Monday, February 2, 2026
Monday, February 2, 2026

Indian National Congress ಮೊದಲ ಗೋಲ್ ಹೊಡೆದ ಕಾಂಗ್ರೆಸ್

Date:

ಸಂಪಾದಕೀಯ:

Indian National Congress ಚುನಾವಣೆ ಮುನ್ನ ತ್ರಿವಳಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು
ನಮ್ಮನ್ನ ಸೆಳೆದಿದ್ದವು.  ಅದರಲ್ಲಿ 
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ. ಮಿಕ್ಕ ಬಿಜೆಪಿ ಮತ್ತು ಜೆಡಿಎಸ್ ಮೇನಿಯಾ ಆಗಿ ಕಾಡಿತು.
ಆ ಪಕ್ಷಗಳೂ ಮತ್ತಷ್ಟು ರಿಯಾಯಿತಿ ಸೇರಿಸಿ ಪ್ರಣಾಳಿಕೆ ಹಿಗ್ಗಿಸಿದವು.

ಆದರೆ ಫಲಿತಾಂಶ ಬಂದಾಗ ಪ್ರಥಮ ಶ್ರೇಣಿ ಸಿಕ್ಕಿದ್ದು ಕಾಂಗ್ರೆಸ್ ಪಕ್ಷಕ್ಕೆ.
ಮತದಾರ ಗ್ಯಾರಂಟಿಗಳಿಗೆ ಖಾತ್ರಿಯಾಗಿ ಸೆರೆಯಾಗಿ ಬಿಟ್ಟಿದ್ದ.

ಯಾವಪಕ್ಷವೇ ಬರಲಿ ಮತದಾರರ 
ಹಿತ ರಕ್ಷಿಸುವ ವಿಶ್ವಾಸ ಮೂಡಿಸಿದರೆ
ಆತ ಫಿದಾ ಆಗಿಬಿಡುವನು/ಳು.
ಈ ಬಾರಿ ಅದೇ ಆಗಿದೆ. 
ರಾಷ್ಟ್ರೀಯ ವಿಚಾರಗಳನ್ನ ಬಿಜೆಪಿ ಸದಾ ಮುಂದಿಡುತ್ತಿತ್ತು. ಹಿಂದೆ ಅದಕ್ಕೆ ಶೀಘ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಅದು ಯಾವಾಗಲೂ ರಪೀಟ್ ಅಗುವುದಿಲ್ಲ ಎಂಬುದಕ್ಕೆ ಈ‌ ಚುನಾವಣೆಯೇ ಸಾಕ್ಷಿ.

ಬೆಲೆ ಏರಿಕೆ,ಸಾಮಾಜಿಕ ಅಶಾಂತಿ,
ಬಡವರ ದುಃಸ್ಥಿತಿ ಇವುಗಳೂ ಪಕ್ಷಗಳಿಗೆ ಸದಾ ವಿವೇಚನೆಯಲ್ಲಿ ಸಿಗುವಂತಿರಬೇಕು. ಅದನ್ನ ಮರೆತರೆ 
ಏನಾಗುತ್ತದೆ ? ಈ ಪ್ರಶ್ನೆಗೆ ಉತ್ತರ ಹೇಳಬೇಕಿಲ್ಲ. ಜೆಡಿಎಸ್  ಒಮ್ಮೆ ಸಾಲಮನ್ನ ಮಾಡಿದ್ದೇ ಹೇಳೀಹೇಳಿ ಸವಕಳಿಯಾಯಿತು. ಪೂರ್ಣ ಬಹುಮತ ಕೊಡಿ ಅನ್ನಲು ಕುಟುಂಬದ ಸುಳಿಯಿಂದ ಸಾರ್ವಜನಿಕರ ಅಂಗಳಕ್ಕೆ ಅದು ಬರಲೇ ಇಲ್ಲ. ಜನ ಇದನ್ನೂ ಆಲೋಚಿಸುತ್ತಾರೆ. ಆ ಪಕ್ಷಕ್ಕಾಗಿ ದುಡಿದ ವ್ಯಕ್ತಿಗಳ ಶ್ರಮಕ್ಕೆ ಗೌರವವೂ ಸಿಗಲಿಲ್ಲ.ಪಕ್ಷ‌ ತ್ಯಜಿಸಿದರು. ಬಡವಾಯಿತು. ಚುನಾವಣೆಯಲ್ಲಿ ತನ್ನ ಮತಗಳಿಕೆ 
ಕುಸಿತವಾಗಿ ಚಿಂತಾಜನಕವಾಯಿತು.

ಬಿಜೆಪಿ ಈಗ ಮನವರಿಕರ ಮಾಎಇಕೊಂಡಿದೆ. ಹಿರಿಯ ನಾಯಕ ಯಡಿಯೂರಪ್ಪನವರು 
ಮಾಧ್ಯಮಗಳ ಮುಂದೆ ಸತ್ಯ ಒಪ್ಪಿಕೊಂಡಿದ್ದಾರೆ
ಕಾಂಗ್ರೆಸ್ ನ ಗ್ಯಾರಂಟಿ ಗಳಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು 
ಮಾತಾಡಿದ್ದಾರೆ.

ಗ್ಯಾರಂಟಿಗಳ ಬಗ್ಗೆ ಬಹಳ ಹಗುರವಾಗಿ ಮಾತಾಡಿದ್ದ ಬಿಜೆಪಿ ಮುಖಂಡರಿಗೀಗ ತಮ್ಮ ಬೇಜವಾಬ್ದಾರಿಗಳ ಬಗ್ಗೆ ಅರಿವಾಗಿದೆ.
ಬೆಲೆ ಏರಿಕೆ, ಭ್ರಷ್ಟಾಚಾರ, ಇವುಗಳ ಬಗ್ಗೆ ಹಿಂದಿನ ಸರ್ಕಾರಕ್ಕಿಂತ ವಾಸಿ ಎಂಬ ಹೋಲಿಕೆ ನೀಡುವದರಲ್ಲೇ ಕಾಲತಳ್ಳಿದರು. ಕಡಿವಾಣ ಹಾಕುವ ಒಂದು ಕ್ರಮವನ್ನ ಕೈಗೊಳ್ಳಲಿಲ್ಲ.
ಇದು ಜನ ರೋಸಿಹೋಗುವಂತೆ ಮಾಡಿತು. ಈ ಅಸಮಾಧಾನದ ಹೊಗೆಯಲ್ಲಿ ನಡುವೆ ಗ್ಯಾರಂಟಿಗಳು
ಕಂಡಾಗ ಹೊಸ ಆಸೆ ಹುಟ್ಟಿತು.
ಪ್ರತೀ ಆರುತಿಂಗಳಿಗೆ ಏರಿಸುತ್ತಿರುವ
ಪವರ್ ಬಿಲ್, ಯುವಜನರಲ್ಲಿ ನಿರುದ್ಯೋಗದ ಹತಾಶೆ, ಸಾಮಾನ್ಯ ಮಹಿಳೆಯ ಕೈಗೆ ಒಂದಿಷ್ಟು ಹಣ ಬಡವರಿಗೆ ದಿನಸಿ ರಾಜನಾಗಿರುವ ಅಕ್ಕಿ ( ಹತ್ತು ಕೆಜಿ)ಉಚಿತ ವಿತರಣೆ
ಹೀಗೆ ಈ ಆಕರ್ಷಣೆ ಕಾಂಗ್ರೆಸ್ ಕಡೆಗೆ
ಜನ ತಿರುಗುವಂತೆ ಮಾಡಿತು. 

ಆದರೂ ಬರುವ ತಿಂಗಳುಗಳಲ್ಲಿ
ಹೇಗೆ ಹಣ ಹೊಂದಿಸುತ್ತಾರೋ ಎಂದು ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಜನಸಮುದಾಯವೇ ಮುಖ್ಯಮಂತ್ರಿಗಳಿಗಿಂತ ಹೆಚ್ಚು ತಲೆಕೆಡಿಸಿಕೊಂಡಿದೆ.

ಬಜೆಟ್ ಮಂಡನೆಯಲ್ಲಿ ತೆರಿಗೆ ಜಾಸ್ತಿಮಾಡುತ್ತಾರೆ ಎಂಬ ಆಂತರಿಕ ಭಯವೂ ಜನತೆಯಲ್ಲಿ ಮೂಡಿದೆ.
ಏನೇ ಆಗಲಿ ಸಿದ್ಧರಾಮಯ್ಯ
ಗ್ಯಾರಂಟಿಗಳನ್ನ ನೀಡಿಯೇ ತೀರುತ್ತೇವೆ ಎಂಬ ಪಕ್ಕಾ ಮಾತನ್ನೇ ಆಡಿದ್ದಾರೆ.

Indian National Congress ಅಂದರೆ ಮ್ಯಾಚಿನ ಆರಂಭದಲ್ಲೇ ಮೊದಲ ಗೋಲು ಬಾರಿಸಿದ ಹೆಮ್ಮೆ
ಕಾಂಗ್ರೆಸ್ ಪಕ್ಷಕ್ಕಿದೆ.
ಮತದಾರ ಕೋಟಿ ರೆಫ್ರೀಯಾಗಿ ನೋಡುತ್ತಿದ್ದಾರೆ…
 

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...