Thursday, February 5, 2026
Thursday, February 5, 2026

ಪಾಕ್ ನಲ್ಲಿ ಬಿಗಡಾಯಿಸಿದ ನಾಗರಿಕರ ದೈನಿಕ ಜೀವನ

Date:

ಒಂದಲ್ಲ ಒಂದು ಕಾರಣದಿಂದ ಇಷ್ಟೂದಿನ ಪಾಕಿಸ್ತಾನ ಅಂತಾರಾಷ್ಟ್ರೀಯ ವಾಗಿ ಸುದ್ದಿಯಲ್ಲಿತ್ತು.
ಹೆಚ್ಚಾಗಿ ಸುದ್ದಿಗಳು ರಾಜಕಾರಣ,ಉಗ್ರವಾದಿಗಳು ಇತ್ಯಾದಿ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದವು.

ಈಗ ಅವೆಲ್ಲವೂ ಮೀರಿದ ಮನಕಲಕುವ ಸಮಾಚಾರಗಳು ಬರುತ್ತಿವೆ. ಒಂದು ದೇಶ ತನ್ನ ಆರ್ಥಿಕತೆಯ ಸ್ವಾಸ್ಥ್ಯ ಕಾಪಾಡಿಕೊಳ್ಳದಿದ್ದರೆ ಅದರ ಕೆಟ್ಟ ಪರಿಣಾಮ ಆ ದೇಶದ ನಾಗರಿಕರ ಮೇಲೇ ಬೀಳುತ್ತದೆ.
ಈಗ ಅಲ್ಲಿ ಆಹಾರದ ದರ ಏರುತ್ತಿದೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಪೆಟ್ರೋಲ್, ಡಿಸೆಲ್ ದರಗಳು ಗಗನಕ್ಕೇರಿವೆ. ಹಣದುಬ್ಬರ ಶೇ 25 ಆಗಿದೆ. ನಮ್ಮ ನೆರೆಯ ಶ್ರೀಲಂಕಾ ದಲ್ಲಿ ಈ ರೀತಿ ಹಾಹಾಕಾರವುಂಟಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚೀಲ ಗೋದಿ ಹಿಟ್ಟಿಗಾಗಿ ನಾಕಾರು ಜನ ಕೈ ಕೈ ಮಿಲಾಯಿಸಿ ಹಿಟ್ಟಿಗಾಗಿ ಹೊಡೆದಾಡುವ ವಿಡಿಯೊ ಸರಿದಾಡುತ್ತಿದೆ.
ಕರಾಚಿಯಲ್ಲಿ ಒಂದು ಕೆಜಿ ಗೋಧಿ ಹಿಟ್ಟಿಗೆ
₹ 160. ಬಲೂಚಿಸ್ತಾನದಲ್ಲಿ 20 ಕೆಜಿ ಗೆ ₹ 3100.

ಇನ್ನೂ ಮೂರು ತಿಂಗಳು ಇದೇ ರೀತಿ ಪಾಕ್ ಅನುಭವಿಸಬೇಕಿದೆ.
ಆಪತ್ತಿನಲ್ಲಿ ನೆರವಿಗೆ ಸೌದಿ ಅರೆರಬಿಯಾ ಹತ್ತು ಶತಕೋಟಿ ಡಾಲರ್ ನೆರವು ಘೋಷಿಸಿದೆ.
ಪಾಕ್ ಪ್ರಧಾನಿ ಶಹಬಾಜ್ ಅವರ ರಾಜತಾಂತ್ರಿಕ ನಡಿಗೆ
ಮುಂದೆ ಹೇಗಿದೆ ಎಂಬುದೇ ವಿಶ್ವ ಕಾದು ನೋಡಬೇಕಿದೆ.

ಇವನ್ನೆಲ್ಲ ನೋಡಿದರೆ ನಮ್ಮ ಭಾರತ ಎಷ್ಟು ಸದೃಢ ಎನ್ನುವ ಅಭಿಮಾನ ತೃಪ್ತಿ ಮೂಡುತ್ತದೆ. ಆದರೂ ನಾವು ಅತ್ಯಂತ ಜಾಗರೂಕವಾಗಿ ನಮ್ಮ ಯೋಜನೆಗಳು, ಸಂಪನ್ಮೂಲಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...