Friday, September 27, 2024
Friday, September 27, 2024

Sudhamurthy ಶಿವಮೊಗ್ಗದ ಸಮಾರಂಭದಲ್ಲಿ ಸುಧಾಮೂರ್ತಿ ಅವರಿಗೆ ವಿಜ್ಞಾತಂ ಪುರಸ್ಕಾರ ಅರ್ಪಣೆ

Date:




Sudhamurthy  ವಿಜ್ಞಾನ-ತಂತ್ರಜ್ಞಾನದ ನಡುವೆ ಜ್ಞಾನವನ್ನು ನೀಡಿದರೆ ವಿವೇಕ ಮೂಡುತ್ತದೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ಮಂಡ್ಯ ಜಿಲ್ಲೆ ನಾಗಮಂಗಲದ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳವರ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿವೇಕ ರಹಿತ ವಿಜ್ಞಾನದ ಬಳಕೆ ಮನುಕುಲಕ್ಕೆ ಅಪಾಯಕಾರಿ ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿವೇಕಯುಕ್ತವಾಗಿ ಬಳಸಬೇಕು ಎಂದರು.

Sudhamurthy ವಿಜ್ಞಾನಿಗಳು ಹಲವು ವರ್ಷಗಳ ಕಾಲ ಶ್ರಮಪಟ್ಟು ಕಂಡು ಹಿಡಿದ ಸಂಶೋಧನೆಗಳನ್ನು ನಾವುಗಳು ಇಂದು ಬಳಸಿಕೊಳ್ಳುತ್ತಾ ವ್ಯವಸ್ಥಿತವಾದ ಮತ್ತು ಸುಖಮಯವಾದ ಜೀವನವನ್ನು ನಡೆಸುತ್ತಿದ್ದೇವೆ ಎಂದ ಅವರು, ನಮ್ಮ ಸಮಾಜದಲ್ಲ ಇರುವಂತಹ ಅನೇಕ ವ್ಯವಸ್ಥೆಗಳು ಮತ್ತು ಅನುಕೂಲತೆಗಳ ಹಿಂದೆ ಹಿರಿಯ ವಿಜ್ಞಾನಿಗಳ ಮತ್ತು ಸಂಶೋಧಕರ ಶ್ರಮ ಅಡಗಿದೆ ಎಂದರು.

ನಮ್ಮ ಹಿರಿಯ ವಿಜ್ಞಾನಿಗಳು ನೂರರಿಂದ ಸಾವಿರ ಬಾರಿ ಸಂಶೋಧನಾ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ತದ ನಂತರ ಯಶಸ್ಸನ್ನು ಗಳಿಸಿದ್ದಾರೆ. ಇದು ನಮ್ಮ ಕಂಡು ಮುಂದೆಯೇ ಇದೆ. ನಮ್ಮ ಪೋಷಕರು ತಮ್ಮ ಮಕ್ಕಳು ಒಂದು ವಿಷಯದಲ್ಲಿ ಅಂಕವನ್ನು ಕಡಿಮೆ ತೆಗೆದರೆ ಜೀವನವೇ ಮುಗಿದು ಹೋಯಿತು ಎಂಬಂತೆ ತಲೆಯ ಮೇಲೆ ಕೈ ಹೊತ್ತು ಕೂರುತ್ತಾರೆ. ಇದು ಆಗಬಾರದು ಹಲವು ವಿಫಲತೆಗಳ ಹಿಂದೆ ಮುಂದಿನ ಯಶಸ್ಸು ಅಡಗಿರುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.

ಕಾರ‍್ಯಕ್ರಮದಲ್ಲಿ ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮೀಜಿರವರು, ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠಗಳ ಎಲ್ಲಾ ಪೂಜ್ಯ ಸ್ವಾಮೀಜಿರವರು, ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಇಲಾಖೆಯ ರಾಜ್ಯ ಸಚಿವ ಭಗವಂತ ಖೂಬಾ, ನಾಗಮಂಗಲ ಶಾಸಕ ಕೆ ಸುರೇಶಗೌಡರು, ಮೇಲುಕೋಟೆ ಶಾಸಕ ಸಿ ಎಸ್ ಪುಟ್ಟರಾಜು , ಆದಿಚುಂಚನಗಿರಿ ವಿ ವಿ ಉಪಕುಲಪತಿ ಡಾ.ಎಂ.ಎ.ಶೇಖರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಇದೇ ಶುಭ ಸಂದರ್ಭದಲ್ಲಿ ಪರಮಪೂಜ್ಯ ಮಹಾಸ್ವಾಮೀಜಿರವರು ಡಾ. ಸುಧಾಮೂರ್ತಿ ಅವರಿಗೆ ವಿಜ್ಞಾತಂ – 2023 ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಆಶೀರ್ವದಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hassan Manikya Prakashana ಶಿವಮೊಗ್ಗದ ಕವಿ ಶಿ.ಜು.ಪಾಶಾ ಅವರಿಗೆ “ಜನ್ನ ಕಾವ್ಯ ಪ್ರಶಸ್ತಿ”

Hassan Manikya Prakashana ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ ಜನ್ನ ಕಾವ್ಯ...

Vajreshwari Co Operative Society ಶ್ರೀವಜ್ರೇಶ್ವರಿ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

Vajreshwari Co Operative Society ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ...

Inner Wheel Shivamogga ದುರ್ಬಲರಿಗೆ ನೆರವು ನೀಡಿದಾಗ ಸೇವೆ ಸಾರ್ಥಕ- ಶಿಲ್ಪ ಗೋಪಿನಾಥ್

Inner Wheel Shivamogga ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ...

National Education Committee ಬೆಳಗುತ್ತಿ & ಮಲ್ಲಿಗೇನಹಳ್ಳಿಯಲ್ಲಿ ಗಮನ ಸೆಳೆದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

National Education Committee ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿರಂಗಪ್ರಯೋಗದ...