Monday, August 3, 2026
Monday, August 3, 2026

ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ಕೆ ಲೈವ್ ನ್ಯೂಸ್ ನ ರಂಜನ್

Date:

ಚಿತ್ರದುರ್ಗದಲ್ಲಿ ನಡೆಯುತ್ತಿರುವ 6 ಜಿಲ್ಲೆಗಳ ಪತ್ರಕರ್ತ ತಂಡಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ತಂಡವು ಸೆಮಿಫೈನಲ್ ಪ್ರವೇಶಿಸಿದೆ.

ಎರಡನೇ ದಿನದ ಇಂದಿನ ಆರಂಭಿಕ ಪಂದ್ಯಾವಳಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಎ ತಂಡದ ವಿರುದ್ಧ ರೋಚಕ ಆಟವಾಡಿದ ಶಿವಮೊಗ್ಗ ತಂಡವು 22 ರನ್ ಗಳಿಂದ ಗೆಲುವು ಸಾಧಿಸಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.

ಟಾಸ್ ಗೆದ್ದ ಚಿತ್ರದುರ್ಗ ಎ ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಪತ್ರಕರ್ತರ ತಂಡ ನಿಗದಿತ ಐದು ಓವರ್ ಗಳಲ್ಲಿ 65 ರನ್ ಗಳನ್ನು ಗಳಿಸಿತು.

ತಂಡದ ನವೀನ್ , ಅಮೋಘ 35 ರನ್ ಗಳನ್ನು, ಲೋಹಿತ್ 28 ಗಳೊಂದಿಗೆ ಎದುರಾಳಿ ತಂಡದ ಬೌಲರ್ ಗಳನ್ನು ದಂಡಿಸಿದರು.

65 ರನ್ ಗಳ ಬೆನ್ನತ್ತಿದ ಚಿತ್ರದುರ್ಗ ಪತ್ರಕರ್ತರ ತಂಡವು ಶಿವಮೊಗ್ಗ ಪತ್ರಕರ್ತರ ತಂಡದ ಆಕಾಶ್ ಅವರ ಮಾರಕ ಬೌಲಿಂಗ್ ಮುಂದೆ ನೆಲಕಚ್ಚಿತು. ಆಕಾಶ್ ಒಂದೆ ಓವರ್ ನಲ್ಲೆ 3 ವಿಕೆಟ್ ಗಳನ್ನು ಬಲಿ ತೆಗೆದುಕೊಳ್ಳುವ ಮುಖಾಂತರ ಚಿತ್ರದುರ್ಗ ತಂಡವನ್ನು ಸೋಲಿನ ದವಡೆಗೆ ನೂಕಿದರು.

ಕೆ ಲೈವ್ ನ್ಯೂಸ್ ನ ರಂಜನ್ ಅವರು ಒಂದೇ ಕೈ ಯಲ್ಲಿ ಚೆಂಡನ್ನು ಕ್ಯಾಚ್ ಹಿಡಿದಿದ್ದಾರೆ.

ಅಂತಿಮವಾಗಿ ಚಿತ್ರದುರ್ಗ ಪತ್ರಕರ್ತರ ತಂಡವು 5 ಓವರ್ ಗಳಲ್ಲಿ 43 ಗಳಿಗೆ ಸೀಮಿತವಾಗಿ‌ ಶಿವಮೊಗ್ಗ ಪತ್ರಕರ್ತರ ತಂಡದ ಮುಂದೆ ಶರಣಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ರದುರ್ಗ ಶಾಖೆಯು ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯವಹಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...