Wednesday, October 2, 2024
Wednesday, October 2, 2024

ಟಿ20 ಕ್ರಿಕೆಟ್ ಸರಣಿ. ಭಾರತ ಕೈವಶ.

Date:

ಟಿ – 20 ಟೂರ್ನಿಯ 3 ರ ಸರಣಿಯಲ್ಲಿ ಭಾರತ ಸಮಗ್ರ ಜಯ ಸಾಧಿಸಿ ಸರಣಿ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿತು.
.ಟಿ – 20 ಅಂತಿಮ ಪಂದ್ಯವು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಕೋಲ್ಲೊತ್ತಾದಲ್ಲಿ ನಡೆಯಿತು.
ಕೊಲ್ಕತ್ತಾ ದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ಪತನವಾಗಿ 184 ರನ್ ಗಳಿಸಿತು.
ರೋಹಿತ್ ನಾಯಕತ್ವದ ಚೊಚ್ಚಲ ಸರಣಿಯಲ್ಲಿ ಸಾಧನೆ ಚರಿತ್ರೆಯಾಗಿ ಮಾರ್ಪಟ್ಟಿತು.
ಟಿ – 20 ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲಿಯೆ ರೋಹಿತ್, ಬ್ಯಾಟಿಂಗ್ ಮತ್ತು ತಂತ್ರಗಾರಿಕೆಯಲ್ಲಿ ಮೇಲುಗೈ ಸಾಧಿಸಿದರು. ಬೌಂಡರಿಯೊಂದಿಗೆ ಖಾತೆ ತೆರೆದ ರೋಹಿತ್ ಅವರ ಆಟದ ಅಬ್ಬರ ಮೇರೆ ಮೀರಿತ್ತು.. ಇದರಿಂದಾಗಿ ಮೊದಲ 6 ಓವರ್ ಗಳಲ್ಲಿಯೆ ತಂಡವು 69 ರನ್ ಗಳಿಸಿತು.
ಹಿಟ್ ಮ್ಯಾನ್ ಖ್ಯಾ ತಿಗೆ ತಕ್ಕಂತೆ ಬ್ಯಾಟ್ ಬೀಸಿದ ರೋಹಿತ್ 31 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಗಳನ್ನು ಸಿಡಿಸಿ 56 ರನ್ ಗಳಿಸಿಕೊಂಡರು. ಮುಂದೆ ಕಿವೀಸ್ ಬೌಲರ್ ಗಳು ಬಸವಳಿದರು .
ಮೊದಲ ವಿಕೆಟ್ ಹಂತದಲ್ಲಿ ಆಡಿದ ರೋಹಿತ್ ಶರ್ಮಾ ಮತ್ತು ಇಶಾನ್ – ಕಿಶನ್ ಉತ್ತಮ ಆರಂಭ ಮಾಡಿದರು. ಇವರಿಬ್ಬರ ಚೊಚ್ಚಲ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ 69 ರನ್ ಸೇರಿಸಿದರು. ಆದರೆ 7 ನೇ ಓವರ್ ನಲ್ಲಿ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಭಾರತ ಜೋಡಿಯ ಭರಾಟೆಗೆ ಕಡಿವಾಣ ಹಾಕಿದರು. 2 ನೇ ಎಸೆತದಲ್ಲಿ ಇಶಾನ್ ಕಿಶನ್ ವಿಕೆಟ್ ಪಡೆದ ಅವರು ಜೊತೆಯಾಟ ಮುರಿದರು. ಅದೇ ಓವರ್ ನ ಕೊನೆಯ ಎಸೆತದಲ್ಲಿ ಸುರ್ಯಕುಮಾರ್ ಯಾದವ್ ವಿಕೆಟ್ ಕೂಡ ಕಬಳಿಸಿದರು. ತಮ್ಮ ಇನ್ನೊಂದು ಓವರ್ ನಲ್ಲಿ ಸ್ಯಾಂಟ್ ನರ್ ಅವರು ರಿಷಬ್ ಪಂತ್ ವಿಕೆಟ್ ಕೂಡ ಗಳಿಸಿದರು. ಈ ಹಂತದಲ್ಲಿ ರೋಹಿತ್ ತಮ್ಮ ಆಟ ಮುಂದುವರಿಸಿದ್ದರು. ಅರ್ಧಶತಕ ಪೂರೈಸಿದ ಅವರು ಇನ್ನಷ್ಟು ಪ್ರಹಾರ ನಡೆಸುವ ಸಿದ್ಧತೆಯಲ್ಲಿದ್ದಾಗಲೇ ಸ್ಪಿನ್ನರ್ ಸೋಧಿ ಎಸೆತದಲ್ಲಿ ಅವರಿಗೇ ಕ್ಯಾಚ್ ಕೊಟ್ಟು ಔಟಾದರು.
ನಂತರ ವಿಕೆಟ್ ಗಳಲ್ಲಿ ಕ್ರೀಸ್ ಗ ಇಳಿದು ಜೊತೆಗೂಡಿದ ಶ್ರೇಯಸ್ ಅಯ್ಯರ್ 20 ಎಸೆತಗಳಲ್ಲಿ 25 ರನ್ ಗಳಿಸಿ ಮತ್ತು ವೆಂಕಟೇಶ್ ಅಯ್ಯರ್ 15 ಎಸೆತಗಳಲ್ಲಿ 20 ರನ್ ಗಳಿಸಿ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರೂ.ಅವರ ಇನ್ನಿಂಗ್ಸ್ ನಲ್ಲಿ ಇನ್ನೂ 4 ಓವರ್ ಗಳು ಬಾಕಿ ಇದ್ದಾಗಲೇ ಇಬ್ಬರೂ ಔಟ್ ಆದರು.
ನಂತರ ಕ್ರೀಸ್ ಗೆ ಬಂದ ದೀಪಕ್ ಚಹರ್, ಹರ್ಷಲ್ ರವರು ಕೊನೆಯ ಹಂತದಲ್ಲೂ ಕೂಡ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಅನಾವರಣ ಗೊಳಿಸಿದರು ಹರ್ಷಲ್ ಹಿಟ್ ವಿಕೆಟ್ ಆಗುವ ಮುನ್ನ 11 ಎಸೆತಗಳಲ್ಲಿ18 ರನ್ ಗಳಿಸಿದರು. 2 ಬೌಂಡರಿ ಬಾರಿಸಿ ಹಾಗೂ 1 ಸಿಕ್ಸರ್ ಸಿಡಿಸಿದರು. ಹಾಗೆಯೇ ದೀಪಕ್ ಕೂಡ ಔಟಾಗದೆ 8 ಎಸೆತಗಳಲ್ಲಿ 21 ರನ್ ಗಳಿಸಿ ರೋಚಕವಾಗಿ ಬ್ಯಾಟ್ ಬೀಸಿದರು.
185 ರ. ಗೆಲುವಿನ ಗುರಿಯನ್ನಿತ್ತುಕೊಂಡು ಬೆನ್ನತ್ತಿ ಆಡಿದ ನ್ಯೂಜಿಲೆಂಡ್ ತಂಡ 17.2 ಓವರ್ ಗಳಲ್ಲಿ ಕೇವಲ 111 ರನ್ ಹೊಡೆದು ಆಲ್ ಔಟ್ ಆಯಿತು. ಮಾರ್ಟಿನ್ ಗಪ್ಟಿಲ್ ಅವರ 51 ರನ್ ಗಳ ಅರ್ಧಶತಕ ಅಕ್ಷರ್ ಪಟೇಲ್ ರವರ ಸ್ಪಿನ್ ಮೋಡಿಗೆ ಶರಣಾಗಿ ಅವರ ಅರ್ಧ ಶತಕ ಪ್ರಯತ್ನ ವ್ಯರ್ಥವಾಯಿತು.
73 ರನ್ ಗಳ ಅಂತರದಲ್ಲಿ ಕೀವಿಸ್ ತಂಡ ಸೋಲೊಪ್ಪಿತು.
ರಾಹುಲ್ ಇಲ್ಲದೆಯೇ ಇನ್ನಿಂಗ್ಸ್ ಆರಂಭಿಸಿದ ಭಾರತ ಬ್ಯಾಟುಗಾರರ ಕೊರತೆ ಅನುಭವಿಸಲೇ ಇಲ್ಲ. ಟಾಸ್ ಗೆದ್ದ ಭಾರತ
‌ಬ್ಯಾಟಿಂಗ್ ಆಯ್ಕೆ ಮಾಡಿಕೊಡಿದ್ದು ಸಫಲವಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...