Thursday, February 5, 2026
Thursday, February 5, 2026

ಎಂ.ಎಲ್. ಹಳ್ಳಿಯಲ್ಲಿ ಸಾಗರ ತಾಲ್ಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ

Date:

ಸಾಗರ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಸಾಗರದ ಎಂ. ಎಲ್. ಹಳ್ಳಿ ಯಲ್ಲಿರುವ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯ ಆವರಣದಲ್ಲಿ ಸಾಗರ ತಾಲ್ಲೂಕು 11 ನೆಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6 ರಂದು ಬೆಳಿಗ್ಗೆ ಯಿಂದ ಸಂಭ್ರಮದಿಂದ ನಡೆಯಿತು.

ಸಾಗರ ತಾಲ್ಲೂಕು ಕಾನಲೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕು. ರಕ್ಷಿತಾ ಪಿ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಾಗವಹಿಸಿದ್ದರು. ಯುವ ಸಾಹಿತಿ ಪೃಥ್ವಿ ಎಸ್. ಸಾಗರ ಅವರು ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು, ಕಸಾಸಾಂ ವೇದಿಕೆ, ಕಜಾಪ ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಿ. ಮಂಜುನಾಥ ಅವರು ಮಾತನಾಡಿದರು.

ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಅಧ್ಯಕ್ಷರಾದ ದೇವರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಕಸ್ತೂರಿ ಸಾಗರ್ ಆಶಯ ಮಾತುಗಳನ್ನು ಆಡಿದರು.

ದತ್ತಾತ್ರೇಯ ಭಟ್, ವಿ. ಟಿ. ಸ್ವಾಮಿ, ಜಿ. ಪರಮೇಶ್ವರಪ್ಪ, ಮಹಾಬಲೇಶ್ವರ, ಲಕ್ಷ್ಮಣನಾಯ್ಕ, ಕಜಾಪ ತಾಲ್ಲೂಕು ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ, ಕೆ. ಜಗನ್ನಾಥ ಕೆ., ಭಾರತ ಸೇವಾದಲದ ಅಧ್ಯಕ್ಷರಾದ ಉಮೇಶ್ ಹಿರೇನೆಲ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಂದ್ರಶೇಖರ ಸಿರಿವಂತೆ, ಸತ್ಯನಾರಾಯಣ, ಸರೋಜಮ್ಮ, ಸಿದ್ದಾನಾಯ್ಕ, ಡಿ. ಎಸ್. ಸ್ಮಿತಾ ದಯಾನಂದ, ಸಹನಾ ಜಿ. ಕೆ., ಶಿವಾನಂದ, ಸಹನಾ ಶಿವಯೋಗಿ, ರಾಜು ಜನ್ನೆಹಕ್ಲು, ನಟರಾಜ್, ಪತ್ರಕರ್ತ ನಾಗೇಶ್ ಸೇರಿದಂತೆ ಹಲವರು ಅನೇಕ ಕಾರ್ಯಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...