ಶಿವಮೊಗ್ಗ:
ಯಾವುದೇ ಪುಸ್ತಕ ಮಳಿಗೆಗಳು ಕೇವಲ ಮಳಿಗೆಗಳಾಗಿ ಉಳಿಯಬಾರದು.ಅದು ಸದಾ ಕ್ರಿಯಾಶೀಲ ಚಟುವಟಿಕೆಗಳ, ಬಿಜ್ಞಾಸುಗಳ ಚರ್ಚಾತಾಣವಾಗಬೇಕು. ಸಾಹಿತಿಗಳು, ಚಿಂತಕರ ಸಂವಾದ ಕೇಂದ್ರಗಳಾಗಬೇಕು.ಆಗ ಮಾತ್ರ ಆ ಮಳಿಗೆಯಲ್ಲಿನ ಆತ್ಮ ಜಾಗೃತವಾಗುತ್ತದೆ.ಪದೇ ಪದೇ ಸೇರಬೇಕು ಎಂಬ ತವಕಉಂಟಾಗುತ್ತದೆ ಎಂದು ಹೆಸರಾಂತ ವಾಗ್ಮಿ ಗುರುರಾಜ ಕರ್ಜಗಿ ಬಣ್ಣಿಸಿದರು.
ಶಿವಮೊಗ್ಗದ ಡಯಾನಾ ಬುಕ್ಗ್ಯಾಲರಿಗೆ ಭೇಟಿ ನೀಡಿ, ಅಲ್ಲಿಯ ಚಟುವಟಿಕೆಗಳನ್ನು ಗಮನಿಸಿ, ಮೆಚ್ಚುಗೆಯ ಮಾತುಗಳನ್ನಾಗಡಿದ ಅವರು, ತಾಯಿ ಶಾರದೆಯ ದೇವಾಲಯ. ಇಲ್ಲಿರುವ ಪ್ರತೀ ಪುಸ್ತಕಗಳು ಸಹ ಆ ದೇವಿಯನ್ನು ಪೂಜಿಸುವ ಸಾಮಗ್ರಿಗಳು.ಈ ಪೂಜೆ ನಿತ್ಯ ನಿರಂತರವಾಗಿರಲಿ ಎಂದು ಆಶಿಸಿದರು.
ವಿಶಾಲ ಶ್ರೇಣಿಯ ಈ ಪುಸ್ತಕ ಮಳಿಗೆ ಓದುಗರಲ್ಲಿಆಸಕ್ತಿಯನ್ನು ಉದ್ದೀಪನಗೊಳಿಸುವಂತಿದೆ ಎಂದಅವರು, ಇಂದುಜನರಲ್ಲಿ ಮೊಬೈಲ್ ಬಳಕೆ ತನ್ನ ಪರಾಕಾಷ್ಟೆಯನ್ನುತಲುಪಿಯಾಗಿದೆ. ಹೀಗಾಗಿ ಮುಂದಿನ ದಿನಮಾನಗಳಲ್ಲಿ ಪುಸ್ತಕ ಅನಿವಾರ್ಯ-ಅಗತ್ಯವಾಗಬಹುದು.ಆಗ ಖಂಡಿತವಾಗಿಯೂಓದುಗರ ಸಂಖ್ಯೆ ಹೆಚ್ಚುತ್ತದೆ ಎಂದರು.
ತಮ್ಮಜನಪ್ರಿಯ ಕರುಣಾಳು ಬಾ ಬೆಳಕೆ ಪುಸ್ತಕ ಮಾರಾಟದಿಂದ ಬರುವ ಹಣವನ್ನು ಸ್ವಂತಕ್ಕೆ ಬಳಸುತ್ತಿಲ್ಲ. ಬದಲಾಗಿ ಅದನ್ನು ಟ್ರಸ್ಟ್ ಗೆ ನೀಡಿ ಆ ಮೂಲಕ ಸಮಾಜಮುಖಿಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದ ಅವರು, ಪ್ರಸ್ತುತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕುರಿತಾಗಿ ಪುಸ್ತಕ ರಚನೆಯಲ್ಲಿತೊಡಗಿಕೊಂಡಿರುವುದಾಗಿ ಹೇಳಿದರು.
ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಡಯಾನಾ ಬುಕ್ಗ್ಯಾಲರಿಯಲ್ಲಿ ಕಳೆದ ಅವರು, ಕೆಲವು ಪುಸ್ತಕಗಳನ್ನು ಖರೀದಿಸಿದರು.
ಈ ಸಂದರ್ಭದಲ್ಲಿ ಡಯಾನಾ ಬುಕ್ಗ್ಯಾಲರಿಯ ಮಾಲೀಕರಾದ ಕೆ. ಎಲ್. ಈಶ್ವರ್ (ಡಯಾನಾ), ಕಮಲಾ ನೆಹರೂಕಾಲೇಜಿನ ಪ್ರಾಚಾರ್ಯ ಡಾ. ಹೆಚ್. ಎಸ್. ನಾಗಭೂಷಣ ಸೇರಿದಂತೆ ಅನೇಕ ಓದುಗರು, ಡಯಾನಾ ಬುಕ್ಗ್ಯಾಲರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.