Wednesday, September 16, 2026
Wednesday, September 16, 2026

JDS Candidate Ayanuru Manjunath ಆಯನೂರು ಮಂಜುನಾಥ್ ಅವರಿಂದ ಕಾರ್ನರ್ ಮೀಟಿಂಗ್ ಮೂಲಕ ಮತಯಾಚನೆ

Date:

JDS Candidate Ayanuru Manjunath ಜೆಡಿಎಸ್‌ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ ಅವರು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಚುನಾವಣೆ ಪ್ರಚಾರ ಮತ್ತು ಕಾರ್ನರ್‌ ಮೀಟಿಂಗ್‌ ನಡೆಸಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು ರೋಡ್‌ ಶೋನಲ್ಲಿ ಭಾಗವಹಿಸಿದರು.

ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಒಂದನೇ ತಿರುವಿನಿಂದ 6ನೇ ತಿರುವಿನವರೆಗೆ, ಲಷ್ಕರ್‌ ಮೊಹಲ್ಲಾ, ಕೃಷಿ ನಗರ, ತ್ರಿಮೂರ್ತಿ ನಗರ, ಚೌಡೇಶ್ವರಿ ಕಾಲೋನಿ, ಪುರಲೆ, ಗಣೇಶ ಭವನ, ವಿದ್ಯಾನಗರ, ಟ್ಯಾಂಕ್‌ ಮೊಹಲ್ಲಾ, ಬೈಲ್‌ ಕಮ್ಮಾರ ಬೀದಿ, ಗಾಂಧಿ ಬಜಾರ್‌, ಸೀಗೆಹಟ್ಟಿಯಿಂದ ಹೊಳೆ ಬಸ್‌ ಸ್ಟಾಪ್‌ವರೆಗೆ, ಬುದ್ದ ನಗರ, ಮಿಳಘಟ್ಟ, ಗೋಪಾಳ, ಟಿಪ್ಪು ನಗರ, ಇಲಿಯಾಜ್‌ ನಗರ, ವೆಂಕಟೇಶ ನಗರ ಬಡಾವಣೆಗಳಲ್ಲಿ ಚುನಾವಣಾ ಪ್ರಚಾರ ನಡೆಯಿತು.

ಜೆಡಿಎಸ್‌ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ, ಎಂ.ಶ್ರೀಕಾಂತ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

JDS Candidate Ayanuru Manjunath ಪ್ರತಿ ಮನೆಗು ಕರಪತ್ರ ನೀಡಿದರು. ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್‌ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ರೋಡ್‌ ಶೋನಲ್ಲಿ ಭಾಗಹಿಸಿದ್ದರು.

ಶಿವಮೊಗ್ಗ ನಗರದ 32ನೇ ವಾರ್ಡ್‌ನಲ್ಲಿ ಜೆಡಿಎಸ್‌ ಪಕ್ಷದ ಆಯನೂರು ಮಂಜುನಾಥ ಅವರ ಪರವಾಗಿ ಮಹಿಳೆಯರು ಪ್ರತ್ಯೇಕವಾಗಿ ಪ್ರಚಾರ ನಡೆಸಿದರು. ವಾರ್ಡ್‌ನ ಪ್ರತಿ ಬೀದಿಯಲ್ಲಿ ಮಹಿಳೆಯರು ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿದರು. ಮನೆ ಮನೆಗೆ ತೆರಳಿ ಕರಪತ್ರ ನೀಡಿ ಆಯನೂರು ಮಂಜುನಾಥ ಅವರ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...