Wednesday, October 2, 2024
Wednesday, October 2, 2024

ಗಿಲ್ ಗಿಲಿಗಿಲಿ ಬ್ಯಾಟಿಂಗ್ದ್ವಿಶತಕದಿಂದ ಭಾರತಕ್ಕೆ ಗೆಲುವು

Date:

ಕ್ರಿಕೆಟ್ ಅನಿಶ್ಚಿತ ಆಟ ಎನ್ನುವುದನ್ನು ಪ್ರತೀ ಪಂದ್ಯವೂ ಸಾಬೀತು ಮಾಡುತ್ತಿರುತ್ತದೆ. ಶಕ್ತ ನ್ಯೂಜಿಲೆಂಡ್ ತಂಡದ ಎದುರು ಭಾರತ ತಂಡ ಸಮವಾಗಿ ಸೆಟೆದು ನಿಂತರೂ ಏಕದಿನ ಕ್ರಿಕೆಟ್ ನಲ್ಲಿ ಮೊದಲ ಪಂದ್ಯ ದಲ್ಲಿ ಭಾರತ ಗೆಲುವಿನಿಂದ ಬೀಗಿದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅತ್ಯಂತ ರೋಚಕ ಕ್ಷಣಗಳನ್ನು ಕ್ರಿಕೆಟ್ ಪ್ರೇಮಿಗಳಿಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ಆಟಗಾರರು ಸೃಷ್ಟಿಸಿದ್ದರು.

ಭಾರತ ಟಾಸ್ಕ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು‌. 50 ಓವರ್ 8 ವಿಕೆಟ್ ನಷ್ಟಕ್ಕೆ 349 ರನ್ ಕಲೆ ಹಾಕಿತು. ನ್ಯೂಜಿಲೆಂಡ್ ಗೆ ಅತ್ಯಂತ ಕಠಿಣವೇನೂ ಆಗಿರಲಿಲ್ಲ. ಹಾಗೆಯೇ ಅವರು ಹೋರಾಟ ಪ್ರದರ್ಶಿಸಿದರು.

ಭಾರತ ಆರಂಭಿಕ ಬ್ಯಾಟರ್ ಗಿಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿದರು.
ರೋಹಿತ್ 34 ರನ್ ಗಳಿಗೆ ಔಟಾದರು. ನಂತರ ಗಿಲ್ ಅವರಿಗೆ ಕೊಹ್ಲಿ ಸಾತ್ ನೀಡಿದರು. ಕೇವಲ 8 ರನ್ ಗಳಿಗೆ ಅವರು ಪೆವಿಲಿಯನ್ ಗೆ ಮರಳಿದರು. ಆಮೇಲೆ ಇಶಾನ್ ಸೇರಿದರು. 5 ರನ್ ಗಳಿಸಿ ಔಟಾದರು.

ಸೂರ್ಯಕುಮಾರ್ 31 ರನ್ ಗಳಿಸಿದರು. ಆಗ 4 ವಿಕೆಟ್ ಗೆ 175 ರನ್ ಗಳಾಗಿದ್ದವು. ಹಾರ್ದಿಕ್ ಒಂದಿಷ್ಟು ಚುರುಕು ರನ್ ಗಳಿಸಿದರು. 28ಕ್ಕೆ ಔಟಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಗಿಲ್ ಮಾತ್ರ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಬೃಹತ್ ಮೊತ್ತ ಕಟ್ಟುವ ಸಾಹಸಿಯಂತೆ ತೋರಿದರು.

19ನೇ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 87 ಎಸೆತಗಳಲ್ಲಿ ಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು ‌.

ಗಿಲ್ ಎಷ್ಟು ಆಕ್ರಮಣಕಾರಿ ಎಂದರೆ ಸತತ ಮೂರು ಸಿಕ್ಸರ್ ಗಳನ್ನ ಬಾರಿಸಿ ನ್ಯೂಜಿಲೆಂಡ್ ಬೌಲರ್ ಗಳನ್ನು ಕಂಗೆಡಿಸಿದರು. ರೋಚಕ ಬ್ಯಾಟಿಂಗ್ ನಿಂದ 208 ರನ್ ಗಳಿಸಿದರು.
ಅದರಲ್ಲಿ 19 ಬೌಂಡರಿಗಳು 9 ಸಿಕ್ಸರ್ ಗಳಿದ್ದವು.

ನ್ಯೂಜಿಲೆಂಡ್ ತಂಡ ಆತ್ಮವಿಶ್ವಾಸದಿಂದಲೇ ಬೃಹತ್ ಮೊತ್ತವನ್ನ ಎದುರಿಸಿ ಕಣಕ್ಕಿಳಿಯಿತು. ಆದರೆ ಸಿರಾಜ್ ಅವರ ಬೌಲಿಂಗ್ ದಾಳಿಗೆ ಬಸವಳಿದು 131 ರನ್ ಗಳಾಗುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡಿತು.

ಬ್ರೇಸ್ ವೇಲ್ ಮಾತ್ರ 140 ರನ್ ಗಳಿಸಿ ಪ್ರತಿರೋಧ ತೋರಿದರು. ಸ್ಯಾಂಟ್ನರ್ ಜೊತೆಯಾಟದಲ್ಲಿ ಮತ್ತೆ ಸುಧಾರಿಸಿಕೊಳ್ಳುವ ಸ್ಥೈರ್ಯ ತೋರಿದರು. ಅವರಿರ್ವರ ಜೊತೆಯಾಟ ನೋಡಿದರೆ ಪಂದ್ಯ ನ್ಯೂಜಿಲೆಂಡ್ ಪರ ವಾಲುತ್ತಿರುವಂತೆ ಕಂಡು ಬಂದಿತು.

ಕುಲದೀಪ್ ,ಶಮಿ, ಶಾರ್ದುಲ್, ಹಾರ್ದಿಕ್, ಸಿರಾಜ್, ಒಟ್ಟು ಬೌಲಿಂಗ್ ಎದುರು 337 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಭಾರತಕ್ಕೆ 12 ರನ್ ಗಳ ಅಂತರದ ರೋಚಕ ಜಯ ಲಭಿಸಿತು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುಂದಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...