Wednesday, April 8, 2026
Wednesday, April 8, 2026

ಮರೆಯಲಾಗದ ಆಪ್ತರು ಪ್ರೊ.ಜಿ.ಆರ್.ಜಗದೀಶ್

Date:

ವ್ಯಕ್ತಿಯ ಪ್ರತಿಭೆ ಅರಿತುಕೊಳ್ಳಲು ಬಹಳ ಕ್ಷಣಗಳು ಬೇಕಿಲ್ಲ. ಸಂಪರ್ಕಕ್ಕೆ ಬಂದ ತಕ್ಷಣ ಅವರ ನಡೆ ನುಡಿಗಳೇ ಸ್ವಯಂ ಪ್ರಕಾಶಿಸಿಬಿಡುತ್ತವೆ.
ಅವರು ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳುವುದಿಲ್ಲ.
ವ್ಯಕ್ತಿತ್ವವನ್ನ ಅಂಥವರ ಸ್ನೇಹಿತರಿಂದ ತಿಳಿಯಬಹುದು.
ಇಂತಹ ವಾಕ್ಯಗಳನ್ನ ಜಗದೀಶ್ ಅವರ ಸಾವಿನ ಸುದ್ದಿ ಕೇಳಿ ಬರೆಯಲೇ ಬೇಕಾಯಿತು.

ಜಿ.ಆರ್. ಜಗದೀಶ್ ಅವರು ನಿನ್ನೆಯಷ್ಟೇ ನಮ್ಮನ್ನಗಲಿದರು.
ಶಿವಮೊಗ್ಗ ನ್ಯಾಷನಲ್ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿದ್ದರು.

ನಮ್ಮ ಕೆ ಲೈವ್ ಮಾಧ್ಯಮಕ್ಕೆ ಅವರನ್ನ ಕಳೆದ ನವೆಂಬರ್ ತಿಂಗಳಲ್ಲಿ ಕಿರು ಭಾಷಣಕ್ಕೆ ಆಹ್ವಾನಿಸಲಾಗಿತ್ತು.
ನಮ್ಮ ಸಂವಿಧಾನ – ನಮ್ಮ ಹೆಮ್ಮೆ ವಿಷಯ ಕುರಿತು ಸರಳವಾದ ನುಡಿಗಳಲ್ಲಿ ನಮ್ಮ ಸಂವಿಧಾನದ ಬಗ್ಗೆ ಮಾತನಾಡಿದ್ದರು.
ಕಾನೂನು ಸಂಗತಿಗಳ ಬಗ್ಗೆ ಮಾಧ್ಯಮದಲ್ಲಿ ನಿಮ್ಮ ಮಾತುಗಳು ಬೇಕು ಎಂದು ಕೇಳಿದ್ದೆ.

ಫೆಬ್ರವರಿಯಲ್ಲಿ ರಿಟೈರ್ ಆಗುತ್ತೇನೆ .ನಂತರ ನಿಮ್ಮಲ್ಲಿಗೆ ಬರುತ್ತೇನೆ
ಕಾರ್ಯಕ್ರಮ ಮಾಡೋಣ ಎಂದು ಭರವಸೆ ನೀಡಿದ್ದರು.
ನನಗೆ ಅವರು ನಮ್ಮ ಮೇಷ್ಟ್ರಮಗ. ಅವರ ತಂದೆ ಜಿ.ಬಿ.ರುದ್ರಪ್ಪನವರು
ಕೆಮಿಸ್ಟ್ರಿ ಮೇಷ್ಟ್ರಾಗಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ
ವಿಜ್ಞಾನ ಮೇಳ ಏರ್ಪಡಿಸುತ್ತಿದ್ದರು.

ವಿಜ್ಞಾನ ವಿಷಯ ಎಂದರೆ ಅವರಿಗೆ ಪಂಚಪ್ರಾಣ.
ಅವರಿಗೆ ಮಗ ಜಗದೀಶ್ ಎಂದರೆ ಬಹಳ ಅಚ್ವುಮೆಚ್ಚು.
ಜಗದಿಶ್ ಅವರ ಹಿರಿಯರು
ಚನ್ನಗಿರಿ ಬಳಿಯ ಹಿರೇಉಡದವರು.
ಕೊಡುಗೈ ದಾನಿಗಳು.
ಅವರ ಅಜ್ಜಂದಿರು ದಾನ ನೀಡಿ ಕಟ್ಟಿಸಿದ ಪಶುವೈದ್ಯಕೀಯ ಆಸ್ಪತ್ರೆ ಚನ್ನಗಿರಿಯಲ್ಲಿದೆ.

ದಾನಿಗಳ ಕುಟುಂಬದಲ್ಲಿ ಬಂದ ಜಗದೀಶ್ ,ವಿದ್ಯಾ ದಾನದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು.
ವಿದ್ಯಾರ್ಥಿಗಳ ನಡುವ ಅತ್ಯಂತ ಆತ್ಮೀಯರಾಗಿ ಹೆಸರು ಮಾಡಿದವರು.

ಜಗದಿಶ್ ನಮ್ಮ ಜೊತೆ ಈಗ ಇಲ್ಲ ಎಂದು ನಂಬುವುದೇ ಅಸಾಧ್ಯ.
ಜಗದೀಶ್ ಅ‌ವರ ಆತ್ಮಕ್ಕೆ ಚಿರಶಾಂತಿಯನ್ನ ಭಗವಂತ ನೀಡಲಿ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...