಮಾಜದ ಅಭಿವೃದ್ಧಿ- ನ್ಯಾ.ಎಂ.ಎಸ್.ಸಂತೋಷ್

Shimoga News ಮಕ್ಕಳು ಉತ್ಸಾಹದ ಚಿಲುಮೆಗಳಾಗಿದ್ದು, ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿ...

YADAV School Of Chess ಆನ್ ಲೈನ್ ಮೂಲಕಹಿಂದುಳಿದ & ಬಡಮಕ್ಕಳಿಗೆಒಂದು ತಿಂಗಳ ಚೆಸ್ ಕ್ರೀಡಾ ತರಬೇತಿ

YADAV School Of Chess ರಾಜೇಂದ್ರ ನಗರದಲ್ಲಿರುವ ಪ್ರತಿಷ್ಠಿತ ಯಾದವ ಸ್ಕೂಲ್...

Vallabhbhai Patel ಭ್ರಷ್ಟಾಚಾರವು ದೇಶದ ಆಂತರಿಕ ಶತ್ರು.- ಡಾ.ಹೆಚ್.ಬಿ.ಮಂಜುನಾಥ್

ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಸ್ಮರಣೆಯಲ್ಲಿ ಹಿರಿಯ ಪತ್ರಕರ್ತ ಡಾ ಎಚ್...