ಶಿವಮೊಗ್ಗದ ಪಿಇಎಸ್ ಕಾಲೇಜಿನಲ್ಲಿ ಇಂದು ನಡೆದ “ಮಕ್ಕಳಿಗೆ ಇನೋವೇಷನ್ ಅನು ಬೋಧನೆಯ ಸಮಯದಲ್ಲಿಯೇ ಅಳವಡಿಕೆ” ಎಂಬ ವಿಷಯವನ್ನು ಕುರಿತು ವಿಚಾರ ಸಂಕಿರಣ ನಡೆಯಿತು.
‘ಭಾರತ್ ಬಯೋಟೆಕ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೃಷ್ಣಮೂರ್ತಿ ಎಲ್ಲಾ’ ಅವರು ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಕೊರೋನ ಸಂಕಷ್ಟದ ಸಮಯದಲ್ಲಿ ಇಡೀ ಪ್ರಪಂಚವು ನರಳುತ್ತಿತ್ತು. ಆ ಸನ್ನಿವೇಶದಲ್ಲಿ ಭಾರತ್ ಬಯೋಟೆಕ್ ಸಹಾಯದಿಂದ ಕೊವ್ಯಾಕ್ಸಿನ್ ಔಷಧವನ್ನು ಸಂಶೋಧಿಸಲಾಯಿತು. ಈ ಲಸಿಕೆಯನ್ನು ನಮ್ಮ ಜನತೆಗೆ ಕೊಡುವ ಜೊತೆಗೆ ವಿವಿಧ ದೇಶಗಳಿಗೆ ಕೂಡ ನೀಡಲಾಗಿದೆ” ಎಂದು ಡಾ.ಕೃಷ್ಣಮೂರ್ತಿಮೂರ್ತಿ ನುಡಿದರು.
ಇದೇ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ ಅವರು ಮಾತನಾಡಿದರು ಡಾ. ಕೃಷ್ಣಮೂರ್ತಿ ಎಲ್ಲಾ ಅವರು ನಮ್ಮ ಶಿವಮೊಗ್ಗಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಡಾ. ಮೂರ್ತಿ ಅವರ ಜೊತೆ ಮಾತನಾಡಿದಾಗ ‘ಅಡಿಕೆ ಸಿಪ್ಪೆಯನ್ನು ಹಾಗೂ ಮಲೆನಾಡಿನ ಅಪ್ಪೆ ಮಿಡಿಯನ್ನು ಕೂಡ ಫುಡ್ ಪ್ರೊಸೆಸ್ ನಲ್ಲಿ ಬಳಸುವ ಮಾರ್ಗವಿದೆ’ ಎಂದು ತಿಳಿಸಿದರು. ನಮ್ಮ ಮಲೆನಾಡಿನ ಪ್ರದೇಶಗಳಿಗೆ ಡಾ.ಕೃಷ್ಣಮೂರ್ತಿ ಅವರ ಕೊಡುಗೆ ಇರಲಿ ಮತ್ತು ಇಲ್ಲಿನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗುವಂತಾಗಲಿ ಎಂದು ಹಾರೈಸಿದರು.
ವಿಜ್ಞಾನಿ ಡಾ.ರವಿ, ಪಿಇಎಸ್ ಟ್ರಸ್ಟ್ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಸುಭಾಷ್ ಬಿ.ಆರ್, ಕಾಲೇಜಿನ ಟ್ರಸ್ಟಿ ಬಿ.ವೈ.ಅರುಣಾದೇವಿ, ಪ್ರಾಂಶುಪಾಲರಾದ ಡಾ. ಚೈತನ್ಯ ಕುಮಾರ್, ಸಿಸಿಎ ಡಾ.ನಾಗರಾಜ್ ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.