ತ್ರಯಂಬಕೇಶ್ವರ
ಬ್ರಹ್ಮಗಿರಿಯಲ್ಲಿ ಗೌತಮ ಮುನಿಗಳು ಪತ್ನಿ ಅಹಲ್ಯೆಯೊಂದಿಗೆ ಆಶ್ರಮದಲ್ಲಿದ್ದರು.ತಪಸ್ಸು,ಯಾಗ ,ಯಜ್ಞ ಗಳು ಯಥೇಚ್ಛ ನಡೆಯುತ್ತಿದ್ದವು.
ಆ ದೇಶದಲ್ಲಿ ಇದ್ದಕ್ಕಿದ್ದಂತೆ ಮಳೆ ಹೋಗಿ ಬರಗಾಲ ಬಂದಿತು. ಕುಡಿಯುವ ನೀರಿಗೆ ತೊಂದರೆಯಾಯಿತು. ಗೌತಮರು ವರುಣನನ್ನ ಪ್ರಾರ್ಥಿಸಿದರು.
ಆಗ, ವರುಣನು ನಾನು ಭಗವದಾಧೀನ. ಆತನ ಅಪ್ಪಣರಯಿಲ್ಲದೇ
ಏನೂ ಮಾಡೆನು ಎಂದು ತನ್ನ ಅಸಹಾಯಕತೆಯನ್ನ ವ್ಯಕ್ತಪಡಿಸುವನು.
ಗೌತಮರ ಕಷ್ಅವನ್ನ ರ್ಥಮಾಡಿಕೊಂಡ ವರುಣದೇವನು ನೀವು ಒಂದು ಕೊಳ ನರ್ಮಾಣ ಮಾಡಿರಿ.ಅದನ್ನು ತುಂಬುತ್ತೇನೆ.ಮತ್ತೆಂದೂ ಅದು ಬರಿದಾಗದು ಹಾಗೆ ಇರುತ್ತದೆ.ಅದು ಗೌತಮತರ್ಥ ಎಂದು ಪ್ರಸಿದ್ಧವಾಗುತ್ತದೆ ಎಂದು ಹೇಳಿದನು. ಗೌತಮರು ನರ್ಮಿಸಿದ ಕೊಳದಲ್ಲಿ ವರುಣ ಮಳೆ ಸುರಿಸಿ ತುಂಬುವಂತೆ ಮಾಡಿದ. ಕ್ರಮೇಣ ಅಲ್ಲಿನ ನೀರಿನ ಆಸರೆಗೆಂದು ಬೇರೆ ಬೇರೆ ಋಷಿ ದಂಪತಿಗಳು ಆ ಪ್ರದೇಶದ ಸುತ್ತ ವಾಸಮಾಡತೊಡಗಿದರು.
ವಿಚಿತ್ರ ಸಂಗತಿಯೆಂದರೆ ಗೌತಮರ ಮಡದಿ ಅಹಲ್ಯೆ ತಮ್ಮ ಶಿಷ್ಯರಿಗೆ ನೀರು ತರಲು ಹೇಳುತ್ತಾಳೆ. ಶಿಷ್ಯರು ಹೋದಾಗ ಬೇರೆ ಋಷಿಪತ್ನಿಯರು ಆಕ್ಷೇಪಿಸುತ್ತಾರೆ. ಕೊನೆಗೆ ಈ ಸಂಗತಿ ಯಾವ ಹಂತ ತಲುಪುತ್ತೆದೆಂದರೆ
ಗೌತಮರನ್ನೇ ಇಲ್ಲಿಂದ ಹೊರಗೆಹೋಗುವ ಉಪಾಯವನ್ನ ಆ ಅನ್ಯ ಋಷಿ ಸಂಸಾರಗಳು ಯೋಚಿಸುತ್ತವೆ.ಗಣಪತಿಯನ್ನ ಬರಮಾಡಿಕೊಂಡು ಸಮಸ್ಯೆ ಬಿನ್ನವಿಸುವರು. ಆಶ್ರಯಕೊಟ್ಟವರಿಗೇ ಅಪಕಾರ ಮಾಡುತ್ತಿದ್ದೀರಿ ಎನ್ನುತ್ತಾನೆ.
ಇದರಿಂದ ಗೌತಮರಿಗೇ ಒಳಿತಾಗುವುದೆಂದು ಉಪಾಯಹೂಡುವನು.
ತನ್ನ ಗಣದ ರ್ವನನ್ನು ಹಸುವಾಗಿಮಾಡಿ ಗೌತಮರ ಆಶ್ರಮದತ್ತ ಕಳಿಸುತ್ತಾನೆ. ಅದನ್ನು ಕಂಡ ಗೌತಮರಯ ಹುಲ್ಲನ್ನು ಹಸುವಿನೆಡೆಗೆ ಹಾಕುತ್ತಾರೆ.ಅದು ತಾಗಿದ್ದೇ ತಡ ಹಸು ಅಸು ನೀಗುತ್ತದೆ.ಗೋಹತ್ಯಾ ದೋಷ ಬಂತೆಂದು ಗೌತಮರು ವಿಹ್ವಲರಾಗುತ್ತಾರೆ.
ಹೀಗೆ ಪರಿಹಾರದ ಬಗ್ಗೆ ಕೇಳಿದಾಗ ಬ್ರಹ್ಮಗಿರಿಯನ್ನು ಹನ್ನೊಂದು ಸಲ ಪ್ರದಕ್ಷಿಣೆ ಬರಬೇಕು.ಇಲ್ಲಿಗೆ ಗಂಗೆಯನ್ನ ಬರಮಾಡಕೊಂಡು ನಿಮ್ಮ ದೇಹವನ್ನು ಪವಿತ್ರಗೊಳಿಸಿಕೊಳ್ಳಬೇಕೆಂದು ಹೇಳಲಾಗುತ್ತದೆ.
ಗೌತಮರು ಶಿವನನ್ನು ಪ್ರರ್ಥಿಸುತ್ತಾರೆ.ಶಿವನು ಪ್ರತ್ಯಕ್ಷನಾಗಿ ಮುನಿಗಳ
ಇಷ್ಟರ್ಥ ನೆರವೇರಿಸುತ್ತಾನೆ.ಶಿವನ ಅಣತಿಯಂತೆ ಗಂಗೆ ಅಲ್ಲಿಗೆ ಬಂದು
ಗೌತಮರನನ್ನ ಪವಿತ್ರಗೊಳಿಸುತ್ತಾಳೆ
ಪರಶಿವನು ಇಲ್ಲಿ ಜ್ಯೋತರ್ಲಿಂಗವಾಗಿದ್ದರೆ ತಾನೂ ಇರುವುದಾಗಿ ಗಂಗೆ ತನ್ನ ಇಚ್ಛೆ ವ್ಯಕ್ತಪಡಿಸುವಳು.ಹಾಗೆಂದು ಅಲ್ಲಿ ಪರಶಿವನು ತ್ರಿಮರ್ತಿಗಳ ಅಸ್ತಿತ್ವ
ಸಾರಲು ಲಿಂಗರೂಪದಲ್ಲಿರದೇ ಮೂರು ಗುಂಡುಗಳ ರೂಪದಲ್ಲಿದೆ.
ಹೀಗೆ ತ್ರ್ಯಯಂಬಕೇಶ್ವರನೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಒಂದು ಗುಂಡಿನ ಕೆಳಗಿಂದ ಗಂಗೆ ಹರಿದು ಬರುವುದನ್ನ ಕಾಣಬಹುದು.
ಮಹಾರಾಷ್ಟ್ರದ ನಾಸಿಕ್ ನಿಂದ 28 ಕಿಮೀ ದೂರದಲ್ಲಿ ಅರಣ್ಯ ಪ್ರದೇಶದಲ್ಲಿದೆ. ಆಲಯದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ಚಿತ್ರಗಳನ್ನ ಕೆತ್ತಲಾಗಿದೆ.ಮಹಾಮೃತ್ಯುಂಜಯ ಮಂತ್ರವನ್ನ ಇಲ್ಲಿಗೆ ಬರುವವರೆಲ್ಲ ತಮಗೆ ಅರಿವಾಗದಂತೇ ಜಪಿಸುವರು.
ತ್ರ್ಯಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿರ್ಧನಂ
ರ್ವಾರುಕಮಿವ ಬಂಧನಾನ್ಮೃತ್ಯರ್ಮುಕ್ಷೀಯ ಮಾಮೃತಾತ್.
ಇಲ್ಲಿನ ಅಹಲ್ಯೆ ಗುಹೆಯಲ್ಲಿ 100 ಶಿವಲಿಂಗಗಳನ್ನ ಕೆತ್ತಲಾಗಿದೆ.
ಬ್ರಹ್ಮಗಿರಿಯಲ್ಲಿ ಕೇದಾರೇಶ್ವರ, ಗೌತಮೇಶ್ವರ, ತ್ರಿಸಂಧ್ಯಾದೇವಿ,ಭುವನೇಶ್ವರಿ, ದತ್ತಾತ್ರೇಯ, ಕಾಲಭೈರವ ದೇವಾಲಗಳಿವೆ.ಬ್ರಹ್ಮಗಿರಿಯೇ ಗೋದಾವರಿ ಉಗಮಸ್ಥಾನ.ಇಲ್ಲಿ ಹನ್ನೆರೆಉ ರ್ಷಕ್ಕೊಮ್ಮೆ ಕುಂಭಮೇಳ ಜರುಗುತ್ತದೆ.
ಪ್ರತೀರ್ಷ ಕರ್ತೀಕ ಹುಣ್ಣಿಮೆ ರಥೋತ್ಸವ ನಡೆಯುತ್ತದೆ.
ಶ್ರೀಶಂಕರಾಚರ್ಯರು ತ್ರಯಂಬಕೇಶ್ವರನನ್ನ ಸ್ತುತಿಸಿದ ಶ್ಲೋಕ
ಸಹ್ಯಾದ್ರಿಪಾಶ್ವೇಪಿ ತಟೇ ರಮಂತಂ
ಗೋದಾವರೀತೀರ ಪವಿತ್ರದೇಶೇ |
ಯದ್ರ್ಶನಾತ್ಪಾತಕ ಜಾತ ನಾಶಃ ,ಪ್ರಜಾಯತೇ ತ್ರಯಂಬಕೆಮೀಶನೀಡೆ||
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.