ಓಮಿಕ್ರಾನ್ ರೂಪಾಂತರಿಯು ಆತಂಕ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಜನರಿಗೆ ಹೇಗಾದರೂ ಮಾಡಿ ಕೊರೊನಾ ನಿರೋಧಕ ಲಸಿಕೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿವೆ.
ಲಸಿಕೆ ಅಭಿಯಾನ ತೀವ್ರಗೊಳಿಸಬೇಕು, ವಿಶೇಷವಾಗಿ ಎರಡನೇ ಡೋಸ್ ನೀಡುವ ಕುರಿತು ಗಮನಹರಿಸಬೇಕು ಇಂದು ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತಡ ಹೇರುತ್ತಲೇ ಇದೆ. ರಾಜ್ಯಗಳ ಬಳಿ ಕೋಟ್ಯಂತರ ಡೋಸ್ ಗಳಿದ್ದರೂ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯದಿರುವುದು ತಲೆನೋವಾಗಿದೆ. ಹೀಗಾಗಿ ಈಗ ಬೆದರಿಕೆ ಅಸ್ತ್ರ ಪ್ರಯೋಗಿಸಲು ರಾಜ್ಯಗಳು ಒಂದಾಗಿವೆ.
ಲಸಿಕೆ ಪಡೆಯದವರಿಗೆ ಪಡಿತರ ಸೇರಿ ಸರ್ಕಾರದ ಸೌಲಭ್ಯಗಳನ್ನು ನೀಡಬಾರದು ಎಂದು ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಹಾಗೂ ಉಚಿತ ಚಿಕಿತ್ಸೆ ನೀಡಬಾರದೆಂಬ ರಾಜ್ಯ ಸರ್ಕಾರದ ಯೋಚನೆಯು ಹಲವು ರಾಜ್ಯಗಳ ಗಮನ ಸೆಳೆದಿದ್ದು, ಅದೇ ತಂತ್ರ ಅನುಸರಿಸಲು ತೀರ್ಮಾನಿಸಿವೆ.
ಒಮಿಕ್ರಾನ್ ಪ್ರಸರಣದ ಹಿನ್ನೆಲೆಯಲ್ಲಿ ಡಿಸೆಂಬರ್ 15ರಿಂದ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಲಸಿಕೆ: ಎರಡನೇ ಡೋಸ್ ನೀಡುವ ಮಾರ್ಗೋಪಾಯ ಚಿಂತನೆ
Date: