Thursday, February 5, 2026
Thursday, February 5, 2026

ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದ ಬಂದಿಗಳಿಗೆ ಪೈಂಟಿಂಗ್ ತರಬೇತಿ

Date:

ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳಿಗೆ ಏಷಿಯನ್ ಪೈಂಟ್ ಕಂಪನಿ ವತಿಯಿಂದ ಕೆಲ ದಿನಗಳ ಹಿಂದೆ ಏರ್ಪಡಿಸಲಾಗಿದ್ದ ಪೈಂಟಿಂಗ್ ತರಬೇತಿಯಲ್ಲಿ ಸುಮಾರು 18 ಮಂದಿ ಪರಿಣಿತ ಹೊಂದಿದ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿ ಅಧೀಕ್ಷಕ ಶ್ರೀಶೈಲ ಎಸ್ ಮೇಟಿ ಪ್ರಮಾಣ ಪತ್ರವನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಶ್ರೀಶೈಲ ಎಸ್.ಮೇಟಿ ಏಷಿಯನ್ ಪೈಂಟ್ ಕಂಪನಿ ವತಿಯಿಂದ ಕಾರಾಬಂಧಿಗಳಿಗೆ ಉಚಿತವಾಗಿ ವಾಲ್‌ಪೈಂಟಿಂಗ್, ಡೀಸೈನ್ ಸೇರಿದಂತೆ ವಿವಿಧ ರೀತಿಯ ತರಬೇತಿ ನೀಡುವುದರ ಜೊತೆಗೆ ಬಂಧಿಗಳು ಬಿಡುಗಡೆ ನಂತರ ಕೆಲಸದ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿರುವು ದು ಸಂತಸದ ವಿಷಯ ಎಂದರು.

ಸರ್ಕಾರದ ವತಿಯಿಂದ ಕಾರಾಬಂಧಿಗಳಿಗೆ ದೊರೆಯುವ ವಿವಿಧ ತರಬೇತಿಯನ್ನು ನೀಡುವ ಮೂಲಕ ವೃತ್ತಿ ಬದುಕಿಗೆ ಅನುಕೂಲ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಬಂಧಿಗಳು ತರಬೇತಿಯಲ್ಲಿ ಪಾಲ್ಗೊಂಡು ಪರಿಣಿತಿ ಹೊಂದಿ ನಂತರದ ಜೀವನದಲ್ಲಿ ದುಡಿಮೆಯ ದಾರಿಕಂಡುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರ್ಟ ಆಫ್ ಲಿವಿಂಗ್‌ನ ಪ್ರವೀಣ್, ಏಷಿಯನ್ ಪೇಯಿಂಟ್ ಕಂಪನಿಯ ಸುನೀಲ್, ಜೈಲರ್ ಎಂ.ಕೆ.ನೆಲಧರಿ ಹಾಗೂ ಕಾರಾಬಂಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...