ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುಗ೯ ಜಿಲ್ಲಾ ಶಾಖೆಯು ಕೋವಿಡ್ ಗೆ ತುತ್ತಾದ ಪತ್ರಕರ್ತರಾದ ವಿನಯ ಮತ್ತು ಬಸವರಾಜ ಕೋಟಿ ಸ್ಮರಣಾರ್ಥವಾಗಿ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ 5 ಜಿಲ್ಲೆಗಳ ಪತ್ರಕರ್ತರ ಕ್ರಿಕೆಟ್ ಟೀಮ್ ಭಾಗವಹಿಸಿತ್ತು. ಪಂದ್ಯಾವಳಿಯ ಫೈನಲ್ ನಲ್ಲಿ ಕೆಯುಡಬ್ಲ್ಯೂಜೆ ಶಿವಮೊಗ್ಗ ಜಿಲ್ಲಾ ಶಾಖೆಯ ಪತ್ರಕರ್ತರ ತಂಡವು ಜಯಭೇರಿ ಬಾರಿಸಿ, ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಸಂಘಟನಾತ್ಮಕ ಉತ್ಸಾಹವನ್ನು ಇಮ್ಮಡಿಸಿದೆ.
ಪಂದ್ಯಾವಳಿಯಲ್ಲಿ
25 ಸಾವಿರ ರೂ.ನಗದು ಮತ್ತು ಟ್ರೋಫಿಯನ್ನು ಗೆದ್ದ ಶಿವಮೊಗ್ಗ ಪತ್ರಕರ್ತರ ತಂಡವನ್ನು ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷ ರಾದ ಕೆ.ವಿ. ಶಿವಕುಮಾರ್ ಹಾಗೂ ಪದಾಧಿಕಾರಿಗಳು, ಕಾಯ೯ಕಾರಿ ಸಮಿತಿ ಸದಸ್ಯರು ಅಭಿನಂದಿಸಿ, ಶುಭ ಕೋರಿದ್ದಾರೆ.