ಕ್ಷೇತ್ರ ಮರು ವಿಂಗಡಣೆ ಆಯೋಗದ ರಚನೆಗೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ. ಜನಸಂಖ್ಯೆ ಆಧಾರದಲ್ಲಿ ಪಂಚಾಯ್ತಿಗಳ ಕ್ಷೇತ್ರ ಮರುವಿಂಗಡನೆ ಮತ್ತು ಮೀಸಲು ನಿಗದಿಗೆ ರಾಜ್ಯ ಸರ್ಕಾರ ರಚಿಸಿದ್ದ ಪಂಚಾಯಿತಿಗಳ ಸೀಮಾ ನಿರ್ಣಯಕ್ಕೆ ಚಾಲನೆ ಸಿಕ್ಕಿದೆ.
ಈ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಸದಸ್ಯರಾಗಿ ಸರ್ಕಾರದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಪಂಚಾಯತ ತಜ್ಞರಾಗಿ ರಾಮಪ್ರಿಯ ಮತ್ತು ಪದನಿಮಿತ್ತ ಸದಸ್ಯರಾಗಿ ಆರ್ ಡಿ ಪಿ ಆರ್ ಇಲಾಖೆಯ ಆಯುಕ್ತರು ಸೀಮಾ ನಿರ್ಣಯ ಅಂತಿಮಗೊಳಿಸಲಿದ್ದಾರೆ.
ಪ್ರತಿ ಕ್ಷೇತ್ರಗಳ ಜನಸಂಖ್ಯೆಯು ಕಾರ್ಯ ಸಾಧ್ಯವಾಗುವಷ್ಟು ಸಮಾನವಾಗಿರುವಂತೆ ಸೀಮಾ ನಿರ್ಣಯ ಗೊಳಿಸುವುದು. ಜನಸಂಖ್ಯೆ ಆಧಾರದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಚುನಾಯಿಸಬೇಕು ಸದಸ್ಯರ ಸಂಖ್ಯೆ ನಿಗದಿಪಡಿಸುವುದು. ಪಂಚಾಯಿತಿಗೆ ಚುನಾಯಿಸಲು ಅಗತ್ಯವಾದ ಸದಸ್ಯರ ಸಂಖ್ಯೆಯನ್ನು ಕ್ಷೇತ್ರಗಳಾಗಿ ವಿಂಗಡಿಸಲು ಶಿಫಾರಸು ಮಾಡುವುದು. ಪ್ರತಿಯೊಂದು ಕ್ಷೇತ್ರವು ಭೌಗೋಳಿಕವಾಗಿ ನಿಬಿಡತೆ ಇರುವಂತೆ ಸೀಮಾ ನಿರ್ಣಯಿಸುವುದು. ಸರ್ಕಾರ ನಿಗದಿಪಡಿಸಿದ ಪ್ರಕಾರ್ಯಗಳನ್ನು ನೆರವೇರಿಸುವುದು ಈ ಆಯೋಗದ ಕಾರ್ಯಗಳಾಗಿವೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.